ದೆಹಲಿ: ಪೊಲೀಸ್ ದೌರ್ಜನ್ಯ ಖಂಡಿಸಿ ಲಿಖಿತ ಕ್ಷಮೆಯಾಚನೆಗೆ ವೈದ್ಯರ ಪಟ್ಟು
ನವದೆಹಲಿ, ಡಿಸೆಂಬರ್ 29: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಸ್ನಾತಕೋತ್ತರ) ಕೌನ್ಸೆಲಿಂಗ್ನಲ್ಲಿ ವಿಳಂಬ ವಿರೋಧಿಸಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಅಡಿಯಲ್ಲಿ ಭಾರತದಾದ್ಯಂತ ವಸತಿ ವೈದ್ಯರು ತಮ್ಮ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.
ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭೇಟಿ ನಂತರವೂ ಅತೃಪ್ತಿಗೊಂಡ ವೈದ್ಯರು ತಮ್ಮ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ಫೋರ್ಡಾ ವೈದ್ಯರ 12 ಸದಸ್ಯರ ನಿಯೋಗವು ಈ ಹಿಂದೆ ತಮ್ಮ ಬೇಡಿಕೆಗಳ ಕುರಿತು ಕೇಂದ್ರ ಸಚಿವರನ್ನು ಭೇಟಿ ಮಾಡಿತ್ತು.
NEET ವಿಳಂಬ: ದೆಹಲಿ ಪೊಲೀಸ್ ದೌರ್ಜನ್ಯ ಖಂಡಿಸಿ ಡಿ.29ರಂದು ದೇಶಾದ್ಯಂತ ಬಂದ್ ಘೋಷಿಸಿದ ವೈದ್ಯಕೀಯ ಸಮಿತಿ
ಕೇಂದ್ರ ಸಚಿವರ ಭೇಟಿ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ FORDA ಅಧ್ಯಕ್ಷ ಡಾ ಮನೀಶ್, ITO ನಲ್ಲಿ ಸೋಮವಾರದ ವಸತಿ ವೈದ್ಯರ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಲಿಖಿತ ಕ್ಷಮೆಯಾಚಿಸಬೇಕು ಎಂದು ಮಾಧ್ಯಮಗಳಿಗೆ ಒತ್ತಾಯಿಸಿದರು. ಅಲ್ಲದೇ ಎಲ್ಲಾ ವಸತಿ ವೈದ್ಯರ ಸಂಘಗಳ ಭೇಟಿ ನಂತರ ಮುಂದಿನ ಕ್ರಮದ ಬಗ್ಗೆ ಕರೆ ನೀಡಲಾಗುವುದು ಎಂದು ಹೇಳಿದರು.
ಪೊಲೀಸ್ ದೌರ್ಜನ್ಯಕ್ಕೆ ಲಿಖಿತ ಕ್ಷಮಾಪಣೆ:
"ಮುಷ್ಕರ ಇನ್ನೂ ನಡೆಯುತ್ತಿದೆ. ನವದೆಹಲಿಯ ITO ನಲ್ಲಿ ನಿನ್ನೆಯ ವಸತಿ ವೈದ್ಯರ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯಕ್ಕೆ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಲು ನಾವು ಒತ್ತಾಯಿಸುತ್ತೇವೆ. ಎಲ್ಲಾ ಆರ್ಡಿಎಗಳೊಂದಿಗೆ ಸಭೆ ನಂತರದಲ್ಲಿ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಿದ್ದೇವೆ," ಎಂದು ಡಾ ಮನೀಶ್ ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ನಿವಾಸದ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಭಟನಾ ನಿರತ ವೈದ್ಯರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದರು. ವೈದ್ಯರು 'ಪೊಲೀಸ್ ದೌರ್ಜನ್ಯ'ಕ್ಕೆ ಒಳಗಾಗಿದ್ದಾರೆ ಎಂದು ಫೋರ್ಡಾ ಹೇಳಿಕೊಂಡಿದೆ. ಮಂಗಳವಾರದಿಂದ ದೇಶಾದ್ಯಂತ ಎಲ್ಲಾ ಆರೋಗ್ಯ ಸಂಸ್ಥೆಗಳನ್ನು ಬಂದ್ ಮಾಡುವಂತೆ ಕರೆ ನೀಡಿದೆ.
ಡಿ.29ರಂದು ಆರೋಗ್ಯ ಸೇವೆಗಳು ಸಂಪೂರ್ಣ ಸ್ಥಗಿತ:
ಏಮ್ಸ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್, ಫೋರ್ಡಾ ಮತ್ತು ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (ಎಫ್ಎಐಎಂಎ) ಡಿಸೆಂಬರ್ 29ರಂದು ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಕರೆ ನೀಡಿವೆ.
ದೆಹಲಿ ಪ್ರಮುಖ ಆಸ್ಪತ್ರೆಗಳ ವೈದ್ಯರಿಂದ ಬೆಂಬಲ
ರಾಷ್ಟ್ರ ರಾಜಧಾನಿಯಲ್ಲಿ ವೈದ್ಯರ ಪ್ರತಿಭಟನೆಯಿಂದಾಗಿ ನವದೆಹಲಿಯ ಸಫ್ದರ್ಜಂಗ್, ರಾಮ್ ಮನೋಹರ್ ಲೋಹಿಯಾ ಮತ್ತು ಲೇಡಿ ಹಾರ್ಡಿಂಜ್ ಸೇರಿದಂತೆ ಇತರ ಮೂರು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ ಬೀರಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಕಿರಿಯ ವೈದ್ಯರು NEET-PG ಕೌನ್ಸೆಲಿಂಗ್ನಲ್ಲಿನ ವಿಳಂಬದಿಂದ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಿಸದಂತೆ ಸಂಪೂರ್ಣ ಸಮೂಹವನ್ನು ತಡೆಹಿಡಿಯುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಮುಖ ಆಸ್ಪತ್ರೆಗಳ ನಿವಾಸಿ ವೈದ್ಯರು ಸೋಮವಾರ "ಸೇವೆಗಳನ್ನು ತಿರಸ್ಕರಿಸುವ ಸಾಂಕೇತಿಕ ಸೂಚನೆಯಾಗಿ ತಮ್ಮ ಏಪ್ರನ್ (ಲ್ಯಾಬ್ ಕೋಟ್) ಅನ್ನು ಹಿಂದಿರುಗಿಸಿದ್ದಾರೆ," ಎಂದು FORDA ಅಧ್ಯಕ್ಷ ಮನೀಶ್ ನಿಗಮ್ ಹೇಳಿದ್ದರು.
Recommended Video