ಆರ್ಬಿಐ ಗವರ್ನರ್ ಆಗಿ ದಾಸ್ ನೇಮಕ: ಚಿದಂಬರಂ ವಿರೋಧ
ನವದೆಹಲಿ,ಡಿಸೆಂಬರ್ 12: ಶಕ್ತಿಕಾಂತ್ ದಾಸ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನೂತನ ಗವರ್ನರ್ ಆಗಿ ನೇಮಕ ಮಾಡಿರುವುದಕ್ಕೆ ಮಾಜಿ ಸಚಿವ ಪಿ ಚಿದಂಬರಂ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ
ಯಾರ ಹೆಸರನ್ನೂ ಬಳಸದೇ ಈ ಕುರಿತು ಟ್ವೀಟ್ ಮಾಡಿರುವ ಅವರು, ಕೇಂದ್ರ ಸರ್ಕಾರವು ನೋಟು ಅಪನಗದೀಕರಣಕ್ಕೆ ಬೆಂಬಲ ಸೂಚಿಸಿದ್ದ ಇಬ್ಬರನ್ನು ಎರಡು ಉನ್ನತ ಹುದ್ದೆಗಳಿಗೆ ನೇಮಕ ಮಾಡಿದೆ. ಮೋದಿ ಸರ್ಕಾರದ ನಿಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ಊರ್ಜಿತ್ ಪಟೇಲ್ ರಾಜೀನಾಮೆ : ರೂಪಾಯಿ ಮೌಲ್ಯ ಕುಸಿತ
ದೇಶದ ಜನತೆ ಏನು ಬೇಕಾದರೂ ತಿಳಿದುಕೊಳ್ಳಲಿ ಇದಕ್ಕೆಲ್ಲಾ ನಾವು ತಲೆ ಕಡಿಸಿಕೊಳ್ಳುವುದಿಲ್ಲ, ನಾವು ಏನು ಮಾಡಬೇಕು ಎಂದುಕೊಂಡಿದ್ದೇವೋ ಅದನ್ನೇ ಮಾಡುತ್ತೇವೆ ಎಂದು ಹೇಳಲು ಕೇಂದ್ರ ಪ್ರಯತ್ನಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸಧ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯು ತನ್ನ ನಡೆಯನ್ನು ಬದಲಿಸುವಂತೆ ಕಾಣುತ್ತಿಲ್ಲ ಆದರೂ ನಾವು ಕಾಯುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಅವರನ್ನು ಮಂಗಳವಾರ ನೇಮಕ ಮಾಡಲಾಗಿದೆ.ಊರ್ಜಿತ್ ಪಟೇಲ್ ಆರ್ಬಿಐ ಗವರ್ನರ್ ಸ್ಥಾನಕ್ಕೆ ಡಿಸೆಂಬರ್ 10ರಂದು ರಾಜೀನಾಮೆ ನೀಡಿದ್ದರು.
ಆರ್ ಬಿಐ ಗವರ್ನರ್ ಸ್ಥಾನ ತೊರೆದ ಊರ್ಜಿತ್ ಪಟೇಲ್
2015-17ರವರೆಗೂ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಶಕ್ತಿಕಾಂತ್ ದಾಸ್ ಆರ್ಬಿಐನ 25ನೇ ಗವರ್ನರ್ ಆಗಿ ಸಧಿಕಾರ ವಹಿಸಿಕೊಳ್ಳಲಿದ್ದಾರೆ.
Government has appointed two persons who vocally supported demonetisation to two key posts. What does it say about the Modi government?
— P. Chidambaram (@PChidambaram_IN) December 12, 2018
Is government telling the people of the country 'we don't care what you think, we will do exactly as we please'?
ದೇಶದ ಹಣಕಾಸು ಆಯೋಗದ ಸದಸ್ಯರಾಗಿರುವ ದಾಸ್, ಕಂದಾಯ ಇಲಾಖೆಯಿಂದ ವಿತ್ತ ಸಚಿವಾಲಯದ ಆರ್ಥಿಕ ವ್ಯವಹಾರಗಳ ಜವಾಬ್ದಾರಿ ವಹಿಸಿದರು. 2016ರ ನೋಟು ಅಪನಗದೀಕರಣ ರದ್ದತಿ ನಂತರ ಬೆಳವಣಿಗೆಯಲ್ಲಿ ದಾಸ್ ಸುದ್ದಿಯಲ್ಲಿದ್ದರು.