ಸಿಹಿ ಸುದ್ದಿ: ನಿರೀಕ್ಷೆಯಂತೆ ಜೂನ್ 1 ರಂದೇ ಕೇರಳಕ್ಕೆ ಮಾನ್ಸೂನ್
ನವದೆಹಲಿ, ಮೇ 15: ಗುರುವಾರ ಭಾರತೀಯ ಹವಾಮಾನ ಇಲಾಖೆ ಮಾನ್ಸೂನ್ಗೆ ಸಂಬಂಧಿಸಿದಂತೆ ಹೊಸ ವರದಿ ಬಿಡುಗಡೆ ಮಾಡಿದ್ದು, ನಿರೀಕ್ಷೆ ಮಾಡಿದ್ದಕ್ಕಿಂತ ನಾಲ್ಕು ದಿನ ಮುಂಚಿತವಾಗಿ ಅಂದರೆ ಜೂನ್ 1 ರಂದು ಮುಂಗಾರು ದೇಶ ಪ್ರವೇಶ ಮಾಡಲಿದೆ ಎಂದು ಹೇಳಿದೆ.
ಸಹಜವಾಗಿ ಮುಂಗಾರು ಮೇ ಕೊನೆವಾರ ಅಥವಾ ಜೂನ್ 1 ರಂದು ಕೇರಳ ಪ್ರವೇಶ ಮಾಡುತ್ತದೆ. ಕಳೆದ ವರ್ಷ 7 ದಿನ ತಡವಾಗಿ ಮುಂಗಾರು ಪ್ರವೇಶ ಮಾಡಿತ್ತು. ಈ ವರ್ಷ ತಡವಾಗಲಿದೆ ಎಂದು ಕಳೆದ ವಾರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಇಂದು ಹೊಸ ವರದಿ ಪ್ರಕಾರ ಮುಂಗಾರು ಜೂನ್ ಮೊದಲ ವಾರದಲ್ಲೇ ದೇಶ ಪ್ರವೇಶಿಸಲಿದೆ ಎಂದು ಹೇಳಿದೆ.
ಅಂಫಾನ್ ಚಂಡಮಾರುತ 2.0:ಕೊಲ್ಕತ್ತದಲ್ಲಿ ಮತ್ತೆ ವರುಣನ ಆರ್ಭಟ
ಅಂಫಾನ್ ಚಂಡಮಾರುತದ ಪ್ರಭಾವದಿಂದಾಗಿ ನೈರುತ್ಯ ಮಾನ್ಸೂನ್ ಮಾರುತಗಳ ಸಹಜ ಚಲನೆಗೆ ಅಡಚಣೆ ಉಂಟಾಗಿತ್ತು. ಇದರಿಂದ ಮಾನ್ಸೂನ್ ಒಂದು ವಾರ ವಿಳಂಬವಾಗಲಿದೆ ಎಂದು ಹೇಳಲಾಗಿತ್ತು. ಈಗ ಆಂಫಾನ್ ಆರ್ಭಟ ತಗ್ಗಿದ್ದು, ಮುಂಗಾರು ಜೂನ್ 1 ರಂದು ಕೇರಳಕ್ಕೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ಉಳಿದಂತೆ ಈ ವರ್ಷ ಮುಂಗಾರು ಸಾಮಾನ್ಯವಾಗಿರಲಿದೆ. ಅಲ್ಲದೇ ಜೂನ್ ಜುಲೈ ಅವಧಿಗಿಂತ ಆಗಸ್ಟ್ ಸೆಪ್ಟೆಂಬರ ಮಳೆ ವಾಡಿಕೆಗಿಂತ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.