ಮೋದಿ ಸರ್ಕಾರ ವಿರುದ್ಧ ಸಿಡಿದೆದ್ದ ಜನತಾ ಪರಿವಾರ
ನವದೆಹಲಿ, ಡಿ.22: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವೈಫಲ್ಯಗಳು, ಪೊಳ್ಳು ಭರವಸೆಗಳನ್ನು ಮುಂದಿಟ್ಟುಕೊಂಡು ನ್ಯಾಯಕ್ಕಾಗಿ ಆಗ್ರಹಿಸಿ ಜನತಾ ಪರಿವಾರ ಜಂತರ್ ಮಂತರ್ ಬಳಿ ಸೋಮವಾರ ಬೃಹತ್ ಪ್ರತಿಭಟನೆ ಆರಂಭಿಸಿದೆ.
ವಿದೇಶದಲ್ಲಿರುವ ಕಪ್ಪು ಹಣವನ್ನು ತರಲು ವಿಫಲವಾಗಿದೆ ಎಂದು ಆರೋಪಿಸಿ 6 ಜನತಾ ಪರಿವಾರದ ಪ್ರಮುಖ ಪಕ್ಷಗಳು ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದವು.
ಜನತಾ
ಪರಿವಾರದ
ಅಂಗ
ಪಕ್ಷಗಳಾದ
ಜೆಡಿಯು,
ಜೆಡಿಎಸ್
,
ಆರ್ಜೆಡಿ,
ರಾಷ್ಟ್ರೀಯ
ಲೋಕ
ದಳ,
ಸಮಾಜವಾದಿಪಕ್ಷ,
ಎಸ್ಜೆಪಿ
ಸೇರಿದಂತೆ
ಒಟ್ಟು
6
ಪಕ್ಷಗಳು
ದೆಹಲಿಯ
ಜಂತರ್
ಮಂತರ್ನಲ್ಲಿ
ಬೃಹತ್
ಪ್ರತಿಭಟನೆ
ನಡೆಸಿವೆ.
Dharam
ke
naam
par
khilwad
bandh
karo,PM
ji
aapne
vaada
kiya
tha
ki
aap
100din
mei
kala
dhan
laogey:
Azam
Khan
at
Jantar
Mantar
—
ANI
(@ANI_news)
December
22,
2014
ಕಳೆದ ಲೋಕಸಭೆ ಚುನಾವಣೆ, ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಜನತಾ ಪರಿವಾರದೊಡನೆ ಗುರುತಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳು ಉತ್ತಮ ಸ್ಥಿತಿಯಲ್ಲಿಲ್ಲ. ಹೀಗಾಗಿ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸಿ ಮತ್ತೊಮ್ಮೆ ತೃತೀಯರಂಗ ಸ್ಥಾಪನೆ ಮಾಡುವ ಪ್ರಕ್ರಿಯೆ ಡಿ.5ರಂದು ಚಾಲನೆ ನೀಡಲಾಗಿತ್ತು. [ಜನತಾ ಪರಿವಾರ ಉದಯ]
ಟಿಎಂಸಿ
ಬೆಂಬಲ:
ಜನತಾ
ಪರಿವಾರದ
ಹೋರಾಟಕ್ಕೆ
ಟಿಎಂಸಿ
ಕೂಡ
ಬೆಂಬಲ
ಸೂಚಿಸಿರುವುದು
ವಿಶೇಷವಾಗಿದೆ.ಮಾಜಿ
ಪ್ರಧಾನಿ
ಎಚ್.ಡಿ.ದೇವೇಗೌಡ,
ಮಾಜಿ
ಮುಖ್ಯಮಂತ್ರಿಗಳಾದ
ಮುಲಾಯಂ
ಸಿಂಗ್
ಯಾದವ್,
ಲಾಲೂ
ಪ್ರಸಾದ್
ಯಾದವ್,
ನಿತಿಶ್
ಕುಮಾರ್,
ಜೆಡಿಯು
ಮುಖಂಡ
ಶರದ್
ಯಾದವ್
ಸೇರಿದಂತೆ
ಹಲವರು
ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದಾರೆ.
ಲೋಕಸಭೆ ಚುನಾವಣೆಗೂ ಮುನ್ನ ದೇಶದ ಜನತೆಗೆ ಮೋದಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕೇವಲ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಪ್ರತಿಭಟನಾ ನಿರತರು ದೂರಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಒಂದೇ ಒಂದು ಭರವಸೆಯನ್ನು ಕೂಡ ಈಡೇರಿಸಿಲ್ಲ.
ಬೆಂಗಳೂರಿನಲ್ಲಿ
ಹಿಂದೂ
ಸಂಘಟನೆಗಳ
ವಿರುದ್ಧ
ಕಾಂಗ್ರೆಸ್
ಪ್ರತಿಭಟನೆ
Bengaluru
:
Congress
protest
against
VHP,RSS,BJP
over
conversion
issue
pic.twitter.com/AoynU7MVYt
—
ANI
(@ANI_news)
December
22,
2014
ಮತಾಂತರದ ಬಗ್ಗೆ ಗೊಂದಲ: ಧರ್ಮ ಮತ್ತು ಜಾತಿಗಳ ನಡುವೆ ಕಂದಕ ಸೃಷ್ಟಿಸಿದ್ದು, ಕೋಮುವಾದ ಎಲ್ಲೆಡೆ ಹಬ್ಬುತ್ತಿದೆ ಎಂದು ಆರೋಪಿಸಿದರು. ದೇಶದಲ್ಲಿ ಮತಾಂತರಕ್ಕೆ ಕೇಂದ್ರ ಸರ್ಕಾರವೇ ನೇರ ಕುಮ್ಮಕ್ಕು ನೀಡುತ್ತದೆ. ಸಂಘ ಪರಿವಾರದ ವಿಎಚ್ಪಿ, ಆರ್ಎಸ್ಎಸ್, ಭಜರಂಗದಳ ಸೇರಿದಂತೆ ಮತ್ತಿತರ ಸಂಘಟನೆಗಳು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆಯಾಗಿದ್ದು, ಪ್ರಧಾನಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ ಏಕೆ ಎಂದು ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ದೇಶದಲ್ಲಿ ಇಂದು ಕೋಮುವಾದ ತಾಂಡವವಾಡುತ್ತಿದೆ. ಎಲ್ಲಾ ಸಮಾನ ಪಕ್ಷಗಳು ಇದರ ವಿರುದ್ಧ ಒಗ್ಗೂಡಬೇಕು. ಇಲ್ಲದಿದ್ದರೆ ದೇಶಕ್ಕೆ ಗಂಡಾಂತರ ಬರಲಿದೆ. ಲೋಕಸಭೆ ಚುನಾವಣೆಗೂ ಮುನ್ನ ದೇಶದ ಜನತೆಗೆ ಮೋದಿ ನೀಡಿದ್ದ ಆಶ್ವಾಸನೆಯನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಕೇವಲ ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಜನತಾ ಪರಿವಾರದ ನಾಯಕರು ಅಭಿಪ್ರಾಯಪಟ್ಟಿದ್ದಾರೆ.