ಬಿಹಾರ ಸಿಎಂ ನಿತೀಶ್ ಕುಮಾರ್ ಗಾಂಧೀವಾದಿಯೋ.. ಗೋಡ್ಸೆವಾದಿಯೋ..?
ನವದೆಹಲಿ, ಫೆಬ್ರವರಿ.18: ಭಾರತದಲ್ಲಿ ಮಹಾತ್ಮ ಗಾಂಧೀಜಿ ಮತ್ತು ನಾಥೂರಾಮ್ ಗೋಡ್ಸೆ ಇಬ್ಬರೂ ಒಂದೇ ದಾರಿಯಲ್ಲಿ ಸಾಗುವುದಕ್ಕೆ ಸಾಧ್ಯವಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾರ ಸಿದ್ಧಾಂತವನ್ನು ಪಾಲಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ರಾಜಕೀಯ ಮುಖಂಡ ಪ್ರಶಾಂತ್ ಕಿಶೋರ್ ಸವಾಲ್ ಹಾಕಿದ್ದಾರೆ.
ಬಿಹಾರದ ಜೆಡಿಯು ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಬಳಿಕ ಮೊದಲ ಬಾರಿಗೆ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿರುವ ಪ್ರಶಾಂತ್ ಕಿಶೋರ್, ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಜೆಡಿಯು ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್, ತಾವೊಬ್ಬ ಗಾಂಧೀವಾದಿ ಎಂದು ಹೇಳಿಕೊಳ್ಳುತ್ತಾರೆ.
ಮಹಾತ್ಮ ಗಾಂಧೀಜಿ ಸಿದ್ದಾಂತವನ್ನು ನಂಬಿರುವುದಾಗಿ ಹೇಳುವ ನಿತೀಶ್ ಕುಮಾರ್ ಅದು ಹೇಗೆ ತಾನೇ ಗೋಡ್ಸೆ ಚಿಂತನೆಗಳನ್ನು ಪಾಲಿಸುತ್ತಿರುವ ಭಾರತೀಯ ಜನತಾ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಗಾಂಧಿ-ಗೋಡ್ಸೆ
ಒಟ್ಟಾಗಿ
ಸಾಗಲು
ಸಾಧ್ಯವೇ?
ನಿತೀಶ್
ಕುಮಾರ್
ಗಾಂಧಿ,
ಜಯಪ್ರಕಾಶ್
ಹಾಗೂ
ರಾಮ್
ಮನೋಹರ್
ಲೋಹಿಯಾ
ಅವರ
ತತ್ವ
ಸಿದ್ದಾಂತಗಳನ್ನು
ಪಾಲಿಸುವುದಾಗಿ
ಹೇಳಿಕೊಳ್ಳುತ್ತಾರೆ.
ಇನ್ನೊಂದು
ಕಡೆಯಲ್ಲಿ
ಗಾಂಧೀಜಿ
ಹಂತಕ
ನಾಥೂರಾಮ್
ಗೋಡ್ಸೆ
ತತ್ವ
ಸಿದ್ದಾಂತಗಳನ್ನು
ಪಾಲಿಸುವ
ಬಿಜೆಪಿ
ಜೊತೆಗೆೆ
ಹೊಂದಾಣಿಕೆ
ಮಾಡಿಕೊಳ್ಳುತ್ತಾರೆ.
ಇದು
ಎಷ್ಟರ
ಮಟ್ಟಿಗೆ
ಸರಿ
ಎಂದು
ಪ್ರಶಾಂತ್
ಕಿಶೋರ್
ಪ್ರಶ್ನಿಸಿದ್ದಾರೆ.