ರಾಷ್ಟ್ರಪತಿ ಕೋವಿಂದ್ಗೆ ಪಾಕಿಸ್ತಾನ ಏರೋಸ್ಪೇಸ್ನಲ್ಲಿ ನಿರ್ಬಂಧ
ನವದೆಹಲಿ, ಸೆಪ್ಟೆಂಬರ್ 7: ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಯಾವುದೇ ಕಾರಣಕ್ಕೂ ಅವರಿಗೆ ಪಾಕಿಸ್ತಾನದ ವೈಮಾನಿಕ ಪ್ರದೇಶಕ್ಕೆ ಬರಲು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ರಾಮನಾಥ್ ಕೋವಿಂದ್ ಅವರು ಸೆಪ್ಟೆಂಬರ್ 9ರಿಂದ ಸ್ವಿಡ್ಜರ್ಲ್ಯಾಂಡ್, ಸ್ಲೋವೇನಿಯಾ , ಐಲ್ಯಾಂಡ್ಗಳಿಗೆ ಪ್ರವಾಸ ಹೊರಟಿದ್ದು, ಪಾಕ್ ಏರೋಸ್ಪೇಸ್ ಬಳಕೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿ ತಿಳಿಸಿದ್ದಾರೆ.
ಪಿಒಕೆ ಕುರಿತ ಕೇಂದ್ರದ ಯಾವುದೇ ನಿರ್ಧಾರಕ್ಕೂ ನಾವು ಬದ್ಧ: ಬಿಪಿನ್ ರಾವತ್
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿ 370 ರದ್ದುಗೊಳಿಸಿದ ಬಳಿಕ ಪಾಕಿಸ್ತಾನವು ಭಾರತದ ಮೇಲಿನ ಕೋಪದಿಂದಾಗಿ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಏರೋಸ್ಪೇಸ್ನಲ್ಲಿ ಭಾರತದ ವಿಮಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಅದರ ಜೊತೆಗೆ ರೈಲು ಸೇವೆಗಳನ್ನು ಕೂಡ ಸ್ಥಗಿತಗೊಳಿಸಿದ್ದರು.
ಅದರ ಜೊತೆಗೆ ಭಾರತವು ಜಮ್ಮು ಕಾಶ್ಮೀರದ ಕುರಿತು ತೆಗೆದುಕೊಂಡಿರುವ ನಿರ್ಧಾರದಿಂದ ಪಾಕಿಸ್ತಾನ ಈ ರೀತಿ ನಡೆದುಕೊಳ್ಳುತ್ತಿದೆ. ಆದರೆ ಜಮ್ಮು ಕಾಶ್ಮೀರದ ವಿಚಾರ ಭಾರತದ ಆಂತರಿಕ ವಿಷಯ ಇದರಲ್ಲಿ ಪಾಕಿಸ್ತಾನ ತಲೆ ಹಾಕುವ ಅಗತ್ಯವಿಲ್ಲ ಎಂದು ಕೂಡ ಖುರೇಷಿ ಹೇಳಿದ್ದಾರೆ.