ಬಕ್ರೀದ್: ಮುಸ್ಲಿಮರಿಗೆ ಶುಭಾಶಯ ಕೋರಿದ ಮೋದಿ, ಕೋವಿಂದ್
ಮುಸ್ಲಿಂ ಮತೀಯರ ಪವಿತ್ರ ಹಬ್ಬವಾದ ಬಕ್ರೀದ್ ಅನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಜ್ ಯಾತ್ರೆ ಆರಂಭವಾದ ಎರಡು ದಿನದ ನಂತರ ನಡೆಯುವ ಈ ಹಬ್ಬ ಈ ಬಾರಿ ಆಗಸ್ಟ್ 22 ಬುಧವಾರದಂದು ನಡೆಯುತ್ತಿದೆ.
ಬಕ್ರಿದ್ ನಿಮಿತ್ತ ಎಲ್ಲಾ ಮುಸ್ಲಿಂ ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. 'ಈದ್ ಉಲ್ ಜುಹಾದ ಶುಭಾಶಯಗಳು. ಈ ದಿನವು ನಮ್ಮ ಸಮಾಜದಲ್ಲಿ ಸಹಬಾಳ್ವೆ ಮತ್ತು ಭ್ರಾತೃತ್ವವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿ' ಎಂದು ಮೋದಿ ಟ್ವೀಟ್ ಮಾಡಿ ಶುಭಾಶಯ ಕೋರಿದ್ದಾರೆ.
Best wishes on Id-ul-Zuha. May this day deepen the spirit of compassion and brotherhood in our society.
— Narendra Modi (@narendramodi) August 22, 2018
'ಈ ಬಾರಿ ಬಕ್ರೀದ್ ಗೆ ಮೇಕೆ ಬದಲು ಮೇಕೆ ಚಿತ್ರವಿರುವ ಕೇಕ್ ಕತ್ತರಿಸೋಣ'
"ನಮ್ಮ ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ಮುಸ್ಲಿಂ ಬಾಂಧವರಿಗೆ ಈದ್ ಮುಬಾರಕ್. ಈ ವಿಶೇಷ ದಿನ ತ್ಯಾಗದ ಪವಿತ್ರ ಸಂದೇಶವನ್ನು ಸಾರುತ್ತದೆ. ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಹೋದರತ್ವವನ್ನು ವೃದ್ಧಿಸಲು ಒಟ್ತಾಗಿ ದುಡಿಯೋಣ" ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರುವ ಬಕ್ರೀದ್ ಹಿನ್ನೆಲೆ ನಿಮಗೆಷ್ಟು ಗೊತ್ತು?
ರಾಮನಾಥ್ ಕೋವಿಂದ್ ಅವರು ಉರ್ದು ಭಾಷೆಯಲ್ಲಿಯೂ ಟ್ವೀಟ್ ಮಾಡಿರುವುದು ವಿಶೇಷ.
تمام اہلِ وطن بالخصوص ہمارے ملک و بیرون ممالک میں مقیم اپنے مسلمان بھائیوں اور بہنوں کو عید مبارک.
— President of India (@rashtrapatibhvn) August 22, 2018
عید الاضحٰی کے اس پر مسرت موقع پر ہم قربانی و ایثار کے مقدس جذبہ کا خیر مقدم کرتے ہیں. آئیے ہم عہد کریں کہ ہم سب اپنے مشترک معاشرے میں اتحاد اور بھائی چارے کو فروغ دیں گے.