ಗಡಿ ರಹಿತ ಹೋರಾಟಕ್ಕೆ ಸಿದ್ಧರಾಗಲು ಕರೆ ನೀಡಿದ ರಾಹುಲ್ ಗಾಂಧಿ
ನವದೆಹಲಿ, ಮಾರ್ಚ್ 09: ಗಡಿ ರಹಿತ ಹೋರಾಟಕ್ಕೆ ಸಿದ್ಧರಾಗಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಭಾರತದ ಭೂಪ್ರದೇಶದ ಒಂದು ಇಂಚು ಕೂಡ ಕಳೆದುಹೋಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದರೂ, ಚೀನಾ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
"ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟವರ ಪೋಷಕರಿಗೆ ಕೇಂದ್ರದಿಂದ ಮುಳ್ಳಿನ ಬೇಲಿ"
2.5-ಮುಂಭಾಗದ ಯುದ್ಧದ ಹಿಂದಿನ ಅಭ್ಯಾಸವು ಬಳಕೆಯಲ್ಲಿಲ್ಲದ ಕಾರಣ ದೇಶ ಗಡಿ ರಹಿತ ಹೋರಾಟಕ್ಕೆ ಸಿದ್ಧವಾಗಬೇಕಿದೆ ಎಂದಿದ್ದಾರೆ. 2.5 ಮುಂಭಾಗದ ಯುದ್ಧವನ್ನು ಎದುರಿಸಲು ಭಾರತೀಯ ಪಡೆಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಈಗ ಬಳಕೆಯಲ್ಲಿಲ್ಲ. ಗಡಿ ರಹಿತ ಯುದ್ಧಕ್ಕೆ ನಾವು ಸಿದ್ಧರಾಗಿರಬೇಕು ಎಂದು ಅವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದು ಹಿಂದಿನ ಅಭ್ಯಾಸಗಳು ಮತ್ತು ಪರಂಪರೆ ವ್ಯವಸ್ಥೆ ಬಗ್ಗೆ ಅಲ್ಲ, ರಾಷ್ಟ್ರವಾಗಿ ಯೋಚಿಸುವ, ಪರಿವರ್ತಿಸುವ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ.
ಒಂದೆಡೆ ಗಡಿಯಿಂದ ಚೀನಾ ಭಾರತ ಎರಡೂ ಸೇನೆಯು ಹಿಂದೆ ಸರಿದಿದೆ. ಗಡಿ ನಿಯಂತ್ರಣ ರೇಖೆಯ ಬಳಿ ಚೀನಾ ಸಾಕಷ್ಟು ಪ್ರಮಾಣದಲ್ಲಿ ಸೇನೆ ಮತ್ತು ಶಸ್ತ್ರಾಸ್ತ್ರವನ್ನು ನಿಯೋಜನೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಭಾರತವೂ ಪ್ರತ್ಯುತ್ತರವಾಗಿ ಹೆಚ್ಚಿನ ಪಡೆ, ಶಸ್ತ್ರಾಸ್ತ್ರ ನಿಯೋಜಿಸಿತ್ತು.