ಪ್ರಧಾನಿ ಮೋದಿ ವಿರುದ್ಧ ಫೇಸ್ಬುಕ್ ಉದ್ಯೋಗಿಗಳಿಂದ ಬಹಿರಂಗ ಟೀಕೆ: ಫೇಸ್ಬುಕ್ ಸಿಇಒಗೆ ಪತ್ರ
ನವದೆಹಲಿ, ಸೆಪ್ಟೆಂಬರ್ 01: ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಅವರಿಗೆ ಪತ್ರ ಬರೆದಿದ್ದಾರೆ. ಫೇಸ್ಬುಕ್ ಇಂಡಿಯಾದಲ್ಲಿ ಕೆಲಸ ಮಾಡುವ ಮತ್ತು ಪ್ರಮುಖ ಹುದ್ದೆಗಳನ್ನು ನಿರ್ವಹಿಸುವ ಪ್ರಮುಖ ನೌಕರರಿಂದಲೇ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಫೇಸ್ಬುಕ್ ಆಡಳಿತರೂಢ ಬಿಜೆಪಿಯ ಬಗ್ಗೆ ಪಕ್ಷಪಾತ ತೋರುತ್ತಿದೆ ಎಂಬ ವಿವಾದದ ಮಧ್ಯೆ ರವಿಶಂಕರ್ ಪ್ರಸಾದ್ರಿಂದ ಈ ರೀತಿಯಾದ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಫೇಸ್ಬುಕ್ನ ಉದ್ಯೋಗಿಗಳು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿರಿಯ ಸಚಿವರನ್ನು ನಿಂದಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಜುಕರ್ಬರ್ಗ್ಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ ದುರುಪಯೋಗ ಆರೋಪ: ಫೇಸ್ಬುಕ್ಗೆ ಸಮನ್ಸ್ ನೀಡಿದ ಸಂಸದೀಯ ಸ್ಥಾಯಿ ಸಮಿತಿ
"2019ರ ಚುನಾವಣೆ ಸಂದರ್ಭದಲ್ಲಿ ಬಲ-ಮಧ್ಯಮ ಸಿದ್ಧಾಂತವನ್ನು ಪ್ರತಿಪಾದಿಸುವ ಜನರ ಪೇಜ್ಗಳನ್ನು ಡಿಲೀಟ್ ಮಾಡಿದ್ದಷ್ಟೆ ಅಲ್ಲ, ಅದರ ವ್ಯಾಪ್ತಿಯನ್ನು ಗಣನೀಯವಾಗಿ ಕಡಿಮೆ ಮಾಡಲು, ಹಾಗೂ ತೊಂದರೆಗೊಳಗಾದ ಜನರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವೂ ನೀಡದಂತೆ ಫೇಸ್ಬುಕ್ ಆಡಳಿತ ನಿರಂತರ ಪ್ರಯತ್ನ ನಡೆಸಿತು," ಎಂದು ಸಚಿವರು ಆರೋಪ ಹೊರಿಸಿದ್ದಾರೆ.
ಸೋಷಿಯಲ್ ಮೀಡಿಯಾ ಫೇಸ್ಬುಕ್ ಸಂಬಂಧಿಸಿದಂತೆ ಈ ಬಗ್ಗೆ ಬರೆದ ಡಜನ್ಗಟ್ಟಲೆ ಮೇಲ್ಗಳಿಗೆ ಉತ್ತರಿಸಲಾಗಿಲ್ಲ. ಆದಾಗ್ಯೂ, ವಿಭಿನ್ನ ವಾಸ್ತವತೆಯನ್ನು ಚಿತ್ರಿಸಲು "ಆಯ್ದ ಸೋರಿಕೆ" ಗಳ ಮೂಲಕ ಪ್ರಯತ್ನಗಳು ನಡೆದವು ಎಂದು ಅವರು ಬರೆದಿದ್ದಾರೆ.
"ಗಾಸಿಪ್, ಪಿಸುಮಾತುಗಳು ಮತ್ತು ಇನ್ವೆಂಡೊ ಮೂಲಕ ಭಾರತದ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು ಖಂಡನೀಯ. ಅಂತರರಾಷ್ಟ್ರೀಯ ಮಾಧ್ಯಮಗಳೊಂದಿಗಿನ ಫೇಸ್ಬುಕ್ನ ಈ ಒಡನಾಟವು ನಮ್ಮ ಮಹಾ ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲೆ, ವಿಭಿನ್ನ ಆಕಾಂಕ್ಷೆಗಳನ್ನು ಬಿತ್ತಲು ದುಷ್ಕೃತ್ಯದ ಪಟ್ಟಭದ್ರ ಹಿತಾಸಕ್ತಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡುತ್ತಿದೆ" ಎಂದು ಪ್ರಸಾದ್ ಆರೋಪಿಸಿದ್ದಾರೆ.
ಜೊತೆಗೆ ಅಂತಹ ಅಂಶಗಳ ವಿರುದ್ಧ ಇನ್ನೂ ಯಾವುದೇ ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ ಅವರು, "ಭಾರತದಲ್ಲಿ ಹಿಂಸಾಚಾರ ಮತ್ತು ರಾಜಕೀಯ ಅಸ್ಥಿರತೆಯನ್ನು ಉಂಟುಮಾಡುವಲ್ಲಿ ಪ್ರೋತ್ಸಾಹ ಹೊಂದಿರುವ ಅದೇ ಪಟ್ಟಭದ್ರ ಗುಂಪುಗಳು ಇದನ್ನು ತಡೆಹಿಡಿಯುತ್ತಿದೆಯೇ" ಎಂದು ಕೇಳಿದರು.
"ಆಂತರಿಕ ಶಕ್ತಿಯ ಹೋರಾಟ" ದಿಂದ ಮಾತ್ರ "ಪರ್ಯಾಯ ವಾಸ್ತವವನ್ನು ತಿರುಚಲು ಮತ್ತು ಚಿತ್ರಿಸಲು ಸತ್ಯಗಳನ್ನು ಹೇಗೆ ತಿರುಗಿಸಲಾಗುತ್ತಿದೆ ಎಂಬುದನ್ನು ವಿವರಿಸಬಹುದು" ಎಂದು ಅವರು ಹೇಳಿದರು.