ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ: ಯಾರು, ಏನಂದರು?
ನವದೆಹಲಿ, ಜುಲೈ 20: ಕೇಂದ್ರ ಎನ್ ಡಿಎ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಇಂದು(ಜು.20) ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ.
ಬಹುಮತ ಸಾಬೀತು ಪಡಿಸಲು ಸರ್ಕಾರಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ 268. ಈಗಾಗಲೇ 314 ಸದಸ್ಯ ಬಲ ಹೊಂದಿರುವ ಎನ್ ಡಿಎ ಮೈತ್ರಿಕೂಟಕ್ಕೆ ಸರ್ಕಾರ ಬೀಳುವ ಆತಂಕವೇನಿಲ್ಲ. ಆದರೆ ಕಳೆದ 15 ವರ್ಷದ ನಂತರ ನಡೆಯುತ್ತಿರುವ ಅವಿಶ್ವಾಸ ಮಂಡನೆ ಪ್ರಕ್ರಿಯೆ ಆಡಳಿತಾರೂಢ ಎನ್ ಡಿಎ ಗೆ ಪ್ರತಿಷ್ಠೆಯ ಪ್ರಶ್ನೆಯೂ ಹೌದು.
LIVE: ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡಲು ಎನ್ಡಿಎ ಸಜ್ಜು
ಕಾಂಗ್ರೆಸ್, ಟಿಡಿಪಿ, ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಲಿದ್ದು, ಇಂದಿನ ಮುಂಗಾರು ಅಧಿವೇಶನ ಕುತೂಹಲ ಕೆರಳಿಸಿದೆ. ಅವಿಶ್ವಾಸ ನಿರ್ಣಯದ ಕುರಿತು ಯಾವೆಲ್ಲ ನಾಯಕರು ಏನೇನು ಹೇಳಿದರು ಎಂಬ ಮಾಹಿತಿ ಇಲ್ಲಿದೆ.
|
ಕಾಂಗ್ರೆಸ್ ಅನಿಸಿಕೆಯೇನು?
"ನಾಲ್ಕು ವರ್ಷವಾದರೂ ಲೋಕ್ ಪಾಲ್ ಅನ್ನು ಇನ್ನೂ ಜಾರಿಗೆ ತರಲಾಗಿಲ್ಲ. ಅವಿಶ್ವಾಸ ನಿರ್ಣಯಕ್ಕೆ ಇದೊಂದು ಕಾರಣ. ಅವಿಶ್ವಾಸ ನಿರ್ಣಯಕ್ಕೆ ಸಂಖ್ಯೆಗಳು ಮುಖ್ಯವಲ್ಲ. ಇದು ಮೋದಿ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದ್ದರ ಕುರಿತು ಮಂಡನೆಯಾಗುತ್ತಿರುವ ಅವಿಶ್ವಾಸ. ನಮಗೆ ಸಂಖ್ಯೆಗಿಂತ ಇದೇ ಮುಖ್ಯ"- ಕಾಂಗ್ರೆಸ್
ವಿಶ್ವಾಸ ಮತ ಮತ್ತು ಅವಿಶ್ವಾಸ ನಿರ್ಣಯಕ್ಕೆ ಇರುವ ವ್ಯತ್ಯಾಸವೇನು?
ಡಿಎಂಕೆ ನಿಲುವೇನು?
"ಅವಿಶ್ವಾಸ ನಿರ್ಣಯಕ್ಕೆ ಡಿಎಂಕೆಯು ಟಿಡಿಪಿಗೆ ಬೆಂಬಲ ನೀಡಲಿದೆ. ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡುವಂತೆ ನಾವು ಎಐಎಡಿಎಂಕೆ ಗೂ ಮನವಿ ಮಾಡುತ್ತೇವೆ"- ಎಂ.ಕೆ.ಸ್ಟಾಲಿನ್, ಡಿಎಂಕೆ ಕಾರ್ಯಾಧ್ಯಕ್ಷ
|
ಸಂಸತ್ತಿನಲ್ಲಿ ಭೂಕಂಪವಾಗಲಿದೆ!
"ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿಯವರು ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಲಿರುವುದರಿಂದ ಇಂದು ಸಂಸತ್ತಿನಲ್ಲಿ ಭೂಕಂಪವಾಗುವ ಸಾಧ್ಯತೆ ಇದೆ. ಅವರೇ ಒಮ್ಮೆ ಹೇಳಿದ್ದರು, 'ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪವಾಗುತ್ತೆ' ಅಂತ. ಆದ್ದರಿಂದ ಎಲ್ಲರೂ ಭೂಕಂಪ ಎದುರಿಸಲು ಸಿದ್ಧರಾಗಿ" ಎಂದು ಬಿಜೆಪಿ ಸಂಸದ ಪ್ರಲ್ಹಾದ್ ಟ್ವೀಟ್ ಮಾಡಿದ್ದಾರೆ.
|
ಶಿವಸೇನಾ ಏನನ್ನುತ್ತೆ?
"ಉದ್ಧವ್ ಠಾಕ್ರೆ ಅವರ ನಿರ್ದೇಶನದ ಮೇಲೆ ನಾವ್ಯಾರೂ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸುತ್ತಿಲ್ಲ. ಸಂಸತ್ತಿನಲ್ಲಿ ಏನಾಗಲಿದೆ ಎಂಬುದನ್ನು ನೋಡುತ್ತೇವೆ. ನಮ್ಮನ್ನು ಲೋಕಸಭೆಯಲ್ಲಿ ಹಾಜರಿರುವಂತೆ ಕೇಳಲಾಗಿದೆ. ಹಾಜರಿರುತ್ತೇವೆ ಅಷ್ಟೆ"- ಅರವಿಂದ್, ಶಿವಸೇನಾ ಸಂಸದ