ಕೃಷಿ ಮಸೂದೆ: ರಾಜ್ಯಸಭೆಯಲ್ಲಿ ಬಿಜೆಪಿಗೆ ಕೈಕೊಟ್ಟ ಬಿಜೆಡಿ
ನವದೆಹಲಿ, ಸೆಪ್ಟೆಂಬರ್ 21: ರಾಜ್ಯಸಭೆಯಲ್ಲಿ ಬಿಜು ಜನತಾದಳ ಪಕ್ಷವು ಕೃಷಿಗೆ ಸಂಬಂಧಿಸಿದ ಎರಡು ಮಸೂದೆಯನ್ನು ವಿರೋಧಿಸುವ ಮೂಲಕ ಆಡಳಿತರೂಢ ಬಿಜೆಪಿ ಹಾಗೂ ಎನ್ಡಿಎಗೆ ಅಶ್ಚರ್ಯ ನೀಡಿದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ ಸಾಕಷ್ಟು ವಿಧೇಯಕಗಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡುತ್ತಿದ್ದ ಬಿಜೆಡಿ, ಈ ಬಾರಿ ಮಾತ್ರ ಕೃಷಿಗೆ ಸಂಬಂಧಿಸಿದ ವಿಧೇಯಕದಲ್ಲಿ ಯಾವುದೇ ಬೆಂಬಲವನ್ನು ನೀಡಿಲ್ಲ. ಲೋಕಸಭೆಯಲ್ಲೂ ವಿಧೇಯಕವನ್ನು ಸದನ ಸಮಿತಿಗೆ ಕಳಿಸಬೇಕು ಎನ್ನುವುದು ಬಿಜೆಪಿ ಸಂಸದರ ವಾದವಾಗಿತ್ತು .
ಕೇಂದ್ರದ ಕೃಷಿ ಮಸೂದೆ ಬಗ್ಗೆ ರೈತರಿಗೇಕೆ ಬೇಸರ: ಇಲ್ಲಿದೆ ಕಾರಣ
ಆದರೆ ಲೋಕಸಭೆಯಲ್ಲಿ ಯಾವುದೇ ಮತದಾನ ನಡೆದಿರಲಿಲ್ಲ. ಹಾಗೆಯೇ ರಾಜ್ಯಸಭೆಯಲ್ಲೂ ಕೂಡ ವಿಧೇಯಕದ ಹಾಲಿ ಕೆಲವು ಅಂಶಗಳಿಗೆ ತನ್ನ ಆಕ್ಷೇಪವಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ರೈತರ ಹಿತದೃಷ್ಟಿಯಿಂದ ಬಿಜೆಡಿ ಇಂತಹ ನಿಲುವು ತಾಳಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಾಗೆಯೇ ಇತ್ತೀಚೆಗೆ ನಡೆದ ಉಪ ಸಭಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಡಿ ಆಡಳಿತಾರೂಢ ಬಿಜೆಪಿಗೆ ಬೆಂಬಲ ನೀಡಲು ನಿರ್ಧರಿಸಿತ್ತು. ಹಾಗೆಯೇ ಬಿಜೆಡಿ ಸಂಸದರಿಗೆ ಈ ಸ್ಥಾನವನ್ನು ನೀಡಲಾಗಿತ್ತು.
ಆದರೆ ಆ ಸಂದರ್ಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನವೀನ್ ಪಟ್ನಾಯಕ್ ಅವರನ್ನು ಸಂಪರ್ಕಸಿ ಸರ್ಕಾರವನ್ನು ಬೆಂಬಲಿಸಲು ಮನವಿ ಮಾಡಿದ್ದರು ಎಂದು ಹೇಳಲಾಗಿದೆ.
ಆದರೆ ಈ ಬಾರಿ ಮಾತ್ರ ಬಿಜೆಪಿಗೆ ಬಿಜೆಡಿ ಶಾಕ್ ನೀಡಿದೆ, ಆದರೆ ಈ ಹಿಂದೆ ಕಾಶ್ಮೀರದ ವಿಶೇಷ ಮಾನ್ಯತೆ ನೀಡುವ 370 ವಿಧೇಯಕ ರದ್ದು, ತ್ರಿವಳಿ ತಲಾಖ್ ಕಾಯ್ದೆಗೆ ಸಂಬಂಧಿಸಿದಂತೆ ಬಿಜೆಪಿಗೆ ಬಿಜೆಡಿ ಬೆಂಬಲ ನೀಡಿತ್ತು.