'ಕೆಟ್ಟ ಹಣಕಾಸು ಮಂತ್ರಿ' ಟೀಕೆಗೆ ಸ್ವಾಗತ, ಆದರೆ.: ನಿರ್ಮಲಾ ಸೀತಾರಾಮನ್
ನವದೆಹಲಿ, ಡಿಸೆಂಬರ್ 03: 'ಟೀಕೆಗಳನ್ನು ಸ್ವೀಕರಿಸಲು ನಮ್ಮ ಸರ್ಕಾರ ಸದಾ ಮುಕ್ತವಾಗಿದೆ' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ..
ಲೋಕಸಭೆಯಲ್ಲಿ ಮಾತನಾಡಿದ ಅವರು, 'ನನ್ನನ್ನು ಕೆಟ್ಟ ಹಣಕಾಸು ಸಚಿವೆ ಎನ್ನಲಾಗುತ್ತಿದೆ. ನಾನು ಒಪ್ಪಿಕೊಳ್ಳುತ್ತೇನೆ, ಆದರೆ ನನ್ನ ಅವಧಿ ಮುಗಿಯುವವರೆಗೆ ಆದರೂ ಕಾಯಿರಿ, ಆರ್ಥಿಕತೆಯನ್ನು ಉತ್ತಮಗೊಳಿಸಲು ಸಲಹೆಗಳನ್ನಾದರೂ ಕೊಡಿ' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ನಿರ್ಮಲಾ ಸೀತಾರಾಮನ್ಗೆ ಯಾವ ಅರ್ಥಶಾಸ್ತ್ರವೂ ಗೊತ್ತಿಲ್ಲ: ಸುಬ್ರಮಣಿಯನ್ ಸ್ವಾಮಿ
ಇತ್ತೀಚೆಗಷ್ಟೆ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರು, 'ನಿರ್ಮಲಾ ಸೀತಾರಾಮನ್ ಗೆ ಆರ್ಥಿಕತೆ ಬಗ್ಗೆ ಗೊತ್ತಿಲ್ಲ, ಅವರೊಬ್ಬ ಕೆಟ್ಟ ಹಣಕಾಸು ಸಚಿವೆ' ಎಂದು ಟೀಕಿಸಿದ್ದರು.
'ನಾನು ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತೇನೆ, ಮತ್ತು ಅವುಗಳಿಗೆ ಸೂಕ್ತ ರೀತಿಯಲ್ಲಿಯೇ ಉತ್ತರ ನೀಡುತ್ತಾ ಬಂದಿದ್ದೇನೆ' ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಷ್ಟೆ ಅಲ್ಲದೆ ಇತ್ತೀಚೆಗಷ್ಟೆ ರಾಹುಲ್ ಬಜಾಜ್ ಅವರು, 'ಕೇಂದ್ರ ಸರ್ಕಾರವನ್ನು ಟೀಕಿಸುವ ಮುಕ್ತ ವಾತಾವರಣ ಇಲ್ಲ, ಯುಪಿಎ ಅವಧಿಯಲ್ಲಿ ಈ ಭಯ ಇರಲಿಲ್ಲ' ಎಂದು ಗೃಹ ಮಂತ್ರಿ ಅಮಿತ್ ಶಾ ಎದುರೇ ಹೇಳಿದ್ದಾರೆ. ಇದು ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.