ಲೋಕಸಭಾ ಚುನಾವಣೆ: ಜನ ಸಂಪರ್ಕಕ್ಕಾಗಿ ಬಿಜೆಪಿಯಿಂದ ಪಾದಯಾತ್ರೆಯ ತಂತ್ರ
ನವದೆಹಲಿ, ನವೆಂಬರ್ 28: 2019 ರ ಲೋಕಸಭಾ ಚುನಾವಣೆಗೆ ಇಂದಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಜನಸಂಪರ್ಕಕ್ಕಾಗಿ ಪಾದಯಾತ್ರೆಯ ತಂತ್ರವನ್ನು ಅನುಸರಿಸಲು ನಿರ್ಧರಿಸಿದೆ.
ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕ
ಪಕ್ಷದ ಪ್ರತಿ ಮಂಡಲ ವಿಭಾಗದಿಂದ 10 ಕಿಮೀ ದೂರದವರೆಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಆ ಭಾಗದ ಮತದಾರರನ್ನು ಸೆಳೆಯುವ ತಂತ್ರಕ್ಕೆ ಬಿಜೆಪಿ ಕೈಹಾಕಿದೆ.
ರಾಜ್ಯ ರಾಜಕಾರಣದಿಂದ ಶೋಭಾಗೆ ಮುಕ್ತಿ?ಲೋಕಸಭೆಗೆ ಬೆಂಗಳೂರಿಂದ ಸ್ಪರ್ಧೆ?
ಆಯಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು, ಶಾಸಕರು, ಸಂಸದರು ಸೇರಿದಂತೆ ಸುಮಾರು 50-60 ಬಿಜೆಪಿ ಸದಸ್ಯರು ಮಂಡಲ ವಿಭಾಗದಿಂದ ಪಾದಯಾತ್ರೆ ಆರಂಭಿಸುವುದು. 10 ಕಿಮೀ ದೂರದಲ್ಲಿರುವ ಒಂದು ನಿರ್ದಿಷ್ಟ ಕೇಂದ್ರಕ್ಕೆ ತಲುಪುವರೆಗೂ ಜನರಲ್ಲಿ ಕೇಂದ್ರ ಎನ್ ಡಿಎ ಸರ್ಕಾರದ ಸಾಧನೆಗಳನ್ನು, ಮತ್ತು ಮುಂಬರುವ ಚುನಾವಣೆಯ ನಂತರ ಹಾಕಿಕೊಂಡಿರುವ ಯೋಜನೆಗಳನ್ನು ಮನಮುಟ್ಟುವಂತೆ ಪರಿಚಯಿಸುವುದು.
ಈ ಯೋಜನೆ 15 ದಿನಗಳ ಕಾಲ ನಡೆಯಲಿದ್ದು, ಇದೇ ಡಿಸೆಂಬರ್ 1 ರಿಂದ 15 ರವರೆಗೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ಮಂಡಲದಲ್ಲೂ ಒಂದು ತಂಡವನ್ನು ರಚಿಸಿ, ಅದಕ್ಕೆ ಪ್ರತಿದಿನವೂ ಒಬ್ಬೊಬ್ಬ 'ದಿವಸ್ ಪ್ರಮುಖ್' ಎಂಬ ಹೆಸರಿನಲ್ಲಿ ಮುಖ್ಯಸ್ಥರನ್ನು ನೇಮಿಸಲಾಗುತ್ತದೆ. ಈ ಯಾತ್ರೆಗೆ ಅಗತ್ಯವಿರುವ ಎಲ್ಲಾ ತಯಾರಿಯನ್ನೂ ಬಿಜೆಪಿ ಈಗಾಗಲೇ ಮಾಡಿಕೊಂಡಿದೆ.
ರಾಜ್ಯ ರಾಜಕಾರಣದಿಂದ ಶೋಭಾಗೆ ಮುಕ್ತಿ?ಲೋಕಸಭೆಗೆ ಬೆಂಗಳೂರಿಂದ ಸ್ಪರ್ಧೆ?
ಆಯಾ ಪ್ರದೇಶದ ಬಿಜೆಪಿ ಮುಖಂಡರ ಮನೆಯಲ್ಲೇ ರಾತ್ರಿ ನಾಯಕರು ತಂಗಲಿದ್ದು, ಅಲ್ಲಿನ ಜನರಿಗೆ ಸರ್ಕಾರದ ಬಗೆಗಿರುವ ಪ್ರತಿಕ್ರಿಯೆಯನ್ನು ಕಲೆಹಾಕುವ ಕೆಲಸವನ್ನೂ ಮಾಡುತ್ತಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಈ ಪಾದಯಾತ್ರೆ ಫಲನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.