ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ವಿಶೇಷ ಅಧಿವೇಶನ ನಡೆಸಿ: ನಾಯ್ಡುಗೆ ಜೈರಾಮ್ ಪತ್ರ

|
Google Oneindia Kannada News

ನವದೆಹಲಿ, ಏಪ್ರಿಲ್ 07: ಮಹತ್ವದ ಶಾಸನವೊಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮೇ-ಜೂನ್ ನಲ್ಲಿ ಸುಮಾರು ಎರಡು ವಾರಗಳ ವಿಶೇಷ ಅಧಿವೇಶನ ನಡೆಸುವಂತೆ ಕೋರಿ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ಸಿಗೆ ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲ: ಅನಂತ್ ಕುಮಾರ್ ಕಾಂಗ್ರೆಸ್ಸಿಗೆ ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲ: ಅನಂತ್ ಕುಮಾರ್

"ಮುಂಗಾರು ಅಧಿವೇಶನವನ್ನು ಸಾಮಾನ್ಯವಾಗಿ ಜುಲೈ ಮಧ್ಯಭಾಗದಲ್ಲಿ ಕರೆಯಲಾಗುತ್ತದೆ ಎಮಬುದು ನನಗೆ ತಿಳಿದಿದೆ. ಆದರೆ ಈ ವಿಶೇಷ ಅಧಿವೇಶನ ನಡೆಸುವುದರಿಂದ ವಿಶಿಷ್ಟ ಸಂದೇಶ ಸಿಕ್ಕಂತಾಗುತ್ತದೆ" ಎಂದು ತಮ್ಮ ಮನವಿ ಪತ್ರದಲ್ಲಿ ಅವರು ಬರೆದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ನಾಯಕ ವಿಜಯ್ ಗೋಯಲ್, 'ಅಧಿವೇಶನ ನಡೆಯುವಾಗ ಅಡ್ಡಿಪಡಿಸುವುದೂ ಅವರೇ(ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು). ಈಗ ಮತ್ತೊಮ್ಮೆ ಅಧಿವೇಶನ ಮಾಡುವುದಕ್ಕೆ ಹೇಳುವವರೂ ಅವರೇ. ಅವರಿಗೆ ಮತ್ತೆ ಸಂಬಳ ಮತ್ತು ಭತ್ಯೆ ಬೇಕಾಗಿದೆಯೇ?' ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಕೇಂದ್ರದ ವಿರುದ್ಧ ವಿರೋಧ ಪಕ್ಷಗಳಿಂದ ಇಂದು ಸಂಸತ್ತಿನೆದುರು ಪ್ರತಿಭಟನೆಕೇಂದ್ರದ ವಿರುದ್ಧ ವಿರೋಧ ಪಕ್ಷಗಳಿಂದ ಇಂದು ಸಂಸತ್ತಿನೆದುರು ಪ್ರತಿಭಟನೆ

ಒಂದು ವಾರದ ಹಿಂದೆ ನಡೆದ ಸಂಸತ್ ಅಧಿವೇಶನವನ್ನು ಸರಿಯಾಗಿ ಒಂದು ದಿನವೂ ನಡೆಯುವುದಕ್ಕೆ ಬಿಡದೆ, ಅಧಿವೇಶನ ಸಂಪೂರ್ಣ ಅನವಶ್ಯಕವಾಗುವಂತೆ ವಿಪಕ್ಷಗಳು ಮಾಡಿದ್ದವು. ಆಡಳಿತ ಪಕ್ಷವನ್ನು ದೂರುವ ನೆಪದಿಂದಲೇ ಸಾಕಷ್ಟು ಪ್ರತಿಭಟನೆಗಳ ಸಂಸತ್ತಿನೊಳಗೂ ಹೊರಗೂ ನಡೆದಿದ್ದವು.

English summary
Congress Rajya Sabha MP Jairam Ramesh has written a letter to Vice President and Rajya Sabha Chairman Venkaiah Naidu, seeking a special two-week session in May-June with an aim to "pass important legislation."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X