ವಿಮಾನ ದುರಂತಕ್ಕೂ ಮುನ್ನ ಶಿಖಾ ತನ್ನ ಪತಿಗೆ ಕಳಿಸಿದ ಕೊನೆಯ ಸಂದೇಶ ಇದು
ನವದೆಹಲಿ, ಮಾರ್ಚ್ 13: ಇಥಿಯೋಪಿಯಾದಲ್ಲಿ ವಿಮಾನ ದುರಂತದಲ್ಲಿ 157 ಮಂದಿ ಮೃತಪಟ್ಟಿದ್ದರು ಅದರಲ್ಲಿ ಭಾರತದ ಶಿಖಾ ಗರ್ಗ್ ಕೂಡ ಒಬ್ಬರು. ದುರಂತಕ್ಕೂ ಮುನ್ನ ಆಕೆ ಪತಿಗೆ ಕಳುಹಿಸಿದ ಸಂದೇಶ ಹೀಗಿತ್ತು.
ಸಾವಿನ ಕೊನೆಯ ಘಳಿಗೆಯಲ್ಲಿ ವಿಮಾನ ಲ್ಯಾಂಡ್ ಆದ ನಂತರ ಕರೆ ಮಾಡುವುದಾಗಿ ತನ್ನ ಪತಿಗೆ ಸಂದೇಶ ಕಳುಹಿಸಿದ್ದರು ಎಂಬುದು ವರದಿಯಾಗಿದೆ. ನೈರೋಬಿ ಮೂಲದ ಇಥಿಯೋಪಿಯಾ ಏರ್ಲೈನ್ಸ್ನ ವಿಮಾನ ಪತನದಲ್ಲಿ ದುರಂತ ಸಾವಿಗೀಡಾದ ಭಾರತೀಯ ಮೂಲದ ನವ ವಿವಾವಿತೆಯಾಗಿದ್ದರು.
ಇಥಿಯೋಪಿಯಾ : ಭಾರತೀಯ ಮಹಿಳೆ ಕುಟುಂಬ ಸಂಪರ್ಕಿಸಲು ಸುಷ್ಮಾ ಮನವಿ
ಶಿಖಾ ಪರಿಸರ ಇಲಾಖೆಯಲ್ಲಿ ವಿಶ್ವಸಂಸ್ಥೆಯ ಸಲಹೆಗಾರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಾರ್ಷಿಕ ಸಭೆಯಲ್ಲಿ ಭಾಗವಹಿಸಲು ಗಾರ್ಗ್ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಭಟ್ಟಾಚಾರ್ಯ ಎಂಬುವರ ಜತೆಯಲ್ಲಿ ಗಾರ್ಗ್ ಸಪ್ತಪದಿ ತುಳಿದಿದ್ದರು.
ಭಟ್ಟಾಚಾರ್ಯ ಅವರು ಕೂಡ ಗಾರ್ಗ್ ಜತೆಯಲ್ಲೇ ನೈರೋಬಿಗೆ ಪ್ರಯಾಣ ಬೆಳಸಬೇಕಾಗಿತ್ತು. ಆದರೆ, ಕೊನೆ ಘಳಿಗೆಯಲ್ಲಿ ತುರ್ತು ಸಭೆ ಇದ್ದುದ್ದರಿಂದ ದೆಹಲಿಯಲ್ಲಿಯೇ ಉಳಿಯಬೇಕಾಯಿತು. ಬಳಿಕ ಗಾರ್ಗ್ ತನ್ನ ಪತಿಗೆ ನಾನು ವಿಮಾನದಲ್ಲಿದ್ದೇನೆ. ಅದು ಲ್ಯಾಂಡ್ ಆಗುತ್ತಿದ್ದಂತೆ ನಾನು ನಿಮಗೆ ಕರೆ ಮಾಡುತ್ತೇನೆ ಎಂದು ಹೇಳಿದ್ದರು.
ಗಾರ್ಗ್ ಮತ್ತು ಭಟ್ಟಾಚಾರ್ಯರು ದೆಹಲಿಯಲ್ಲೇ ವಾಸವಾಗಿದ್ದರು. ಪತ್ನಿ ನೈರೋಬಿಯಿಂದ ಬಂದ ನಂತರ ವಿಹಾರಕ್ಕೆ ತೆರಳುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಗಾರ್ಗ್ ಭಾರತೀಯ ಪರಿಸರ ಸಚಿವಾಲಯದ ಸಮಾಲೋಚಕರಾಗಿದ್ದು, 2015 ರ ಪ್ಯಾರಿಸ್ ಹವಾಮಾನ ಒಪ್ಪಂದದ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು.
149 ಪ್ರಯಾಣಿಕರಿದ್ದ ಇಥಿಯೋಪಿಯನ್ ಏರ್ ಲೈನ್ಸ್ ನ ವಿಮಾನ ಪತನ
ಭಾನುವಾರ ನಭಕ್ಕೆ ನೆಗೆಯುತ್ತಿದ್ದ ಆರು ನಿಮಿಷದೊಳಗೆ ನೆಲಕ್ಕಪ್ಪಳಿಸಿದ ಇಟಿ 302 ವಿಮಾನ, ಅಡಿಸ್ ಅಬಾಬಾದಿಂದ 60 ಕಿ.ಮೀ. ದೂರದಲ್ಲಿ ಬಿದ್ದು ಭಸ್ಮವಾಗಿದೆ. ಈ ವಿಮಾನದಲ್ಲಿ 35 ರಾಷ್ಟ್ರಗಳ ನಾಗರಿಕರು ಪ್ರಯಾಣಿಸುತ್ತಿದ್ದರು.