ಸೈಬರ್ ಭದ್ರತೆ ಇಲ್ಲದೆ ರಾಷ್ಟ್ರ ಪ್ರಗತಿ ಸಾಧ್ಯವಿಲ್ಲ: ಅಮಿತ್ ಶಾ
ನವದೆಹಲಿ, ಜೂ. 20: ಸೈಬರ್ ಭದ್ರತೆಯು ರಾಷ್ಟ್ರೀಯ ಭದ್ರತೆಗೆ ಅವಿಭಾಜ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅದನ್ನು ಬಲಪಡಿಸಲು ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಸೈಬರ್ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ (ಸೈಬರ್ ಅಪ್ರಧ್ ಸೇ ಆಜಾದಿ - ಆಜಾದಿ ಕಾ ಅಮೃತ್ ಮಹೋತ್ಸವ) ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸಾರ್ವಜನಿಕ ಜಾಗೃತಿಯ ಅಗತ್ಯವನ್ನು ಒತ್ತಿ ಹೇಳಿದರು.
ಖೇಲೋ ಇಂಡಿಯಾ ಉದ್ಘಾಟಿಸಲಿದ್ದಾರೆ ಅಮಿತ್ ಶಾ
"ಇಂದು ಸೈಬರ್ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಡಿಜಿಟಲ್ ಯುಗ, ಸೈಬರ್ ಸುರಕ್ಷಿತ ಭಾರತವನ್ನು ಖಾತ್ರಿಪಡಿಸಿಕೊಳ್ಳದೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ಸೈಬರ್ ಅಪರಾಧಗಳ ವರದಿ 2012 ರಲ್ಲಿ 3,377 ರಿಂದ 2020 ರಲ್ಲಿ 50,000ಕ್ಕೆ ಏರಿದೆ. ಭಾರತದಲ್ಲಿ ಅತ್ಯಂತ ಸುರಕ್ಷಿತ ಸೈಬರ್ ವಾತಾವರಣವನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ" ಎಂದರು.
"ಪ್ರಧಾನಿ ಮೋದಿಯವರ ಉಪಕ್ರಮದಿಂದ ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದೆ. ತಂತ್ರಜ್ಞಾನದ ಬಳಕೆಯನ್ನು ಎಲ್ಲಾ ಹಂತಗಳಿಗೆ ಕೊಂಡೊಯ್ಯಲಾಗಿದೆ. ಆದರೆ ಸೈಬರ್ ಭದ್ರತೆಯನ್ನು ಖಚಿತಪಡಿಸಿಕೊಳ್ಳದಿದ್ದರೆ, ಈ ಶಕ್ತಿಯು ನಮಗೆ ದೊಡ್ಡ ಸವಾಲಾಗಬಹುದು" ಎಂದು ತಿಳಿಸಿದರು.
"ರಾಷ್ಟ್ರದ ಅಭಿವೃದ್ಧಿಗೆ ಸೈಬರ್ ಸುರಕ್ಷಿತ ಭಾರತದ ನಿರ್ಮಾಣ ಎಷ್ಟು ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇಂದಿನ ಯುಗದಲ್ಲಿ ಸೈಬರ್ ಭದ್ರತೆ ಇಲ್ಲದೆ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ. ಇದು ಪ್ರಧಾನಿ ಮೋದಿಯವರ ದೂರದೃಷ್ಟಿಯಾಗಿದೆ. ಪ್ರತಿಯೊಬ್ಬ ಭಾರತೀಯನೂ ತಂತ್ರಜ್ಞಾನ ಮತ್ತು ಅಂತರ್ಜಾಲದ ಮೂಲಕ ತಮ್ಮನ್ನು ತಾವು ಸಬಲಗೊಳಿಸಿಕೊಳ್ಳಬೇಕು" ಎಂದು ಕರೆ ನೀಡಿದರು.
ಕಾಶ್ಮೀರದಲ್ಲಿ ಸರಣಿ ಹತ್ಯೆ: ಅಮಿತ್ ಶಾ ಮಹತ್ವದ ಸಭೆ
"ಡಿಜಿಟಲ್ ಇಂಡಿಯಾ ಕಾರ್ಯಕ್ರಮದಿಂದಾಗಿ ನಮ್ಮ ಜೀವನದಲ್ಲಿ ಸಬಲೀಕರಣ ಮತ್ತು ಸಕಾರಾತ್ಮಕ ಬದಲಾವಣೆಗಳು ಸಂಭವಿಸಿದ್ದು, ಭಾರತದ ಭೀಮ್ ಅಪ್ಲಿಕೇಶನ್ ಹೇಗೆ ಜಾಗತಿಕವಾಗಿದೆ" ಎಂದು ಹೇಳಿದರು.
ದೇಶದಲ್ಲಿ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ ಜೂನ್ 8 ರಿಂದ 17 ರವರೆಗೆ "ಆಜಾದಿ ಕಾ ಅಮೃತ್ ಮಹೋತ್ಸವ" ಬ್ಯಾನರ್ ಅಡಿಯಲ್ಲಿ ಸೈಬರ್ ಅಪರಾಧಗಳು, ಸೈಬರ್ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಸಮ್ಮೇಳನದ ಪೂರ್ವಭಾವಿಯಾಗಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಮನ್ವಯದೊಂದಿಗೆ ಎಂಎಚ್ಎನಲ್ಲಿರುವ ಸೈಬರ್ ನೈರ್ಮಲ್ಯ, ತಡೆಗಟ್ಟುವಿಕೆ ಕುರಿತು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 75 ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಸಮ್ಮೇಳನದಲ್ಲಿ ಕೇಂದ್ರ ಈಶಾನ್ಯ ಪ್ರದೇಶದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ, ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು, ಸಂಸ್ಕೃತಿ ಸಚಿವಾಲಯ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.