ಗಾಂಧಿ ಕುಟುಂಬದ ರಾಜೀನಾಮೆ ಸುದ್ದಿ; ಮಾ.14ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ
ನವದೆಹಲಿ, ಮಾರ್ಚ್ 13: ಇಂದು (ಭಾನುವಾರ) ನಡೆಯಬೇಕಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಮರು ನಿಗದಿಪಡಿಸಲಾಗಿದ್ದು, ಇದೀಗ ನಾಳೆ (ಸೋಮವಾರ) ಬೆಳಗ್ಗೆ 10 ಗಂಟೆಗೆ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಚರ್ಚೆ ನಡೆಯಲಿದೆ.
ಪಂಚರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಚರ್ಚಿಸಲು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಮುನ್ನ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಎಲ್ಲಾ ಸಂಘಟನಾ ಹುದ್ದೆಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಗಾಂಧಿ ಕುಟುಂಬದ ಸದಸ್ಯರು ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಾರೆ ಎಂಬುದು 'ತಪ್ಪು ಮತ್ತು ಚೇಷ್ಟೆಯ' ವರದಿ ಎಂದು ತಳ್ಳಿಹಾಕಿದ್ದಾರೆ.
ಗಾಂಧಿ ಕುಟುಂಬದ ಸದಸ್ಯರು ಪಕ್ಷದ ಎಲ್ಲಾ ಸಾಂಸ್ಥಿಕ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಾರೆ ಎಂಬ ವರದಿಗಳನ್ನು ಕಾಂಗ್ರೆಸ್ ನಿರಾಕರಿಸಿದ ನಂತರ ಈ ಬೆಳವಣಿಗೆಯಾಗಿದೆ.
ಕಾಂಗ್ರೆಸ್ ಪಂಜಾಬ್ ಅನ್ನು ಎಎಪಿಗೆ ಬಿಟ್ಟುಕೊಟ್ಟಿತು ಮತ್ತು ಇತರ ನಾಲ್ಕು ರಾಜ್ಯಗಳಾದ ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಐದು ರಾಜ್ಯಗಳಲ್ಲಿ ಪಕ್ಷದ ಸೋಲಿನ ನಂತರ ಗಾಂಧಿ ಕುಟುಂಬದ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಸೋನಿಯಾ ಗಾಂಧಿ ಕೆಲ ಸಮಯದಿಂದ ಸಕ್ರಿಯವಾಗಿ ಪ್ರಚಾರ ಮಾಡದಿದ್ದರೂ, ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಕಾಂಗ್ರೆಸ್ನ ಸ್ಟಾರ್ ಪ್ರಚಾರಕರಾಗಿದ್ದರು. ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಸಹೋದರ-ಸಹೋದರಿ ಜೋಡಿಯೂ ಪ್ರಮುಖ ಪಾತ್ರ ವಹಿಸಿದೆ.
ಸಾಂಸ್ಥಿಕ
ಕೂಲಂಕುಷ
ಪರೀಕ್ಷೆಗೆ
ಒತ್ತಾಯಿಸಿದ
G-23
ಭಿನ್ನಮತೀಯ
ನಾಯಕರು
ಉತ್ತರಪ್ರದೇಶದ
ಎಐಸಿಸಿ
ಪ್ರಧಾನ
ಕಾರ್ಯದರ್ಶಿ
ಉಸ್ತುವಾರಿ
ಪ್ರಿಯಾಂಕಾ
ಗಾಂಧಿ
ವಾದ್ರಾ
ನೇತೃತ್ವದ
ಅಬ್ಬರದ
ಪ್ರಚಾರದ
ಹೊರತಾಗಿಯೂ,
ಶತಮಾನದ
ಕಾಂಗ್ರೆಸ್
ಪಕ್ಷವು
403
ವಿಧಾನಸಭಾ
ಸ್ಥಾನಗಳಲ್ಲಿ
ಎರಡನ್ನು
ಮಾತ್ರ
ಗೆಲ್ಲುವಲ್ಲಿ
ಯಶಸ್ವಿಯಾಗಿದೆ
ಮತ್ತು
ಅದರ
ಹೆಚ್ಚಿನ
ಅಭ್ಯರ್ಥಿಗಳು
ಭದ್ರತಾ
ಠೇವಣಿ
ಕಳೆದುಕೊಂಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಸತತ ಎರಡನೇ ಸೋಲನ್ನು ಅನುಭವಿಸಿದ ನಂತರ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸೋನಿಯಾ ಗಾಂಧಿ ಅವರು ಹಂಗಾಮಿ ಅಧ್ಯಕ್ಷರಾಗಿ ಮತ್ತೆ ಪಕ್ಷದ ಅಧಿಕಾರವನ್ನು ವಹಿಸಿಕೊಂಡರು. G-23 ನಾಯಕರ ಬಹಿರಂಗ ವಿರೋಧದ ನಂತರ ಅವರು ಆಗಸ್ಟ್ 2020ರಲ್ಲಿ ತ್ಯಜಿಸಲು ಪ್ರಸ್ತಾಪಿಸಿದರು, ಆದರೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸೋನಿಯಾರನ್ನು ಮುಂದುವರಿಸಲು ನಿರ್ಧರಿಸಿತು.
ಈಗ, G-23 ಭಿನ್ನಮತೀಯ ನಾಯಕರು ಮತ್ತೊಮ್ಮೆ ಗಾಂಧಿ ಕುಟುಂಬದ ನಾಯಕತ್ವವನ್ನು ಪ್ರಶ್ನಿಸಿದ್ದಾರೆ ಮತ್ತು ಸಾಂಸ್ಥಿಕ ಕೂಲಂಕುಷ ಪರೀಕ್ಷೆಗೆ ಒತ್ತಾಯಿಸಿದ್ದಾರೆ. ನಿರ್ಣಾಯಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಮುನ್ನ ತಮ್ಮ ಕಾರ್ಯತಂತ್ರವನ್ನು ಯೋಜಿಸಲು ಈ ನಾಯಕರು ಶುಕ್ರವಾರ ಸಂಜೆ ಗುಲಾಂ ನಬಿ ಆಜಾದ್ ಅವರ ನಿವಾಸದಲ್ಲಿ ಭೇಟಿಯಾಗಿದ್ದರು.