ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ ಸೋನಿಯಾ ಆಪ್ತ ವಲಯದ ಟಾಮ್
ನವದೆಹಲಿ, ಮಾರ್ಚ್ 14: ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿಜೆಪಿ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ಸಿನ ಹಿರಿಯ ನಾಯಕ ಟಾಮ್ ವಡಕ್ಕನ್ ಅವರು ಗುರುವಾರ(ಮಾರ್ಚ್ 14)ದಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಟಾಮ್ ಅವರಿಗೆ ಹಾರ ಹಾಕಿ, ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡು ಸ್ವಾಗತಿಸಿದರು. 90ರ ದಶಕದಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿದಾಗ ಮಾಧ್ಯಮ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಿದ್ದ ಟಾಮ್ ಅವರು ಸೋನಿಯಾ ಗಾಂಧಿ, ಎಐಸಿಸಿ ಉನ್ನತ ವಲಯದಲ್ಲಿ ಗುರುತಿಸಿಕೊಂಡವರು.
ಪುಲ್ವಾಮಾ ಉಗ್ರರ ದಾಳಿ ಹಾಗೂ ಆನಂತರ ಭಾರತೀಯ ವಾಯುಸೇನೆ ನಡೆಸಿದ ಬಾಲಕೋಟ್ ದಾಳಿ ಬಗ್ಗೆ ಕಾಂಗ್ರೆಸ್ ತಳೆದ ನಿಲುವಿನಿಂದ ಮನನೊಂದು ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದಾಗಿ ಟಾಮ್ ಅವರು ಹೇಳಿದ್ದಾರೆ.
ಪಾಕಿಸ್ತಾನ
ಬೆಂಬಲಿತ
ಉಗ್ರರು
ನಮ್ಮ
ನೆಲದ
ಮೇಲೆ
ದಾಳಿ
ನಡೆಸಿದ
ಘಟನೆ
ಬಗ್ಗೆ
ಕಾಂಗ್ರೆಸ್
ಪಕ್ಷ
ತೆಗೆದುಕೊಂಡ
ನಿಲುವು,
ನೀಡಿದ
ಪ್ರತಿಕ್ರಿಯೆಗಳು
ದುಃಖಕರ,
ಇದರಿಂದ
ನನಗೆ
ತೀವ್ರವಾಗಿ
ಘಾಸಿಯಾಯಿತು.
Delhi: Congress leader Tom Vadakkan joins Bharatiya Janata Party in presence of Union Minister Ravi Shankar Prasad. pic.twitter.com/7AtbF2QfHj
— ANI (@ANI) March 14, 2019
ದೇಶದ ವಿಷಯದಲ್ಲಿ ಒಗ್ಗೂಡಬೇಕಾದ ಸಂದರ್ಭದಲ್ಲಿ ಜವಾಬ್ದಾರಿಯುತ ಪಕ್ಷವಾಗಿ ಕಾಂಗ್ರೆಸ್ ವರ್ತಿಸಲಿಲ್ಲ. ಹೀಗಾಗಿ, ಬೇರೆ ಆಯ್ಕೆಯಿಲ್ಲದೆ, ಪಖ್ಸಹ್ವನ್ನು ತೊರೆಯಬೇಕಾಯಿತು ಎಂದು ವಡಕ್ಕನ್ ಅವರು ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿಗೆ ಮುಜುಗರ ತಂದಿತ್ತ ಸುಜಯ್ ಪಾಟೀಲ್
ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರ ಪುತ್ರ ಸುಜಯ್ ವಿಖೆ ಪಾಟೀಲ್ ಅವರು ಮಂಗಳವಾರ (ಮಾರ್ಚ್ 12)ದಂದು ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರ್ಪಡೆಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು.