ಬಾಂಡ್ ನೀಡಲು ಒಪ್ಪಿಗೆ ಕೊಟ್ಟ ಕೇಜ್ರಿವಾಲ್
ನವದೆಹಲಿ, ಮೇ 27 : ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವೈಯಕ್ತಿಕ ಬಾಂಡ್ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಮಂಗಳವಾರ ಸಂಜೆ ಅಥವ ಬುಧವಾರ ಕೇಜ್ರಿವಾಲ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಕೇಂದ್ರ
ಸಚಿವ
ನಿತಿನ್
ಗಡ್ಕರಿ
ಅವರು
ದಾಖಲಿಸಿರುವ
ಕ್ರಿಮಿನಲ್
ಪ್ರಕರಣಕ್ಕೆ
ಸಂಬಂಧಿಸಿದಂತೆ
ಜಾಮೀನು
ಪಡೆಯಲು
ವೈಯಕ್ತಿಕ
ಬಾಂಡ್
ನೀಡಬೇಕೆಂದು
ದೆಹಲಿ
ಹೈಕೋರ್ಟ್
ನೀಡಿದ
ಸಲಹೆಗೆ
ಅರವಿಂದ್
ಕೇಜ್ರಿವಾಲ್
ಒಪ್ಪಿಗೆ
ಸೂಚಿಸಿದ್ದಾರೆ.
ಆದ್ದರಿಂದ
ತಿಹಾರ್
ಜೈಲಿನಿಂದ
ಮಂಗಳವಾರ
ಸಂಜೆ
ಇಲ್ಲವೇ
ಬುಧವಾರ
ಕೇಜ್ರಿವಾಲ್
ಹೊರಬರುವ
ನಿರೀಕ್ಷೆ
ಇದೆ.
[ಕೇಜ್ರಿವಾಲ್
ಗೆ
ನ್ಯಾಯಾಂಗ
ಬಂಧನ]
ಮಂಗಳವಾರ ಕೇಜ್ರಿವಾಲ್ ಜಾಮೀನು ಅರ್ಜಿಯ ಕುರಿತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಕೈಲಾಶ್ ಗಂಭೀರ್ ಮತ್ತು ಸುನೀತಾ ಗುಪ್ತಾ ಅವರನ್ನು ಒಳಗೊಂಡ ಪೀಠವು, ಜಾಮೀನನ್ನು ಒಂದು ಪ್ರತಿಷ್ಠೆಯ ವಿಷಯವನ್ನಾಗಿ ಮಾಡದೇ ಕಾನೂನು ಪ್ರಕಾರ ಬಾಂಡ್ ನೀಡಿ ಜಾಮೀನು ಪಡೆಯಬೇಕೆಂದು ಸಲಹೆ ನೀಡಿತ್ತು. ಕೇಜ್ರಿವಾಲ್ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. [ಕೇಜ್ರಿವಾಲ್ ನ್ಯಾಯಾಂಗ ಬಂಧನ ವಿಸ್ತರಣೆ]
ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಸಲ್ಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಕೇಜ್ರಿವಾಲ್ ಅವರು ಜಾಮೀನು ಪಡೆಯಲು ನಿರಾಕರಿಸಿದ್ದರು. ಆದ್ದರಿಂದ ಅವರನ್ನು ಎರಡು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪಟಿಯಾಲಾ ಕೋರ್ಟ್ ಆದೇಶ ನೀಡಿತ್ತು. ಮೇ.23ರಂದು ಅದನ್ನು ಜೂನ್ 6ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು.