ದೆಹಲಿಯಲ್ಲಿ ಇಂದು ಪ್ರತಿಪಕ್ಷ ನಾಯಕರ ಜೊತೆ ಚಂದ್ರಬಾಬು ನಾಯ್ಡು ಸಭೆ
ನವದೆಹಲಿ, ಮೇ 21: ಆಂಧ್ರಪ್ರದೇಶದ ಮುಖ್ಯಮಂತ್ರಿ ಎಂ ಚಂದ್ರಬಾಬು ನಾಯ್ಡು ಅವರು ಇಂದು ದೆಹಲಿಯಲ್ಲಿ ಪ್ರತಿಪಕ್ಷ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
ಪ್ರತಿಪಕ್ಷ ಮುಖಂಡರಾದ ಮಾಯಾವತಿ, ಅಖಿಲೇಶ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಶರದ್ ಪವಾರ್, ಶರದ್ ಯಾದವ್ ಅವರನ್ನು ಭೇಟಿಯಾಗಿ ಪ್ರತ್ಯೇಕವಾಗಿ ನಾಯ್ಡು ಚರ್ಚಿಸಿದ್ದರು.
ಚಂದ್ರಬಾಬು ನಾಯ್ಡು ಸುಮ್ಮನೆ ಏಕೆ ಸುಸ್ತು ಮಾಡಿಕೊಳ್ಳುತ್ತಿದ್ದಾರೆ?: ಕಾಲೆಳೆದ ಶಿವಸೇನಾ
ಆದರೆ ಇಂದು ಎಲ್ಲಾ ಪ್ರತಿಪಕ್ಷಗಳು ಪ್ರತಿಪಕ್ಷ ನಾಯಕರ ಜಂಟಿ ಸಭೆಯನ್ನು ನಡೆಸಲು ನಾಯ್ಡು ಮುಂದಾಗಿದ್ದಾರೆ. ಆದರೆ ಮತದಾನೋತ್ತರ ಸಮೀಕ್ಷೆ ಹಿನ್ನೆಲೆಯಲ್ಲಿ ಎಷ್ಟು ಪ್ರತಿಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ.
ಮೂಲಗಳ ಪ್ರಕಾರ ಈಗಾಗಲೇ ಪ್ರತಪಕ್ಷಗಳ ಸಭೆ ನಡೆಸುವ ಜವಾಬ್ದಾರಿಯಿಂದ ಕಾಂಗ್ರೆಸ್ ಹಿಂದೆ ಸರಿದಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿಪಕ್ಷ ನಾಯಕರಿಗೆ ಸೋನಿಯಾ ಗಾಂಧಿ ಬರೆದ ಪತ್ರದಂತೆ ಮೇ 23ರಂದು ಸಭೆ ನಡೆಯಬೇಕಿತ್ತು. ಆದರೆ ಆ ಸಭೆ ರದ್ದಾಗಿದೆ ಎಂದು ತಿಳಿದುಬಂದಿದೆ.
ಮೇ 23ರಂದು ನೈಜ ಫಲಿತಾಶದ ಬಳಿಕ ಪ್ರತಿಪಕ್ಷಗಳು ಏನು ಮಾಡಬೇಕು, ಚುನಾವಣಾ ಆಯೋಗದ ಎದುರು ಪ್ರತಿಭಟನೆ, ರಾಷ್ಟ್ರಪತಿಗೆ ವಿಶೇಷ ಮನವಿ, ಈ ವಿಚಾರಗಳು ಇಂದಿನ ಸಭೆಯ ಪ್ರಮುಖ ಅಜೆಂಡಾವಾಗಿರಲಿದೆ.