ಚಾಕು ಹಿಡಿದು ಕೇರಳ ಸಿಎಂ ಕಡೆಗೆ ನಗ್ಗಲು ಯತ್ನಿಸಿದವನ ಬಂಧನ
ನವದೆಹಲಿ, ಆಗಸ್ಟ್ 04: ಕೇರಳ ಸಿಎಂ ಪಿಣರಾಯಿ ವಿಜಯನ್ ಇರುವಾಗಲೇ ಆಯುಧದೊಂದಿಗೆ ಕೇರಳ ಹೌಸ್ಗೆ ನುಗ್ಗಿದ್ದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ಬಂಧಿಸಿ ವಶಕ್ಕೆ ಪಡೆದಿದ್ದಾರೆ.
ಚೂರಿ ಹಿಡಿದು ಕೇರಳ ಭವನ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯ ಬಂಧನ
ನವದೆಹಲಿಯಲ್ಲಿ ಕೇರಳ ಹೌಸ್ ಬಳಿ ಸಿಎಂ ಪಿಣರಾಯಿ ವಿಜಯನ್ ಅವರು ಮಾಧ್ಯದವರೊಂದಿಗೆ ಮಾತನಾಡುತ್ತಿದ್ದಾಗ ಯುವಕನೊಬ್ಬ ಚಾಕು ಹಿಡಿದು ಏಕಾಏಕಿ ಕೇರಳ ಹೌಸ್ಗೆ ನುಗ್ಗಿ ಪಿಣರಾಯಿ ವಿಜಯನ್ ಅವರ ಬಳಿ ತೆರಳಲು ಯತ್ನಿಸಿದ್ದಾನೆ.
ಮೀನು ಮಾರಿ ಟ್ರೋಲ್ ಆದ ಕೇರಳದ ಹುಡುಗಿಯ ಕರುಣಾಜನಕ ಕತೆ ಕೇಳಿ...
#WATCH: Man tries to barge inside Kerala House in Delhi with a knife. Kerala Chief Minister Pinarayi Vijayan was present inside. Police says, 'the man is 80% mentally unstable & has been sent to Institute of Human Behaviour and Allied Sciences'. pic.twitter.com/j2frHaYBUY
— ANI (@ANI) August 4, 2018
ಕೂಡಲೇ ಅಲ್ಲಿಯೇ ಇದ್ದ ವಿಜಯನ್ ಅವರ ಭದ್ರತಾ ಸಿಬ್ಬಂದಿ ಆತನ ಬಳಿ ಆಯುಧ ಕಂಡು ಮಾತಿನ ಮೂಲಕ ಮನವೊಲಿಸಲು ಯತ್ನಿಸಿದ್ದಾರೆ. ನಂತರ ಉಪಾಯದಿಂದ ಆತನನ್ನು ಹಿಂದಿನಿಂದ ಹಿಡಿದು ನೆಲಕ್ಕೆ ಕೆಡವಿ ಆತನ ಬಳಿಯಿಂದ ಆಯುಧ ಕಿತ್ತುಕೊಳ್ಳಲಾಗಿದೆ.
ಸಿಎಂ ಮೇಲೆ ದಾಳಿಗೆ ಯತ್ನಿಸಿದವನನ್ನು ವಿಮಲ್ ಎಂದು ಗುರುತಿಸಲಾಗಿದ್ದು, 'ನಾನು ಸಾಯುತ್ತೇನೆ, ಸಿಎಂ ನನ್ನನ್ನು ಬದುಕಲು ಬಿಡುತ್ತಿಲ್ಲ, ನನಗೆ ಕೆಲಸ ಮಾಡಲು ಅವಕಾಶ ಕೊಡಬೇಕು, ನನ್ನ ನೋವಿಗೆ ಮುಖ್ಯಮಂತ್ರಿ ಸ್ಪಂದಿಸಿಲ್ಲ' ಎಂದು ವಿಮಲ್ ಬಂಧನಕ್ಕೊಳಗಾದಾಗ ಹೇಳುತ್ತಿದ್ದ ಎಂದು ಸಮೀಪ ದರ್ಶಿಗಳು ಹೇಳಿದ್ದಾರೆ.