ಬಾರ್ ಮುಂದೆ ಕ್ಯೂ ನಿಂತವರಿಗೆ ಹೂ ಮಳೆ ಸುರಿಸಿದ ವ್ಯಕ್ತಿ
ನವದೆಹಲಿ, ಮೇ: ಕೊರೊನಾ ವಾರಿಯರ್ಸ್ಗೆ ಹೂ ಮಳೆ ಸುರಿಸಿದ ಘಟನೆ ಅನೇಕ ಕಡೆ ನಡೆದಿದೆ. ಆದರೆ, ದೆಹಲಿಯಲ್ಲಿ ವ್ಯಕ್ತಿಯೊಬ್ಬ ಮದ್ಯದ ಅಂಗಡಿ ಮುಂದೆ ನಿಂತ ಜನರಿಗೆ ಹೂ ಮಳೆ ಸುರಿಸಿದ್ದಾನೆ. ದೇಶದ ಆರ್ಥಿಕತೆಯನ್ನು ಕುಡುಕರು ಉಳಿಸಿದ್ದಾರೆ ಎಂದಿದ್ದಾನೆ.
ನಿನ್ನೆಯಿಂದ ದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮೊದಲ ದಿನ ದೇಶದ ಬಹುತೇಕ ಬಾರ್ಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ದೆಹಲಿಯಲ್ಲಿಯೂ ಒಂದು ಮದ್ಯದ ಅಂಗಡಿ ಮುಂದೆ ಇದೇ ದೃಶ್ಯ ಕಂಡು ಬಂತು. ಇದನ್ನು ನೋಡಿದ ವ್ಯಕ್ತಿಯೊಬ್ಬ ಗ್ರಾಹಕರಿಗೆ ಹೂ ಹಾಕಿದ್ದಾನೆ.
ಅಬ್ಬಬ್ಬಾ.. ಎಣ್ಣೆಪಾರ್ಟಿಯ 'ಈ' ಬಿಲ್ ನೋಡಿ ಕುಡಿಯದವರೂ ತಲೆ ತಿರುಗಿ ಬೀಳ್ತಾರೆ!
''ನೀವು ನಮ್ಮ ಆರ್ಥಿಕತೆ.. ಸರ್ಕಾರಕ್ಕೆ ಯಾವುದೇ ಹಣ ಇರಲಿಲ್ಲ...'' ಎಂದು ಕುಡುಕರಿಗೆ ಜೈಕಾರ ಹಾಕಿ ಅಂಗಡಿ ಮುಂದೆ ಕ್ಯೂ ನಿಂತಿದ್ದ ಜನರಿಗೆ ಧನ್ಯವಾದ ತಿಳಿಸಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
#WATCH Delhi: A man showers flower petals on people standing in queue outside liquor shops in Chander Nagar area of Delhi. The man says, "You are the economy of our country, government does not have any money". #CoronaLockdown pic.twitter.com/CISdu2V86V
— ANI (@ANI) May 5, 2020
ಅಂದಹಾಗೆ, ನಿನ್ನೆ ದೇಶದ ಬಹುತೇಕ ಎಲ್ಲ ರಾಜ್ಯಗಳ ಬಾರ್ ತೆರೆದಿತ್ತು. ಆದರೆ, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಆಂಧ್ರಪ್ರದೇಶದ ಕೆಲವು ಅಂಗಡಿಗಳನ್ನು ತೆರೆದ ಸ್ವಲ್ಪ ನಿಮಿಷದಲ್ಲಿಯೇ ಮುಚ್ಚಲಾಯಿತು. ಸಾಕಷ್ಟು ಜನರು ಅಂಗಡಿ ಮುಂದೆ ಕ್ಯೂ ನಿಂತಿದ್ದು, ಸಾಮಾಜಿಕ ಅಂತರ ಹಾಗೂ ಕೊರೊನಾ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಈ ರೀತಿ ಮಾಡಲಾಯಿತು.
ಮದ್ಯ ಮಾರಾಟ ಅವಕಾಶ ನೀಡಿದ್ದ ನಿನ್ನೆ ಒಂದೇ ದಿನದಲ್ಲಿ, ಕರ್ನಾಟಕದಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ.