ಮಾರ್ಷಲ್ಗಳ ಮೇಲೆ ಸಿಪಿಐ (ಎಂ), ಕಾಂಗ್ರೆಸ್ ಸಂಸದರಿಂದ ಹಲ್ಲೆ: ಸಂಸತ್ ಗದ್ದಲದ ಬಗ್ಗೆ ಕೇಂದ್ರದ ವರದಿ
ನವದೆಹಲಿ, ಆ. 13: ಬುಧವಾರ ಸಂಜೆ ರಾಜ್ಯಸಭೆಯಲ್ಲಿ ನಡೆದ ಗದ್ದಲದ ಕುರಿತು ಸರ್ಕಾರದ ವರದಿಯು ಪುರುಷ ಮಾರ್ಷಲ್ ಅನ್ನು ಸಿಪಿಐ (ಎಂ) ಎಲಮಾರನ್ ಕರೀಂ ಹಾಗೂ ಮಹಿಳಾ ಮಾರ್ಷಲ್ ಅನ್ನು ಕಾಂಗ್ರೆಸ್ ಸಂಸದರಾದ ಫುಲೋ ದೇವಿ ನೇತಮ್ ಮತ್ತು ಛಾಯಾ ವರ್ಮಾ ಎಳೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದೆ ಎಂದು ಮೂಲಗಳು ತಿಳಿಸಿದೆ.
ಕೇಂದ್ರ ಸರ್ಕಾರವು ಈ ವರದಿಯನ್ನು ರಾಜ್ಯಸಭೆಯ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದೆ. ಪ್ರತಿಪಕ್ಷಗಳು ಮತ್ತು ಕೇಂದ್ರವು ಬುಧವಾರ ಮೇಲ್ಮನೆಯಲ್ಲಿ ಗದ್ದಲದ ದೃಶ್ಯಗಳು ಸದನದ ಸ್ಥಾನಮಾನವನ್ನು ಅವಹೇಳನ ಮಾಡಿವೆ ಎಂದು ಆರೋಪಿಸಿದವು. ಆದರೆ ಇದಕ್ಕೆ ತದ್ವಿರುದ್ದವಾಗಿ ವಿರೋಧ ಪಕ್ಷಗಳು ಸರ್ಕಾರ ಮಾರ್ಷಲ್ಗಳಿಂದ ಮಹಿಳಾ ಸಂಸದರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದೆ. ಇದನ್ನು ವಿರೋಧಿಸಿ ಹಾಗೂ ಸಂಸತ್ತು ಕಾಲಾವಧಿಗೂ ಮುನ್ನ ರದ್ದು ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ
ಮೇಲ್ಮನೆಯಲ್ಲಿ ಮಹಿಳಾ ಸಂಸದರ ಮೇಲೆ ಹಲ್ಲೆ ಆರೋಪ: ವಿಪಕ್ಷ ನಾಯಕರಿಂದ ಪ್ರತಿಭಟನೆ
ಟಿಎಂಸಿ ಸಂಸದ ಡೋಲಾ ಸೇನಾ ಸಭಾಪತಿ ಸಭಾಂಗಣದಿಂದ ಸಭಿಕರ ಕೊಠಡಿಯಿಂದ ಬರುತ್ತಿದ್ದಾಗ ಸದನದ ನಾಯಕ ಪಿಯೂಷ್ ಗೋಯಲ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯನ್ನು ತಳ್ಳಿದರು ಹಾಗೂ ಇಬ್ಬರಿಗೂ ಬರುವುದನ್ನು ಅಡ್ಡಿಪಡಿಸಿದ್ದಾರೆ ಎಂದು ಕೂಡಾ ಈ ಸರ್ಕಾರದ ವರದಿ ಹೇಳುತ್ತದೆ.
ಮಾರ್ಷಲ್ಗಳು ಸಂಸದರಿಂದ ಗಾಯಗೊಂಡರು: ಸರ್ಕಾರಿ ಮೂಲಗಳು
ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ತಿದ್ದುಪಡಿ ವಿಧೇಯಕವನ್ನು ಕೈಗೆತ್ತಿಕೊಂಡಾಗ ಸಂವಿಧಾನ (ನೂರ ಇಪ್ಪತ್ತೇಳನೇ ತಿದ್ದುಪಡಿ) ಮಸೂದೆ, 2021 ಅನ್ನು ಸದನದಲ್ಲಿ ಅಂಗೀಕರಿಸಿದ ನಂತರ ಗದ್ದಲ ಆರಂಭವಾಯಿತು. ಇದು ಸಂಜೆ 5.45 ರ ಸುಮಾರಿಗೆ ಆರಂಭವಾಗಿದೆ. ಮಸೂದೆ ಕೈಗೆತ್ತಿಕೊಳ್ಳುವುದನ್ನು ವಿರೋಧಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗೆ ನುಗ್ಗಿದರು. ವರದಿಯ ಪ್ರಕಾರ ಅವರು ಸದನದ ಮೇಜಿನ ಮೇಲೆ ಏರಲು ಪ್ರಯತ್ನಿಸಿದರು.
ಸಂಸತ್ತಿನ ಭದ್ರತಾ ಸೇವೆಯ ಅಧಿಕಾರಿಗಳು ಸಭಾಪತಿಯ ನಿರ್ದೇಶನದ ಮೇರೆಗೆ ಸದನದ ಮೇಜಿನ ಸುತ್ತ ಆಗಾಗಲೇ ನಿಂತು ಕೊಂಡಿದ್ದರು. ಸಂಭಾವ್ಯ ಹಾನಿಯನ್ನು ತಡೆಗಟ್ಟಲು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ. ಮತ್ತು ಪ್ರತಿಭಟನಾನಿರತ ಸಂಸದರ "ಆಕ್ರಮಣಕಾರಿ ಮನೋಧರ್ಮ" ದ ಕಾರಣದಿಂದಾಗಿ ಹಲವಾರು ಮಾರ್ಷಲ್ಗಳಿಗೆ ಗಾಯವಾಗಿದೆ ಎಂದು ವರದಿ ಹೇಳುತ್ತದೆ. ಪ್ರತಿಪಕ್ಷದ ಸದಸ್ಯರು ಕಾಗದಗಳನ್ನು ಹರಿದು ಎಸೆದರು ಎಂದು ವರದಿಯಾಗಿದೆ. ಮೇಜಿನ ಸುತ್ತಲೂ ಮಾರ್ಷಲ್ಗಳು ರಚಿಸಿದ ಭದ್ರತಾ ವಲಯವನ್ನು ದಾಟುವ ಪ್ರಯತ್ನವನ್ನು ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಿಪುನ್ ಬೋರಾ ಟಿವಿ ಸ್ಟ್ಯಾಂಡ್ ಮೇಲೆ ಹತ್ತಿದರು ಎಂದು ಸರ್ಕಾರ ದೂರಿದೆ.
ಕೃಷಿ ಕಾಯ್ದೆಗಳ ವಿರುದ್ಧದ ಕೂಗು ಅಡಗಿಸಲು ಸರ್ಕಾರದ ಹುನ್ನಾರ!?
ಈ ಗಲಾಟೆಯಲ್ಲಿ, ಇಬ್ಬರು ಮಾರ್ಷಲ್ಗಳ ಮೇಲೆ ಸಿಪಿಐ (ಎಂ) ಮತ್ತು ಕಾಂಗ್ರೆಸ್ ನಾಯಕರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಹಿಳಾ ಮಾರ್ಷಲ್ಗೆ ಸಣ್ಣಪುಟ್ಟ ಗಾಯಗಳಾಗಿವೆ ಮತ್ತು ತರುವಾಯ ದೂರು ಮತ್ತು ವೈದ್ಯಕೀಯ ವರದಿಯನ್ನು ಸಲ್ಲಿಸಿದ್ದಾರೆ. ಹಲ್ಲೆಗೊಳಗಾದ ಪುರುಷ ಮಾರ್ಷಲ್ ಕೂಡ ದೂರು ಸಲ್ಲಿಸಿದ್ದಾರೆ. ಭದ್ರತಾ ಅಧಿಕಾರಿಗಳನ್ನು ಸಂಸತ್ತಿನ ಭದ್ರತಾ ಸೇವೆಯಿಂದ ಮಾತ್ರ ಕರೆಸಿಕೊಳ್ಳಲಾಗಿದೆ ಮತ್ತು ಯಾವುದೇ ಬಾಹ್ಯ ಸಂಸ್ಥೆಯಿಂದಲ್ಲ ಎಂದು ಸರ್ಕಾರದ ವರದಿಯು ಹೇಳುತ್ತದೆ. ವರದಿಯ ಪ್ರಕಾರ ಮಾರ್ಷಲ್ಗಳು ಯಾವುದೇ ಸಂಸತ್ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳಿಂದ ಸ್ಕ್ರೀನ್ಗ್ರಾಬ್ಗಳನ್ನು ವರದಿಯೊಂದಿಗೆ ಸಲ್ಲಿಸಲಾಗಿದೆ.
ಮಾರ್ಷಲ್ಗಳಿಂದ ಸಂಸದರು ಗಾಯಗೊಂಡಿದ್ದಾರೆ: ವಿಪಕ್ಷಗಳ ಆರೋಪ
ಏತನ್ಮಧ್ಯೆ, ಪ್ರತಿಪಕ್ಷದ ಸಂಸದರು ತಮ್ಮ ಮೇಲೆ ಹಲ್ಲೆ ಮಾಡಲು ಸರ್ಕಾರ ಮಾರ್ಷಲ್ಗಳನ್ನು ಬಳಸಿದ್ದಾರೆ ಎಂದು ಆರೋಪಿಸಿದರು. ಮಾರ್ಷಲ್ಗಳು ಪ್ರತಿಪಕ್ಷಗಳ ಮೇಲೆ ದಾಳಿ ಮಾಡಿದ ಕಾರಣ ಕೆಲವು ಮಹಿಳಾ ಸಂಸದರು ಸಹ ಗಾಯಗೊಂಡಿದ್ದಾರೆ ಎಂದು ವಿರೋಧ ಪಕ್ಷ ಸದಸ್ಯರು ಹೇಳಿಕೊಂಡಿದ್ದಾರೆ. ಬುಧವಾರ ಹೊರಗಿನವರನ್ನು ಸಂಸತ್ತಿನ ಭದ್ರತೆಯಾಗಿ ಕರೆತರಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಸದನದ ಕಲಾಪದಲ್ಲಿ, ಕಾಂಗ್ರೆಸ್ ಸಂಸದ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ಪಕ್ಷದ ಕೆಲವು ಮಹಿಳಾ ಸಂಸದರು ಗಾಯಗೊಂಡಿದ್ದಾರೆ ಮತ್ತು ಅವರ ವಿರುದ್ಧ ಪುರುಷ ಮಾರ್ಷಲ್ಗಳನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿದರು. "ಇಡೀ ಮನೆಯನ್ನು ಕೋಟೆಯನ್ನಾಗಿ ಮಾಡಲಾಗಿದೆ" ಎಂದು ಖರ್ಗೆ ದೂರಿದರು. "ಸಂಸತ್ತಿಗೆ ಒಂದು ಕಪ್ಪು ದಿನ ಭಾರತವನ್ನು ಬಂಡವಾಳಶಾಹಿಗಳಿಗೆ ಒಪ್ಪಿಸಿದರು,"ಎಂದು ಸಿಪಿಐ ಸಂಸದ ಬಿನೋಯ್ ವಿಶ್ವಂ ಟ್ವೀಟ್ ಮಾಡಿದ್ದಾರೆ.
ಪ್ರತಿಪಕ್ಷ ನಾಯಕರು ಗುರುವಾರ ರಾಜ್ಯಸಭಾ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡುರನ್ನು ಭೇಟಿ ಮಾಡಿ ಬುಧವಾರ ನಡೆದ ಘಟನೆಗಳನ್ನು ಖಂಡಿಸಿದರು. ಏತನ್ಮಧ್ಯೆ, ಸಂಸತ್ತಿನ ಮುಂಗಾರು ಅಧಿವೇಶನದ ಅಂತಿಮ ದಿನದಂದು ಕಂಡ ಅಶಿಸ್ತಿನ ದೃಶ್ಯಗಳ ತನಿಖೆಗೆ ವಿಶೇಷ ಸಮಿತಿಯನ್ನು ರಚಿಸುವಂತೆ ಕೇಂದ್ರವು ಒತ್ತಾಯಿಸಿದೆ.
Recommended Video
(ಒನ್ಇಂಡಿಯಾ ಸುದ್ದಿ)