ನಿರ್ಭಯಾ ಅಪರಾಧಿಗಳಿಗೆ ಗಲ್ಲು ಖಚಿತವಾದ ಮೇಲೆ ಅವರ ಮನಸ್ಥಿತಿ ಹೇಗಿತ್ತು?
ನವದೆಹಲಿ, ಮಾರ್ಚ್ 20: ನಿರ್ಭಯಾ ಅಪರಾಧಿಗಳು ತಮ್ಮನ್ನು ಶುಕ್ರವಾರ ಗಲ್ಲು ಶಿಕ್ಷೆಗೆ ಒಳಪಡಿಸುವುದು ಖಚಿತವಾಗುತ್ತಿದ್ದಂತೆ, ತಮ್ಮ ದೇಹಕ್ಕೆ ತೊಂದರೆ ಮಾಡಿಕೊಳ್ಳಲು ಆರಂಭಿಸಿದ್ದರು.
ಗುರುವಾರ ಸಂಜೆಯ ಟೀ ಕುಡಿಯುವುದನ್ನು ನಿಲ್ಲಿಸಿದ್ದರು. ತಿಹಾರ್ ಜೈಲಿನ ಅಧಿಕಾರಿಗಳು ನಿರ್ಭಯಾ ಅಪರಾಧಿಗಳ ಗಲ್ಲು ಶಿಕ್ಷೆಯ ಬಗ್ಗೆ ಅಂತಿಮ ಸಭೆಯನ್ನು ನಡೆಸಿದ್ದರು.
ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಲಯದ ಡೆತ್ ವಾರೆಂಟ್ನಂತೆ ಶುಕ್ರವಾರ ಮುಂಜಾನೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ.
ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಅಕ್ಷಯ್ ಕುಮಾರ್ ನನ್ನು ಗಲ್ಲಿಗೇರಿಸಲಾಯಿತು.
ಕೊನೆಯ ಹಂತದಲ್ಲಿ ಮರಣದಂಡನೆ ಶಿಕ್ಷೆಯನ್ನು ಪುನರ್ ಪರಿಶೀಲಿಸಬೇಕು ಎಂದು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯೂ ವಜಾಗೊಂಡಿತ್ತು.
ಎಲ್ಲಾ
ಅಪರಾಧಿಗಳ
ಕ್ಷಮಾಧಾನ
ಅರ್ಜಿಯನ್ನೂ
ರಾಷ್ಟ್ರಪತಿಗಳು
ತಿರಸ್ಕರಿಸಿದ್ದರು.
ಇದಾದ
ಬಳಿಕ
ಈ
ನಾಲ್ವರು
ಅತ್ಯಾಚಾರಿಗಳಿಗೆ
ಭಯ
ಆರಂಭವಾಗಿದೆ.
ಕೂತಲ್ಲಿ
ಕೂರುತ್ತಿರಲಿಲ್ಲ.
ಅಳುತ್ತಿದ್ದರು
ಒಬ್ಬರೊನ್ನಬ್ಬರು
ದೂಶಿಸುತ್ತಿದ್ದರು.
ಹೀಗಾಗಿ
ಈ
ನಾಲ್ವರನ್ನು
ಪ್ರತ್ಯೇಕ
ಕೊಠಡಿಗೆ
ಶಿಫ್ಟ್
ಮಾಡಲಾಗಿತ್ತು.
ದೆಹಲಿಯ ತಿಹಾರ್ ಜೈಲಿನ ಅಧಿಕಾರಿಗಳು ಈ ನಾಲ್ವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಇಂದು ಬೆಳಗ್ಗೆ 5.30ಕ್ಕೆ ಅವರನ್ನು ಗಲ್ಲಿಗೇರಿಸಲಿದ್ದು, 8 ಗಂಟೆಗೆ ದೇಹವನ್ನು ಡಿಡಿಯು ಆಸ್ಪತ್ರೆಗೆ ಕಳುಹಿಸಲಾಗುತ್ತದೆ.