ಪ್ರಧಾನಮಂತ್ರಿ ಭೇಟಿ ಬಳಿಕ ಯೂ ಟರ್ನ್ ಹೊಡೆದರಾ ಮಹಾರಾಷ್ಟ್ರ ಸಿಎಂ?
ನವದೆಹಲಿ,
ಫೆಬ್ರವರಿ.21:
ಪೌರತ್ವ
ತಿದ್ದುಪಡಿ
ಕಾಯ್ದೆಯಿಂದ
ಯಾರೊಬ್ಬರೂ
ಆತಂಕ
ಪಡುವ
ಅಗತ್ಯವಿಲ್ಲ
ಎಂದು
ಮಹಾರಾಷ್ಟ್ರ
ಮುಖ್ಯಮಂತ್ರಿ
ಉದ್ಧವ್
ಠಾಕ್ರೆ
ತಿಳಿಸಿದ್ದಾರೆ.
ಸಿಎಎ
ಮತ್ತು
ಎನ್
ಆರ್
ಸಿ
ಕುರಿತು
ನನ್ನ
ನಿಲುವು
ಏನು
ಎಂಬುದನ್ನು
ಈಗಾಗಲೇ
ಸ್ಪಷ್ಟಪಡಿಸಿದ್ದೇನೆ
ಎಂದು
ಅವರು
ಹೇಳಿದರು.
ನವದೆಹಲಿಯಲ್ಲಿ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಅವರನ್ನು
ಭೇಟಿ
ಮಾಡಿದ
ಮಹಾರಾಷ್ಟ್ರ
ಸಿಎಂ
ಉದ್ಧವ್
ಠಾಕ್ರೆ,
ಪೌರತ್ವ
ತಿದ್ದುಪಡಿ
ಕಾಯ್ದೆ,
ರಾಷ್ಟ್ರೀಯ
ನಾಗರಿಕ
ನೋಂದಣಿ
ಮತ್ತು
ರಾಷ್ಟ್ರೀಯ
ಜನಸಂಖ್ಯಾ
ನೋಂದಣಿ
ಕುರಿತು
ಚರ್ಚೆ
ನಡೆಸಿದರು.
ಈ
ವೇಳೆ
ಉದ್ಧವ್
ಠಾಕ್ರೆ
ಪುತ್ರ
ಆದಿತ್ಯ
ಠಾಕ್ರೆ
ಕೂಡಾ
ಜೊತೆಗಿದ್ದರು.
ಸಿಎಎ-ಎನ್
ಆರ್
ಸಿ
ವಿಚಾರದಲ್ಲಿ
ಮಹಾರಾಷ್ಚ್ರ
ಜನತೆಗೆ
ಮುಖ್ಯಮಂತ್ರಿ
ಅಭಯ
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಭೇಟಿ
ಬಳಿಕ
ಮಾತನಾಡಿದ
ಮುಖ್ಯಮಂತ್ರಿ
ಉದ್ಧವ್
ಠಾಕ್ರೆ,
ಮಹಾರಾಷ್ಟ್ರದಲ್ಲಿ
ರಾಷ್ಟ್ರೀಯ
ಜನಸಂಖ್ಯಾ
ನೋಂದಣಿಗೆ
ಯಾವುದೇ
ಅಡ್ಡಿಯಿಲ್ಲ.
ಎನ್
ಪಿ
ಆರ್
ನಿಂದ
ಯಾರನ್ನೂ
ರಾಜ್ಯದಿಂದ
ಹೊರ
ಹಾಕಲು
ಆಗುವುದಿಲ್ಲ
ಎಂದರು.
ಪೌರತ್ವ
ತಿದ್ದುಪಡಿ
ಕಾಯ್ದೆ
ಬಗ್ಗೆ
ಭಯ
ಬೇಡ:
ಕೇಂದ್ರ
ಸರ್ಕಾರ
ಜಾರಿಗೊಳಿಸಿರುವ
ಸಿಎಎ
ಕುರಿತು
ಮಹಾರಾಷ್ಟ್ರ
ಸಿಎಂ
ಉದ್ಧವ್
ಠಾಕ್ರೆ
ಪರೋಕ್ಷವಾಗಿ
ಬೆಂಬಲ
ವ್ಯಕ್ತಪಡಿಸಿದರು.
ಪೌರತ್ವ
ತಿದ್ದುಪಡಿ
ಕಾಯ್ದೆ
ಬಗ್ಗೆ
ಯಾರೂ
ಭಯ
ಪಡುವ
ಅಗತ್ಯವಿಲ್ಲ
ಎಂದು
ಹೇಳಿದರು.
ಇನ್ನು
ಪ್ರಧಾನಮಂತ್ರಿ
ನರೇಂದ್ರ
ಮೋದಿ
ಭೇಟಿ
ಬಳಿಕ
ಎಐಸಿಸಿ
ಮಧ್ಯಂತರ
ಅಧ್ಯಕ್ಷೆ
ಸೋನಿಯಾ
ಗಾಂಧಿ,
ಬಿಜೆಪಿ
ಹಿರಿಯ
ಮುಖಂಡ
ಎಲ್
ಕೆ
ಅಡ್ವಾಣಿಯವರನ್ನು
ಭೇಟಿ
ಮಾಡಿ
ಚರ್ಚೆ
ನಡೆಸಿದರು.
ಇನ್ನು,
ಪ್ರಧಾನಿ
ಮೋದಿ
ಮತ್ತು
ಮಹಾರಾಷ್ಟ್ರ
ಸಿಎಂ
ಉದ್ಧವ್
ಠಾಕ್ರೆಯರದ್ದು
ಸೌಜನ್ಯಯುತ
ಭೇಟಿಯಾಗಿದ್ದು,
ಇದಕ್ಕೆ
ಯಾವುದೇ
ರಾಜಕೀಯ
ಉದ್ದೇಶವಿಲ್ಲ
ಎಂದು
ಶಿವಸೇನೆ
ಮುಖಂಡ
ಸಂಜಯ್
ರಾವತ್
ತಿಳಿಸಿದ್ದಾರೆ.