ಅಡ್ವಾಣಿಯಿಂದ ನರೇಂದ್ರ ಮೋದಿಗೆ ತುಂಬು ಹೃದಯದ ಅಭಿನಂದನೆ
ನವದೆಹಲಿ, ಮೇ 23: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬಿಜೆಪಿ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಅಭಿನಂದಿಸಿದ್ದಾರೆ.
"ಬಿಜೆಪಿಗೆ ಇಂಥ ಅಪ್ರತಿಮ ಜಯ ದಾಖಲಿಸಿಕೊಟ್ಟ ನರೇಂದ್ರ ಭಾಯಿ ಮೋದಿ ಅವರಿಗೆ ನನ್ನ ಅಭಿನಂದನೆಗಳು. ಬಿಜೆಪಿ ಅಧ್ಯಕ್ಷ ಅಮಿತ್ ಭಾಯಿ ಶಾ ಮತ್ತು ಬಿಜೆಪಿಯ ಸಂದೇಶ ಎಲ್ಲರಿಗೂ ತಲುಪುವಂತೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ನಮನಗಳು" ಎಂದು ಎಲ್ ಕೆ ಅಡ್ವಾಣಿ ಹೇಳಿದ್ದಾರೆ.
"ಭಾರತದಂಥ ದೊಡ್ಡ ದೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಗೊಳಿಸುದು ಸುಲಭವಿಲ್ಲ. ಆದರೆ ಅತ್ಯಂತ ಯಶಸಿವಾಗಿ ಅನ್ನು ನೆರವೇರಿಸಿದ ಚುನಾವಣಾ ಆಯೋಗಕ್ಕೂ ನನ್ನ ಅಭಿನಂದನೆಗಳು. ನಮ್ಮ ಈ ಮಹಾನ್ ದೇಶಕ್ಕೆ ಉತ್ತ ಭವಿಷ್ಯ ಸಿಗಲಿ" ಎಂದು ಅಡ್ವಾಣಿ ಹಾರೈಸಿದರು.
ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ 345, ಯುಪಿಎ 97 ಇತರರು 100 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್ ಡಿಎ ಎರಡನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿದೆ.