ಭಾಷೆ ಬಗೆಗಿನ ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಮೆಚ್ಚುಗೆ!
ಬೆಂಗಳೂರು, ಮೇ 21: ಕಳೆದ ತಿಂಗಳು ಹಿಂದಿ ಚಿತ್ರನಟ ಅಜಯ್ ದೇವಗನ್ ಅವರ ಹಿಂದಿ ರಾಷ್ಟ್ರ ಭಾಷೆ ಹೇಳಿಕೆಗೆ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ತಿರುಗೇಟು ಕೊಟ್ಟ ನಂತರ ಆರಂಭವಾದ ಭಾಷಾ ವಿವಾದ ತಣ್ಣಗಾದ ಮೇಲೆ ಪ್ರಧಾನಿ ಮೋದಿ ಅವರ ಭಾಷೆ ಬಗೆಗಿನ ಹೇಳಿಕೆಯನ್ನು ಕಿಚ್ಚ ಸುದೀಪ್ ಅವರು ಸ್ವಾಗತಿಸಿದ್ದಾರೆ.
"ನಾನು ಯಾವುದೇ ಗಲಭೆ ಅಥವಾ ಯಾವುದೇ ರೀತಿಯ ಚರ್ಚೆಯನ್ನು ಪ್ರಾರಂಭಿಸಲು ಉದ್ದೇಶಿಸಿಲ್ಲ, ಇದು ಅಜೆಂಡಾ ಇಲ್ಲದೆ ಸಂಭವಿಸಿದ್ದು, ಇದು ನಾನು ವ್ಯಕ್ತಪಡಿಸಿದ ಅಭಿಪ್ರಾಯವಾಗಿದೆ. ಪ್ರಧಾನಿಯವರ ಬಾಯಿಂದ ಕೆಲವು ಸಾಲುಗಳು ಹೊರಬಿದ್ದಿರುವುದು ಗೌರವ ಮತ್ತು ಸೌಭಾಗ್ಯವಾಗಿದೆ. ತಮ್ಮ ಭಾಷೆಯನ್ನು ಗೌರವ ಮತ್ತು ಗೌರವದಿಂದ ಕಾಣುವ ಪ್ರತಿಯೊಬ್ಬರಿಗೂ ಅವರು ಈ ರೀತಿ ಮಾತನಾಡುವುದನ್ನು ನೋಡುವುದು ಹೆಮ್ಮೆಯ ವಿಷಯ," ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
"ಇದು ಎಲ್ಲಾ ಭಾಷೆಗಳಿಗೆ ಆತ್ಮೀಯ ಸ್ವಾಗತ. ನಾನು ಕೇವಲ ಕನ್ನಡವನ್ನು ಪ್ರತಿನಿಧಿಸುತ್ತಿಲ್ಲ, ನಾನು ಕನ್ನಡದಲ್ಲಿ ಮಾತನಾಡುತ್ತಿದ್ದೇನೆ. ಪ್ರಧಾನಿಯವರ ಈ ಕೆಲವು ಹೇಳಿಕೆಗಳಿಂದ ಇಂದು ಪ್ರತಿಯೊಬ್ಬರ ಮಾತೃಭಾಷೆಯನ್ನು ಗೌರವಿಸಲಾಗಿದೆ. ನಾವು ನರೇಂದ್ರ ಮೋದಿ ಅವರನ್ನು ಕೇವಲ ರಾಜಕಾರಣಿಯಾಗಿ ನೋಡುವುದಿಲ್ಲ, ನಾವು ಅವರನ್ನು ನಾಯಕರಾಗಿಯೂ ನೋಡುತ್ತೇವೆ," ಎಂದು ಅವರು ಹೇಳಿದರು.
ಭಾರತದ ಭಾಷಾ ವೈವಿಧ್ಯತೆಯ ಪ್ರತಿಪಾದಕರ ಅಸಮಾಧಾನಕ್ಕೆ ಕಾರಣವಾಗಿದ್ದ ಅಜಯ್ ದೇವಗನ್ ಅವರೊಂದಿಗೆ ಕಳೆದ ತಿಂಗಳು ಕಿಚ್ಚ ಸುದೀಪ್ ಅವರ ವಿನಿಮಯವು - "ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ" ಎಂದು ಹೇಳಿಕೊಂಡಿದ್ದರು. ಇದು ಹೊಸ ಸುತ್ತಿನ ಚರ್ಚೆಯನ್ನು ಹುಟ್ಟುಹಾಕಿತ್ತು. "ನಾನು ಯಾರನ್ನೂ ವಿವಾದಕ್ಕೆ ತಗೆದುಕೊಳ್ಳಲು ಪ್ರಯತ್ನಿಸುತ್ತಿಲ್ಲ, ಕೆಲವು ವಿಷಯಗಳಿಗೆ ಬಂದಾಗ ನನ್ನ ಅಭಿಪ್ರಾಯಗಳನ್ನು ಹೇಳುವ ಹಕ್ಕು ನನಗಿದೆ". ಅಭದ್ರತೆಯ ಕಾರಣದಿಂದ ಹಿಂದಿ ಪರ ಬಂದಿದ್ದಾರೆ ಎಂಬ ಸಲಹೆಗಳನ್ನು ಅವರು ತಿರಸ್ಕರಿಸಿದರು.
ಭಾರತೀಯ ಭಾಷೆಯನ್ನು ಪೂಜ್ಯನೀಯವೆಂದು ಪರಿಗಣಿಸುತ್ತದೆ
ವಿವಾದದ ಬಗ್ಗೆ ತೂಗಿದ ಪ್ರಧಾನಿ ಮೋದಿ, ಬಿಜೆಪಿಯು ಪ್ರತಿಯೊಂದು ಭಾರತೀಯ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಕಾಣುತ್ತೇವೆ ಮತ್ತು ಪ್ರತಿಯೊಂದು ಭಾರತೀಯ ಭಾಷೆಯನ್ನು ಪೂಜ್ಯನೀಯವೆಂದು ಪರಿಗಣಿಸುತ್ತದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಟ ಸುದೀಪ್ ಅವರು ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ದೇಶದ ಜನರನ್ನು ನಿರಂತರವಾಗಿ ಎಚ್ಚರಿಸಬೇಕು
ಮೋದಿ "ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡುವುದು ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಬಿಜೆಪಿಯು ಭಾರತೀಯ ಭಾಷೆಗಳನ್ನು ಭಾರತೀಯತೆಯ ಆತ್ಮ ಮತ್ತು ದೇಶಕ್ಕೆ ಉತ್ತಮ ಭವಿಷ್ಯದ ಸೇತುವೆ ಎಂದು ಪರಿಗಣಿಸುತ್ತದೆ". "ನಾನು ಇದನ್ನು ವಿಶೇಷವಾಗಿ ಪ್ರಸ್ತಾಪಿಸಲು ಬಯಸುತ್ತೇನೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಭಾಷೆಯ ಆಧಾರದ ಮೇಲೆ ಹೊಸ ವಿವಾದಗಳನ್ನು ಸೃಷ್ಟಿಸುವ ಪ್ರಯತ್ನಗಳು ನಡೆದಿವೆ. ನಾವು ಈ ಬಗ್ಗೆ ದೇಶದ ಜನರನ್ನು ನಿರಂತರವಾಗಿ ಎಚ್ಚರಿಸಬೇಕು" ಎಂದು ಪ್ರಧಾನಿ ಹೇಳಿದ್ದರು.
ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ ಎಂದಿದ್ದ ಕಂಗನಾ
ಹಿಂದಿ ರಾಷ್ಟ್ರ ಭಾಷೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು, ಇದು ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ಭಾರಿ ವಿವಾದದ ಹಿನ್ನೆಲೆಯ ಚರ್ಚೆಯನ್ನು ಹುಟ್ಟು ಹಾಕಿತ್ತು. ಹಲವು ರಾಜಕಾರಣಿಗಳು ಹಿಂದಿ ಪರ ಬ್ಯಾಟಿಂಗ್ ಬೀಸಿದ್ದರು. ಕನ್ನಡ, ತಮಿಳು ಮುಂತಾದ ರಾಜ್ಯಗಳ ಭಾಷೆಗಳಲ್ಲಿ ಇದು ವಿವಾದಾತ್ಮಕ ಹೇಳಿಕೆ ಎಂದು ಎಲ್ಲರು ಖಂಡಿಸಿದ್ದರು, ಮುಂದುವರಿದು ಹಿಂದಿ ನಟಿ ಕಂಗನಾ ರಣಾವತ್ ಹಿಂದಿಗಿಂತ ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ ಎಂದು ಹುರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ಈ ಹಿನ್ನೆಲೆಯಲ್ಲಿ ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಇದು ಟೀಕೆಗೆ ಒಳಗಾಗಿತ್ತು.
ತಮಿಳುನಾಡು ಸಚಿವರೊಬ್ಬರು ಹಿಂದಿ ಮಾತನಾಡುವವರು ನಮ್ಮಲ್ಲಿ (ತಮಿಳುನಾಡಿನಲ್ಲಿ) ಪಾನೀಪುರಿ ಮಾರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಮಾತನ್ನು ಹಲವರು ಖಂಡಿಸಿದ್ದರು. ಈ ಸ್ವತಃ ಮೋದಿ ಅವರೇ ಭಾಷೆ ಬಗೆಗಿನ ತಮ್ಮ ನಿಲುವಿನಿಂದ ವಿವಾದವನ್ನು ಆರಿಸುವ ಪ್ರಯತ್ನ ಮಾಡಿದ್ದಾರೆ.
ಅಮಿತ್ ಶಾಗೆ ಪಾಠ ಮಾಡಬೇಕಿದೆ
ಅಮಿತ್ ಶಾ ಅವರಿಗೆ ಈ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಪಾಠ ಮಾಡಬೇಕಾಗಿದೆ ಎಂದು ಸಿದ್ದರಾಮಯ್ಯ ಹಿಂದಿ ಹೇರಿಕೆ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು.
‘ಕಾಂಗ್ರೆಸ್ ಭಿನ್ನ ಧರ್ಮ, ಭಿನ್ನಭಾಷೆ, ಬಹು ಸಂಸ್ಕೃತಿಯನ್ನು ಒಳಗೊಂಡ ಬಹುತ್ವವನ್ನು ಒಪ್ಪಿ, ಅಪ್ಪಿಕೊಂಡ ಪಕ್ಷವಾಗಿದೆ. ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಹೇರುವುದು ಜನವಿರೋಧಿ ಮಾತ್ರವಲ್ಲ ಸಂವಿಧಾನ ವಿರೋಧಿ ಕೂಡ ಆಗಿದೆ. ಬಿಜೆಪಿ ನಾಯಕರ ಕುತಂತ್ರದ ರಾಜಕಾರಣವನ್ನು ಸ್ವಾಭಿಮಾನಿ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ. ನಮ್ಮೆದುರಿಗೆ ಗೋಕಾಕ್ ಹೋರಾಟದ ಮಾದರಿ ಇದೆ' ಎಂದು ಟ್ವೀಟ್ ಮಾಡಿದ್ದಾರೆ. ‘ಧರ್ಮ ರಾಜಕಾರಣದ ಹಸು ಬರಡಾಗುತ್ತಿರುವುದನ್ನು ಕಂಡ ಬಿಜೆಪಿ ನಾಯಕರು ಈಗ ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದ್ದಾರೆ. ಈ ಸ್ವಾರ್ಥ ರಾಜಕಾರಣಕ್ಕೆ ಸ್ವಾಭಿಮಾನಿ ಕನ್ನಡಿಗರು ತಕ್ಕ ಉತ್ತರ ನೀಡಲಿದ್ದಾರೆ.
ಭಾಷೆ, ಪ್ರದೇಶಗಳ ನಮ್ಮ ನೀತಿ-ನಿಲುವು ‘ಜಯಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ...' ಎನ್ನುವ ಕುವೆಂಪು ಅವರ ಕವಿ ನುಡಿಯಿಂದ ಪ್ರೇರಿತವಾದುದು. ಕನ್ನಡ ಭಾಷೆ ನಮಗೆ ರಾಜಕಾರಣದ ಆಯುಧ ಅಲ್ಲ, ಇದು ನಮ್ಮ ಜೀವದ ಉಸಿರು' ಎಂದು ಸಿದ್ದರಾಮಯ್ಯ ಹೇಳಿದ್ದರು.