ಸ್ವಚ್ಛ ಪ್ರವಾಸಿ ತಾಣ: ಜಲಶಕ್ತಿ ಸಚಿವಾಲಯದಿಂದ 12 ಪ್ರಸಿದ್ಧ ಸ್ಥಳಗಳ ಆಯ್ಕೆ
ನವದೆಹಲಿ,ಫೆಬ್ರವರಿ 25: ಜಲ ಶಕ್ತಿ ಸಚಿವಾಲಯ ಸ್ವಚ್ಛ ಪ್ರದೇಶಗಳು ಅಭಿಯಾನದ ನಾಲ್ಕನೇ ಹಂತದಲ್ಲಿ ಸ್ವಚ್ಛ ಪ್ರವಾಸಿತಾಣಗಳಾಗಿ 12 ತಾಣಗಳನ್ನು ಆಯ್ಕೆ ಮಾಡಿದೆ.
ಚಿಕ್ಕಮಗಳೂರು; ಗಿರಿಸ್ವಚ್ಚತಾ ಅಭಿಯಾನ, ರಾಶಿ-ರಾಶಿ ಕಸ ಸಂಗ್ರಹ
ಈ ಪಟ್ಟಿಯಲ್ಲಿ ಶ್ರೀನಗರ, ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರ, ಉತ್ತರ ಪ್ರದೇಶದ ಬಂಕೆ ಬಿಹಾರಿ ದೇವಸ್ಥಾನ, ಆಗ್ರಾ ಕೋಟೆ ಮತ್ತು ಪಶ್ಚಿಮ ಬಂಗಾಳದ ಕಾಲಿಘಾಟ್ ದೇವಾಲಯದಂತಹ ತಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆಯ ಗುಣಮಟ್ಟವನ್ನು ಸುಧಾರಿಸುವ ಮೂಲಕ ದೇಶೀಯ ಮತ್ತು ವಿದೇಶಿ ಪ್ರವಾಸಿಗರ ಅನುಭವವನ್ನು ಹೆಚ್ಚಿಸುವ ಉದ್ದೇಶವನ್ನು ಈ ಉಪಕ್ರಮ ಹೊಂದಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಆಯ್ದ ತಾಣಗಳಲ್ಲಿ ಮಹಾರಾಷ್ಟ್ರದ ಅಜಂತ ಗುಹೆಗಳು, ಮಧ್ಯಪ್ರದೇಶದಲ್ಲಿ ಸಾಂಚಿ ಸ್ತೂಪ, ಕುಂಭಲ್ಗಢ ಕೋಟೆ, ಜೈಸಲ್ಮೇರ್ ಕೋಟೆ ಮತ್ತು ರಾಜಸ್ಥಾನದ ರಾಮದೇವ್ರಾ, ತೆಲಂಗಾಣದ ಹೈದರಾಬಾದ್ನ ಗೋಲ್ಕೊಂಡ ಕೋಟೆ; ಕೊನಾರ್ಕ್, ಒಡಿಶಾದ ಸೂರ್ಯ ದೇವಾಲಯ ಮತ್ತು ಚಂಡೀಗಢದ ದಿ ರಾಕ್ ಗಾರ್ಡನ್ಗಳಿವೆ.