ತ್ವರಿತ ಅಲರ್ಟ್ ಗಳಿಗಾಗಿ
For Daily Alerts
2017 - ಜ್ಞಾನಪೀಠ ಪ್ರಶಸ್ತಿ ಪಡೆದ ಹಿಂದಿ ಲೇಖಕಿ ಕೃಷ್ಣ ಸೋಬ್ತಿ
ನವದೆಹಲಿ, ನವೆಂಬರ್ 04: ಪ್ರಖ್ಯಾತ ಹಿಂದಿ ಸಾಹಿತಿ ಕೃಷ್ಣ ಸೋಬ್ತಿ(92) ಅವರಿಗೆ 2017 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಸೋಬ್ತಿ ಅವರು ಒಬ್ಬ ಅನನ್ಯ ಕಾದಂಬರಿಕಾರ್ತಿ, ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಅವರು ಪ್ರಮುಖರು ಎಂದು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.
ಮೊದಲ ಜ್ಞಾನಪೀಠ ಪ್ರಶಸ್ತಿ ಡಿವಿ ಗುಂಡಪ್ಪಗೆ ಸಲ್ಲಬೇಕಿತ್ತು
ನ.03 ಶುಕ್ರವಾರದಂದು ಈ ಬಾರಿಯ ಜ್ಞಾನಪೀಠ ಪ್ರಶಸ್ತಿಗೆ ಸಾಬ್ತಿ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದ ಸಮಿತಿ, ಸಬ್ತಿ ಅವರು ಸಾಹಿತ್ಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಅಳವಡಿಸುವಲ್ಲಿ ತೋರಿದ ಧೈರ್ಯವನ್ನು ಶ್ಲಾಘಿಸಿತು.
ದಾರ್ ಸೆ ಬಿಚ್ಚುಡಿ, ಮಿತ್ರೋ ಮರ್ಜಾನಿ, ಜಿಂದಗಿನಾಮ, ದಿಲ್ ಒ ದನಿಶ್ ಸೇರಿದಂತೆ ಅವರು ಹಲವು ಪ್ರಮುಖ ಕೃತಿಗಳು ಇಂಗ್ಲಿಷ್ ಭಾಷೆಗೂ ಅನುವಾದವಾಗಿವೆ. ಸೋಬ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಭಾರತೀಯ ಸರಕಾರವು ಈ ಮೊದಲೇ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದು.
Comments
English summary
Renowned Hindi litterateur Krishna Sobti has been chosen for this year's Jnanpith Award, the Jnanpith Selection Board announced on Nov 3rd, Friday.
Story first published: Saturday, November 4, 2017, 13:00 [IST]