ದೆಹಲಿ: ಕಿರಾರಿ ಪ್ರದೇಶದಲ್ಲಿ ಬೆಂಕಿ ಅನಾಹುತಕ್ಕೆ 9 ಮಂದಿ ಸಾವು
ನವದೆಹಲಿ, ಡಿಸೆಂಬರ್ 23: ದೆಹಲಿಯ ವಾಯುವ್ಯ ಭಾಗದ ಕಿರಾರಿ ಪ್ರದೇಶದಲ್ಲಿ ಸೋಮವಾರದಂದು ಭಾರಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಬೆಂಕಿ ಅನಾಹುತಕ್ಕೆ 9 ಮಂದಿ ಮೃತರಾಗಿದ್ದು, 10ಕ್ಕೂ ಅಧಿಕ ಮಂದಿಗೆ ತೀವ್ರಗಾಯಗಳಾಗಿವೆ.
ಬಟ್ಟೆಗಳನ್ನು ದಾಸ್ತಾನು ಮಾಡಿದ್ದ ವೇರ್ ಹೌಸ್ ನಲ್ಲಿ ತಡರಾತ್ರಿ 1 ಗಂಟೆ ನಂತರ ಬೆಂಕಿ ಕಾಣಿಸಿಕೊಂಡಿದೆ. ಮೂರಂಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಬೆಂಕಿ ಮೊದಲಿಗೆ ಕಂಡು ಬಂದಿದ್ದು, ಬೆಂಕಿ ನಂದಿಸಲು ಯಾವುದೇ ಸಾಧನಗಳನ್ನು ವೇರ್ ಹೌಸ್ ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ, ತುರ್ತು ನಿರ್ಗಮನ ವ್ಯವಸ್ಥೆಯೂ ಇಲ್ಲದೆ, ಒಂದೇ ಕಡೆ ಮೆಟ್ಟಿಲುಗಳಿರುವುದು ಕಂಡು ಬಂದಿದೆ.
Delhi: Three people have died and 10 have been injured after a fire broke out in a cloth godown in Kirari at around 12:30 am, today. The fire has been doused and the injured have been admitted to hospital. pic.twitter.com/VDDQW0STAk
— ANI (@ANI) December 22, 2019
ಈ ಘಟನೆಯಲ್ಲಿ ಗಾಯಗೊಂಡವರನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.
ಇತ್ತೀಚೆಗೆ ಉತ್ತರ ದೆಹಲಿಯಲ್ಲಿ ಉತ್ಪಾದನಾ ಘಟಕವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 43ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆ ನಡೆದಿತ್ತು.
ಮುಂಬೈನಲ್ಲಿ
ಅಗ್ನಿ
ಅವಘಡ
ಮುಂಬೈನಲ್ಲಿ
ಲಾಭ್
ಶ್ರೀವಳ್ಳಿ
ಹೆಸರಿನ
ಬಹುಮಹಡಿ
ಕಟ್ಟಡದ
7
ಹಾಗೂ
8ನೇ
ಮಹಡಿಯಲ್ಲಿ
ಭಾನುವಾರ
ರಾತ್ರಿ
ಬೆಂಕಿ
ಕಾಣಿಸಿಕೊಂಡು
ಆತಂಕದ
ವಾತಾವರಣ
ಸೃಷ್ಟಿಯಾಗಿತ್ತು.
ಆದರೆ,
ಕೂಡಲೇ
ಸ್ಥಳಕ್ಕೆ
ಆಗಮಿಸಿದ
ಅಗ್ನಿಶಾಮಕ
ದಳದ
ಸಿಬ್ಬಂದಿ
ಅಪಾಯದಲ್ಲಿ
ಸಿಲುಕಿದ್ದ
ನಾಲ್ವರನ್ನು
ರಕ್ಷಿಸಿದ್ದಾರೆ.
ಈ
ಘಟನೆಯಲ್ಲಿ
ಯಾವುದೇ
ಸಾವು-ನೋವು
ಸಂಭವಿಸಿಲ್ಲ
ಎಂದು
ಮುಂಬೈ
ಪೊಲೀಸರು
ತಿಳಿಸಿದ್ದಾರೆ.