'ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧ ಇಲ್ಲ"
ನವದೆಹಲಿ, ಅ.29: ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಗಳಿಗೆ ಸಂಪೂರ್ಣ ನಿಷೇಧ ಹೇರುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಪಟಾಕಿಯಿಂದ ಆಗುವ ಅನಾಹುತಗಳ ಬಗ್ಗೆ ಜನ ಜಾಗೃತಿ ಮೂಡಿಸಲು ನಿರ್ದೇಶಿಸಲಾಗಿದೆ.
ಪಟಾಕಿಗೆ
ಸಂಬಂಧಿಸಿ
2005ರ
ಆದೇಶವನ್ನೇ
ಪಾಲಿಸುವಂತೆ
ಕೇಂದ್ರ
ಸರ್ಕಾರಕ್ಕೆ
ಸುಪ್ರೀಂಕೋರ್ಟ್
ದ್ವಿಸದಸ್ಯ
ನ್ಯಾಯಪೀಠ
ಸೂಚಿಸಿದೆ.
ಅಕ್ಟೋಬರ್
31ರಿಂದ
ನವೆಂಬರ್
12ರವರೆಗೆ
ಕಡ್ಡಾಯವಾಗಿ
ಸಾಧ್ಯವಾಗುವ
ಎಲ್ಲೆಡೆ
ಪಟಾಕಿ
ಅನಾಹುತ,
ಶಬ್ದ
ಹಾಗೂ
ವಾಯು
ಮಾಲಿನ್ಯದ
ಬಗ್ಗೆ
ಜಾಗೃತಿ
ಮೂಡಿಸಲು
ಜಾಹೀರಾತು
ಪ್ರಕಟಿಸುವಂತೆ
ಕೇಂದ್ರ
ಸರ್ಕಾರಕ್ಕೆ
ಆದೇಶಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಹಾಗೂ ನ್ಯಾಯಮೂರ್ತಿ ಅರುಣ್ ಮಿಶ್ರಾರಿದ್ದ ದ್ವಿಸದಸ್ಯ ಪೀಠ ಪಟಾಕಿ ಮಾರಾಟಕ್ಕೆ ನಿರ್ಬಂಧ ಅಥವಾ ನಿಷೇಧ ತಕ್ಷಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಾಲಿನ್ಯ ನಿಯಂತ್ರಣಕ್ಕಾಗಿ ಬೇರೆ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ಎಂದು ಸ್ಪಷ್ಟಪಡಿಸಿದೆ.
2005ರ ಆದೇಶವನ್ನು ಪರಿಣಾಮಕಾರಿಯಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಪಟಾಕಿಗೆ ನಿರ್ಬಂಧ ವಿಧಿಸಿದ್ದರೂ ಪಟಾಕಿ ದುರಂತಗಳ ಬಗ್ಗೆ ವರದಿ ಬಂದಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಸರ್ಕಾರವನ್ನು ನ್ಯಾಯಪೀಠ ತರಾಟೆ ತೆಗೆದುಕೊಂಡಿತು.