ಸಂಸತ್ ಉಭಯ ಸದನಗಳಲ್ಲಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆ ಅಂಗೀಕಾರ
ನವದೆಹಲಿ, ನವೆಂಬರ್ 29: ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ-ಗಲಾಟೆ ನಡುವೆ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆಯನ್ನು ಸೋಮವಾರ ಅಂಗೀಕರಿಸಲಾಗಿದೆ.
ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಹೊಸ ಮಸೂದೆಯ ಮೇಲೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದವು. ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಕೇಂದ್ರ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ.
Parliament Winter Session Live :ಸಂಸತ್ತಿನಲ್ಲಿ ಸವಾಲುಗಳೂ ಇರಲಿ, ಶಾಂತಿಯೂ ಇರಲಿ: ಮೋದಿ
ಕೃಷಿ ಕಾಯ್ದೆ ರದ್ಧತಿ 2021ರ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವುದಕ್ಕೆ ಆರಂಭಿಸಿದರು. ಈ ವೇಳೆ ಪ್ರತಿಪಕ್ಷಗಳು ಶಾಂತಿ ಕಾಪಾಡಿದರೆ ಚರ್ಚೆಗೆ ಅವಕಾಶ ನೀಡಬಹುದು ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ರಾಜ್ಯಸಭೆಯಲ್ಲೂ
ಕೃಷಿ
ಕಾಯ್ದೆ
ರದ್ಧತಿ
ಮಸೂದೆ
ಅಂಗೀಕಾರ
ಪ್ರತಿಪಕ್ಷ
ನಾಯಕರ
ತೀವ್ರ
ವಿರೋಧದ
ನಡುವೆಯೂ
ಯಾವುದೇ
ಚರ್ಚೆ
ಇಲ್ಲದೇ
ಲೋಕಸಭೆಯಲ್ಲಿ
ಕೃಷಿ
ಕಾಯ್ದೆ
ರದ್ಧತಿ
ಮಸೂದೆ
ಅಂಗೀಕರಿಸಲಾಯಿತು.
ತದನಂತರ
ರಾಜ್ಯಸಭೆಯಲ್ಲೂ
ನೂತನ
ಮಸೂದೆ
ಅಂಗೀಕರಿಸಲಾಗಿದ್ದು,
ಮೇಲ್ಮನೆಯಲ್ಲು
ಮಸೂದೆ
ಕುರಿತು
ಯಾವುದೇ
ಚರ್ಚೆ
ನಡೆದಿಲ್ಲ
ಎನ್ನಲಾಗಿದೆ.
ಈ
ಸಂಬಂಧ
ಕೇಂದ್ರ
ಸರ್ಕಾರದ
ವಿರುದ್ಧ
ಟಿಎಂಸಿ
ಸಂಸದ
ದೆರೆಕ್
ಒಬ್ರಿಯನ್
ಅಸಮಾಧಾನ
ವ್ಯಕ್ತಪಡಿಸಿದ್ದಾರೆ.
"ಮೋದಿ
I
(2014-19):
ರದ್ದತಿ
ಮತ್ತು
ತಿದ್ದುಪಡಿ
ಮಸೂದೆ
2017
ಒಂದು
ನಿದರ್ಶನ.
ಆರು
ಸಂಸದರು
ಚರ್ಚೆಯಲ್ಲಿ
ಪಾಲ್ಗೊಂಡಿದ್ದರು.
ಆಗ
ಪ್ರಜಾಪ್ರಭುತ್ವವು
ಅಂಜೂರದ
ಎಲೆಯಂತೆ
ಆಗಿದ್ದು,
ಒಂದಿಷ್ಟು
ಅವಮಾನವಾಗಿತ್ತು.
ಆದರೆ,
ಮೋದಿ
II
(2019-ಇಂದು):
#FarmLaws
Repeal
Bill
2021
ಅನ್ನು
ತೆಗೆದುಕೊಳ್ಳಲಾಗಿದೆ
ಮತ್ತು
ಅಂಗೀಕರಿಸಲಾಗಿದೆ.
ಇಲ್ಲಿಯೂ
ಯಾವುದೇ
ಚರ್ಚೆಗೆ
ಅವಕಾಶವಿರಲಿಲ್ಲ.
ಪ್ರಜಾಪ್ರಭುತ್ವಕ್ಕೆ
ಅಂಜೂರದ
ಎಲೆಯಷ್ಟು
ಕಿಮ್ಮತ್ತಿಲ್ಲ,
ನಾಚಿಕೆಯಿಲ್ಲವೇ,"
ಎಂದು
ಓಬ್ರಿಯನ್
ಪ್ರಶ್ನೆ
ಮಾಡಿದ್ದಾರೆ.
ರೈತ
ಮುಖಂಡ
ರಾಕೇಶ್
ಟಿಕಾಯತ್
ಎಚ್ಚರಿಕೆ:
ಲೋಕಸಭೆಯಲ್ಲಿ
ಕೃಷಿ
ಕಾಯ್ದೆಗಳ
ರದ್ಧತಿ
ಮಸೂದೆ,
2021
ಅನ್ನು
ಅಂಗೀಕರಿಸಲಾಗಿದೆ.
ಆದರೆ
ನಮ್ಮ
ಬೇಡಿಕೆಗಳು
ಇನ್ನೂ
ಪೂರ್ಣವಾಗಿಲ್ಲ
ಎಂದು
ಭಾರತೀಯ
ಕಿಸಾನ್
ಒಕ್ಕೂಟದ
ಮುಖ್ಯಸ್ಥ
ರಾಕೇಶ್
ಟಿಕಾಯತ್
ಹೇಳಿದ್ದಾರೆ.
ಉತ್ತರ
ಪ್ರದೇಶದ
ಕೌಶಂಬಿಯಲ್ಲಿ
ಮಾತನಾಡಿದ
ರೈತ
ಮುಖಂಡ
ರಾಕೇಶ್
ಟಿಕಾಯತ್,
ಇದು
ರೈತರ
ಪ್ರತಿಭಟನೆ
ಸಂದರ್ಭದಲ್ಲಿ
ಪ್ರಾಣ
ಕಳೆದುಕೊಂಡ
ಎಲ್ಲಾ
750
ರೈತರಿಗೆ
ಗೌರವವಾಗಿದೆ.
ಇದರ
ಜೊತೆಗೆ
ಕನಿಷ್ಠ
ಬೆಂಬಲ
ಬೆಲೆ
(ಎಂಎಸ್ಪಿ)
ಸೇರಿದಂತೆ
ಇತರೆ
ಸಮಸ್ಯೆಗಳು
ಇನ್ನೂ
ಬಾಕಿ
ಉಳಿದಿವೆ.
ಹೀಗಾಗಿ
ಸದ್ಯಕ್ಕೆ
ಪ್ರತಿಭಟನೆಯನ್ನು
ಮುಂದುವರಿಸಲಾಗುವುದು
ಎಂದು
ರಾಕೇಶ್
ಟಿಕಾಯತ್
ಎಚ್ಚರಿಕೆ
ನೀಡಿದ್ದಾರೆ.
ರೈತರ ಕೆಂಗಣ್ಣಿಗೆ ಗುರಿಯಾಗಿದ್ದ ಕೃಷಿ ಕಾಯ್ದೆಗಳು:
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆಯನ್ನು ಪಡೆದುಕೊಳ್ಳಲಾಗಿತ್ತು.
ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿವಿಧ ರೈತ ಸಂಘಗಳ ಆಶ್ರಯದಲ್ಲಿ ಸಾವಿರಾರು ರೈತರು ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಮೇಲೆ ಖಾಸಗೀಕರಣವನ್ನು ಹೇರುತ್ತಿರುವುದಕ್ಕೆ ಹಾಗೂ ಕಾರ್ಪೊರೇಟ್ಗಳ ಪರ ಒಲವು ಹೊಂದಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.
Recommended Video