ಬೇಗುಸಾರಾಯ್ನಲ್ಲಿ ಯಾವುದೇ ಕಾರಣಕ್ಕೂ ಮತ ವಿಭಜನೆ ಇಲ್ಲ : ಕನ್ಹಯ್ಯ ಕುಮಾರ್
ನವದೆಹಲಿ, ಏಪ್ರಿಲ್ 29: ಬೇಗುಸಾರಾಯ್ನಲ್ಲಿ ಮತ ವಿಭಜನೆ ಇಲ್ಲ ಪ್ರಶ್ನೆಯೇ ಇಲ್ಲ, ನಾವು ಒಂದಾಗಿರುತ್ತೇವೆ, ಬಿಜೆಪಿಯನ್ನು ಸೋಲಿಸುತ್ತೇವೆ ಎನ್ನುವ ಭರವಸೆ ಇದೆ ಎಂದು ಸಿಪಿಐ ಅಭ್ಯರ್ಥಿ ಕನ್ಹಯ್ಯ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಚುನಾವಣೆಯಲ್ಲಿ ಎಲ್ಲರಿಗಿಂತ ಕನ್ಹಯ್ಯ ಕುಮಾರ್ ಮೇಲೆಯೇ ಎಲ್ಲರ ಚಿತ್ತವಿತ್ತು. ಇಂದು ಬಿಹಾರದ ಬೇಗುಸಾರಾಯ್ನಲ್ಲಿ ಚುನಾವಣಾ ಪರೀಕ್ಷೆ ಎದುರಿಸುತ್ತಿದ್ದಾರೆ.
ಕ್ರೌಡ್ ಫಂಡಿಂಗ್ ಮೂಲಕ ದಾಖಲೆ ದೇಣಿಗೆ ಪಡೆದ ಕನ್ಹಯ್ಯ ಕುಮಾರ್
ಲೋಕಸಭೆ ಚುನಾವಣೆಯ ನಾಲ್ಕನೇ ಹಂತದ ಮತದಾನದಲ್ಲಿ 72 ಕ್ಷೇತ್ರಗಳಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನ ಇವತ್ತು ಆರಿಸಲಿದ್ದಾರೆ. 900ಕ್ಕೂ ಹೆಚ್ಚು ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
72 ಕ್ಷೇತ್ರಗಳಲ್ಲಿ ಹತ್ತಾರು ಘಟಾನುಘಟಿ ಸ್ಪರ್ಧಾಳುಗಳು ಕಣದಲ್ಲಿದ್ದಾರೆ. ಕೆಲವರು ಪಳಗಿದ ಹಳೆಯ ಹುಲಿಗಳೆನಿಸಿದರೆ, ಮತ್ತೆ ಕೆಲವರು ಹೊಸ ಭರವಸೆ ಮೂಡಿಸಿರುವ ಉದಯೋನ್ಮುಖ ರಾಜಕಾರಣಿಗಳಾಗಿದ್ದಾರೆ. ಮತ್ತೆ ಕೆಲವರು ವಂಶಪಾರಂಪರ್ಯವಾಗಿ ಸೀಟು ಗಿಟ್ಟಿಸಿಕೊಂಡವರಾಗಿದ್ದಾರೆ.
ಕನ್ಹಯ್ಯ ಕುಮಾರ್ ಅವರ ವಿರುದ್ಧ ಬಿಜೆಪಿಯ ಗಿರಿರಾಜ್ ಸಿಂಗ್, ಆರ್ಜೆಡಿಯ ತನ್ವೀರ್ ಹಸನ್ ಕಣದಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬಿಹಾರದಲ್ಲಿ ಬಿಜೆಪಿಯೇ ಬಲಿಷ್ಠವಾಗಿದೆ.
ಆದರೆ ಆ ದಾಖಲೆಯನ್ನು ಮುರಿದು ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು 32 ವರ್ಷದ ಕನ್ಹಯ್ಯ ಕುಮಾರ್ ಹೊರಟಿದ್ದಾರೆ. ಬಿಜೆಪಿ ಹೊರತುಪಡಿಸಿ ಇನ್ನೂ ಎರಡು ಪಕ್ಷಗಳಿವೆ, ಆದರೆ ನಾವು ಒಂದಾಗಿರುತ್ತೇವೆ ಮತಗಳು ಯಾವುದೇ ಕಾರಣಕ್ಕೂ ಮತವಿಭಜನೆಯಾಗುವುದಿಲ್ಲ ಎಂದಿದ್ದಾರೆ.
ಏಪ್ರಿಲ್
29ರ
ಚುನಾವಣೆಯಲ್ಲಿ
ಕಣದಲ್ಲಿರುವ
ಪ್ರಮುಖರು:
-ಕನ್ಹಯ್ಯ
ಕುಮಾರ್(ಸಿಪಿಐ),
ಬೇಗುಸರೈ,
ಬಿಹಾರ
-ಉಪೇಂದ್ರ
ಕುಶ್ವಾಹ(ಆರ್ಎಲ್ಎಸ್ಪಿ),
ಉಜಿಯಾರ್ಪುರ್,
ಬಿಹಾರ
-ರಾಮಚಂದ್ರ
ಪಾಸ್ವಾನ್(ಎಲ್ಜೆಎಸ್ಪಿ),
ಸಮಷ್ಟಿಪುರ್,
ಬಿಹಾರ
-ಊರ್ಮಿಳಾ
ಮಟೋಂಡ್ಕರ್(ಕಾಂಗ್ರೆಸ್),
ಮುಂಬೈ
ನಾರ್ಥ್,
ಮಹಾರಾಷ್ಟ್ರ
-
ಗಿರಿರಾಜ್
ಸಿಂಗ್(ಬಿಜೆಪಿ),
ಬೇಗುಸರೈ,
ಬಿಹಾರ
-ಪೂನಂ
ಮಹಾಜನ್(ಬಿಜೆಪಿ),
ಮುಂಬೈ
ನಾರ್ಥ್-ಸೆಂಟ್ರಲ್,
ಮಹಾರಾಷ್ಟ್ರ
-ಮಿಲಿಂದ್
ದೇವೋರಾ(ಕಾಂಗ್ರೆಸ್),
ಮುಂಬೈ
ಸೌಥ್,
ಮಹಾರಾಷ್ಟ್ರ
-ಸಾಕ್ಷಿ
ಮಹಾರಾಜ್(ಬಿಜೆಪಿ),
ಉನ್ನಾವೋ,
ಉ.ಪ್ರ.
-ಡಿಂಪಲ್
ಯಾದವ್(ಎಸ್ಪಿ),
ಕನ್ನೋಜ್,
ಉ.ಪ್ರ.
-ಯೋಗೇಂದ್ರ
ಯಾದವ್(ಪಕ್ಷೇತರ),
ಛಾತ್ರ,
ಜಾರ್ಖಂಡ್