ಸಮುದಾಯದ ಮುಖಂಡರೊಂದಿಗೆ ಕೇಂದ್ರ ಸಚಿವರ ಭೇಟಿ ಮಾಡಿದ ಈಶ್ವರಪ್ಪ
ನವದೆಹಲಿ, ನವೆಂಬರ್ 24: ಸಮುದಾಯದ ಮುಖಂಡರೊಂದಿಗೆ ಸಚಿವ ಕೆಎಸ್ ಈಶ್ವರಪ್ಪ ಕೇಂದ್ರ ಸಚಿವರನ್ನು ಇಂದು ಭೇಟಿ ಮಾಡಿದರು.
ಕುರುಬರ ಎಸ್ಟಿ ಹೋರಾಟ ಸಮಿತಿಯು ಕುರುಬ ಸಮುದಾಯಕ್ಕೆ ಎಸ್ಟಿ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವರನ್ನು ಮಂಗಳವಾರ ಭೇಟಿ ಮಾಡಿದರು.
ನವದೆಹಲಿಯಲ್ಲಿ ಕೇಂದ್ರ ಬುಡಕಟ್ಟು ಜನಾಂಗದ ವ್ಯವಹಾರಗಳ ಸಚಿವ ರಾದ ರೇಣುಕಾ ಸಿಂಗ್ ಸರುತಾ ರವರನ್ನು ಭೇಟಿ ಮಾಡಿ ST ಬೇಡಿಕೆಯ ಮನವಿಯನ್ನು ಸಲ್ಲಿಸಿದರು.
ಶ್ರೀ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀಮಠ ಕಾಗಿನೆಲೆ ಕನಕಗುರುಪೀಠ, ಕಾಗಿನೆಲೆ ಮತ್ತು ಹೊಸದುರ್ಗ ಕಾಗಿನೆಲೆ ಕನಕಗುರುಪೀಠ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಶ್ರೀ ಶಿವಾನಂದಪುರಿ ಮಹಾಸ್ವಾಮಿಗಳು ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು..
ಈ
ಸಂದರ್ಭದಲ್ಲಿ
ಗ್ರಾಮೀಣಾಭಿವೃದ್ಧಿ
ಹಾಗೂ
ಪಂಚಾಯತ್
ರಾಜ್
ಸಚಿವ
ಕೆ.ಎಸ್.
ಈಶ್ವರಪ್ಪ,
ಮಾಜಿ
ಸಚಿವರು
ಮತ್ತು
ವಿಧಾನಪರಿಷತ್
ಸದಸ್ಯ
ಎಚ್.
ವಿಶ್ವನಾಥ್,
ಮಾಜಿ
ಸಚಿವ
ಎಚ್.ಎಂ.
ರೇವಣ್ಣ,
ಮಾಜಿ
ಸಚಿವರು
ಮತ್ತು
ಶಾಸಕರಾದ
ಬಂಡೆಪ್ಪ
ಕಾಶೆಂಪೂರ್
ಹಾಗೂ
ಮಾಜಿ
ಸಂಸದರು
ಮತ್ತು
ಹೋರಾಟ
ಸಮಿತಿ
ಅಧ್ಯಕ್ಷರಾದ
ಕೆ.ವಿರುಪಾಕ್ಷಪ್ಪನವರು
ಹಾಗೂ
ಸಮಿತಿಯ
ಕಾರ್ಯಾಧ್ಯಕ್ಷರಾದ
ಕೆ.ಮುಕುಡಪ್ಪರವರು,
ಕುರುಬರ
ಸಂಘದ
ಕಾರ್ಯಾಧ್ಯಕ್ಷರಾದ
ಸುಬ್ರಹ್ಮಣ್ಯ,
ಹಾಗೂ
ಪ್ರಧಾನ
ಕಾರ್ಯದರ್ಶಿ
ಯಾದ
ಡಿ
ವೆಂಕಟೇಶಮೂರ್ತಿ,
ಸಮಿತಿ
ಖಜಾಂಚಿಯಾದ
ಕೆ.ಈ.
ಕಾಂತೇಶ,
ಟಿ.ಬಿ.ಬಳಗಾವಿ,
ಪುಟ್ಟಸ್ವಾಮಿ,
ಮತ್ತು
ಸಮಿತಿ
ಪ್ರಧಾನ
ಕಾರ್ಯದರ್ಶಿಯಾದ
ಆನೇಕಲ್
ದೊಡ್ಡಯ್ಯ
ಹಾಜರಿದ್ದರು.