ನಾನು ನನ್ನ ಸ್ನೇಹಿತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಅರುಣ್ ಜೇಟ್ಲಿ ಪುಣ್ಯ ತಿಥಿಯಂದು ಮೋದಿ ಸ್ಮರಣೆ
ನವದೆಹಲಿ, ಆಗಸ್ಟ್ 24: ಕೇಂದ್ರ ಮಾಜಿ ಸಚಿವ ಮತ್ತು ಬಿಜೆಪಿಯ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರ ಮೊದಲ ಪುಣ್ಯ ತಿಥಿಯಂದು ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಬಿಜೆಪಿ ನಾಯಕರು ಅವರಿಗೆ ಗೌರವ ಸಲ್ಲಿಸಿದ್ದಾರೆ.
''ಈ ದಿನ, ಕಳೆದ ವರ್ಷ ನಾವು ಅರುಣ್ ಜೇಟ್ಲಿ ಅವರನ್ನು ಕಳೆದುಕೊಂಡೆವು. ನಾನು ನನ್ನ ಸ್ನೇಹಿತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅರುಣ್ ಜಿ ಜಿ ಶ್ರದ್ಧೆಯಿಂದ ಭಾರತಕ್ಕೆ ಸೇವೆ ಸಲ್ಲಿಸಿದರು. ಅವರ ಬುದ್ಧಿ, ಬುದ್ಧಿಶಕ್ತಿ, ಕಾನೂನು ಕುಶಾಗ್ರಮತಿ ಮತ್ತು ವ್ಯಕ್ತಿತ್ವವು ಗಮನಾರ್ಹವಾದದ್ದಾಗಿತ್ತು'' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
On this day, last year, we lost Shri Arun Jaitley Ji. I miss my friend a lot.
— Narendra Modi (@narendramodi) August 24, 2020
Arun Ji diligently served India. His wit, intellect, legal acumen and warm personality were legendary.
Here is what I had said during a prayer meeting in his memory. https://t.co/oTcSeyssRk
ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಎರಡೂ ಪಕ್ಷಕ್ಕೆ 'ಮೋದಿಯೇ ಟ್ರಂಪ್ ಕಾರ್ಡ್'
ಗೃಹ ಸಚಿವ ಅಮಿತ್ ಶಾ ಅವರು ಜೇಟ್ಲಿ ಪುಣ್ಯ ತಿಥಿಯಂದು ಬಿಜೆಪಿ ಮುಖ್ಯಸ್ಥ ಅರುಣ್ ಜೇಟ್ಲಿ ಅವರಿಗೆ ಗೌರವ ಸಲ್ಲಿಸಿದರು. ಷಾ ಅವರನ್ನು "ಅತ್ಯುತ್ತಮ ರಾಜಕಾರಣಿ" ಎಂದು ಕರೆದಿದ್ದು, ಅವರು "ಭಾರತೀಯ ರಾಜಕೀಯದಲ್ಲಿ ಯಾವುದೇ ಸಾಟಿಯಿಲ್ಲದ ನಾಯಕ" ಎಂದು ಬಣ್ಣಿಸಿದ್ದಾರೆ.
''ಅರುಣ್ ಜೇಟ್ಲಿ ಜಿ, ಒಬ್ಬ ಅತ್ಯುತ್ತಮ ರಾಜಕಾರಣಿ, ಚತರ ವಾಗ್ಮಿ ಮತ್ತು ಭಾರತೀಯ ರಾಜಕೀಯದಲ್ಲಿ ಯಾವುದೇ ಸಾಟಿಯಿಲ್ಲದ ನಾಯಕ. ಅವರು ಬಹುಮುಖಿ ಮತ್ತು ಸ್ನೇಹಿತರ ಸ್ನೇಹಿತರಾಗಿದ್ದರು. ಅವರ ಉನ್ನತ ಪರಂಪರೆ, ಪರಿವರ್ತಕ ದೃಷ್ಟಿಕೋನ ಮತ್ತು ರಾಷ್ಟ್ರದ ಮೇಲಿನ ಭಕ್ತಿಗಾಗಿ ಅವರು ಯಾವಾಗಲೂ ನೆನಪಿನಲ್ಲುಳಿಯುತ್ತಾರೆ'' ಎಂದು ಶಾ ಟ್ವೀಟ್ ಮಾಡಿದ್ದಾರೆ.
Remembering Arun Jaitley ji, an outstanding politician, prolific orator and a great human being who had no parallels in Indian polity. He was multifaceted and a friend of friends, who will always be remembered for his towering legacy, transformative vision and devotion to nation.
— Amit Shah (@AmitShah) August 24, 2020
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ ಸಹ ಅರುಣ್ ಜೇಟ್ಲಿ ಅವರಿಗೆ ಗೌರವ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.