ವಿದ್ಯಾರ್ಥಿ ಚಳವಳಿಯಲ್ಲಿ ಜಿಹಾದಿಗಳು, ಮಾವೊವಾದಿಗಳು ಸೇರಿಕೊಳ್ಳುತ್ತಿದ್ದಾರೆ: ನಿರ್ಮಲಾ
ನವದೆಹಲಿ, ಡಿಸೆಂಬರ್ 16: ವಿದ್ಯಾರ್ಥಿ ಚಳವಳಿಯ ಒಳಗೆ ಜಿಹಾದಿಗಳು, ಮಾವೊವಾದಿಗಳು ಮತ್ತು ಪ್ರತ್ಯೇಕತಾವಾದಿಗಳು ಸೇರಿಕೊಳ್ಳುತ್ತಿರುವುದರ ಬಗ್ಗೆ ನಾಗರಿಕರು ಆತಂಕ ಪಡಬೇಕಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಆದರೆ ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಿಜಕ್ಕೂ ಏನಾಯಿತು ಎಂಬ ಮಾಹಿತಿ ತಮಗೆ ಗೊತ್ತಿಲ್ಲ ಎಂದು ತಿಳಿಸಿದರು.
'ಜಾಮಿಯಾದಲ್ಲಿ ಕಳೆದ ರಾತ್ರಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ಜಿಹಾದಿಗಳು, ಮಾವೊವಾದಿಗಳು ಮತ್ತು ಪ್ರತ್ಯೇಕತಾವಾದಿಗಳು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸೇರಿಕೊಳ್ಳುತ್ತಿರುವುದರ ಬಗ್ಗ ನಾವು ಚಿಂತೆ ಪಡಬೇಲಾಗಿದೆ' ಎಂದು ನಿರ್ಮಲಾ ಹೇಳಿದರು.
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸರ ವಿರುದ್ಧವೇ ಅನುಮಾನ
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಜನರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದು ಅವರ ಹತಾಶೆಯನ್ನು ತೋರಿಸುತ್ತಿದೆ ಎಂದು ಆರೋಪಿಸಿದರು.
ವಿಶ್ವವಿದ್ಯಾಲಯಗಳಲ್ಲಿ ಚಳವಳಿಗಳು ಹೊಸತಲ್ಲ. ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ಒಂದು ಸಿದ್ಧಾಂತದೆಡೆಗೆ ಆಕರ್ಷಿತರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದಕ್ಷಿಣ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯುಗಳನ್ನು ಬಳಸಿದ್ದರು. ಘಟನೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪೊಲೀಸರು ಶೌಚಾಲಯ, ಗ್ರಂಥಾಲಯಗಳಿಂದ ವಿದ್ಯಾರ್ಥಿಗಳನ್ನು ಎಳೆದು ತಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ: ಪೊಲೀಸರ ವಿರುದ್ಧವೇ ಅನುಮಾನ
ಕಾನೂನು ಕೈಗೆ ತೆಗೆದುಕೊಳ್ಳಬಾರದು
ದೇಶದಲ್ಲಿ
ನಡೆಯುತ್ತಿರುವ
ಪ್ರತಿಭಟನೆ
ನಿಲ್ಲಬೇಕು
ಮತ್ತು
ಶಾಂತಿ
ನೆಲೆಸಬೇಕು.
ಆದರೆ
ಈ
ಪ್ರಕರಣದಲ್ಲಿ
ನ್ಯಾಯಾಲಯಗಳು
ಹೆಚ್ಚೇನನ್ನೂ
ಮಾಡಲು
ಸಾಧ್ಯವಿಲ್ಲ.
ಪೊಲೀಸರು
ಅದನ್ನು
ನೋಡಿಕೊಳ್ಳಬೇಕು.
ಅವರು
ವಿದ್ಯಾರ್ಥಿಗಳು
ಎಂದ
ಮಾತ್ರಕ್ಕೆ
ಅವರು
ಕಾನೂನು
ಮತ್ತು
ಸುವ್ಯವಸ್ಥೆಗಳನ್ನು
ತಮ್ಮ
ಕೈಗೆ
ತೆಗೆದುಕೊಳ್ಳಲು
ಸಾಧ್ಯವಿಲ್ಲ
ಎಂದು
ಸುಪ್ರೀಂಕೋರ್ಟ್
ಮುಖ್ಯ
ನ್ಯಾಯಮೂರ್ತಿ
ಎಸ್ಎ
ಬೊಬ್ಡೆ
ಹೇಳಿದರು.
ಪೌರತ್ವ ಪ್ರತಿಭಟನೆ: ಅಲಿಗಢ ವಿ.ವಿ. ತೊರೆಯಲು ವಿದ್ಯಾರ್ಥಿಗಳಿಗೆ ಪೊಲೀಸರ ಸೂಚನೆ
ಮೊದಲು ಹಿಂಸಾಚಾರ ನಿಲ್ಲಲಿ
ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಸ್ವಯಂ ಪ್ರೇರಣೆಯಿಂದ ಪರಿಗಣಿಸಬೇಕು ಎಂಬ ವಕೀಲರಾದ ಇಂದಿರಾ ಜೈಸಿಂಗ್ ಮನವಿಗೆ ಅವರು ಪ್ರತಿಕ್ರಿಯಿಸಿದರು. ನಾವು ಹಕ್ಕುಗಳನ್ನು ನಿರ್ಧರಿಸುತ್ತೇವೆ. ಆದರೆ ದಂಗೆಯ ವಾತಾವರಣವನ್ನು ಅಲ್ಲ. ಇವುಗಳನ್ನು ಮೊದಲು ನಿಲ್ಲಿಸಲಿ, ಬಳಿಕ ಸ್ವಯಂಪ್ರೇರಣೆಯಿಂದ ಸ್ವೀಕರಿಸುತ್ತೇವೆ. ನಾವು ಹಕ್ಕುಗಳ ಮತ್ತು ಶಾಂತಿಯುತ ಪ್ರತಿಭಟನೆ ವಿರುದ್ಧವಿಲ್ಲ ಎಂದರು.
ಪೌರತ್ವ ಪ್ರತಿಭಟನೆ: ಅಲಿಗಢ ವಿ.ವಿ. ತೊರೆಯಲು ವಿದ್ಯಾರ್ಥಿಗಳಿಗೆ ಪೊಲೀಸರ ಸೂಚನೆ
ವಿಡಿಯೋ ನೋಡಲು ಬಯಸುವುದಿಲ್ಲ
ವಿದ್ಯಾರ್ಥಿಗಳು ದಂಗೆಯನ್ನು ನಿಲ್ಲಿಸಬೇಕು. ಅವರು ವಿದ್ಯಾರ್ಥಿಗಳಾಗಿರುವ ಮಾತ್ರಕ್ಕೆ ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ. ಪರಿಸ್ಥಿತಿ ತಣ್ಣಗಾದ ಬಳಿಕ ಈ ಘಟನೆಯನ್ನು ನಿರ್ಧರಿಸಬೇಕಾಗುತ್ತದೆ. ನಾವು ಏನನ್ನು ಬೇಕಾದರೂ ನಿರ್ಧರಿಸುವ ಮನಸ್ಥಿತಿ ಇರುವುದಿಲ್ಲ. ಮೊದಲು ಗಲಭೆ ನಿಲ್ಲಲಿ ಎಂದರು. ಜಾಮಿಯಾ ವಿವಿ ಒಳಗೆ ನಡೆದ ಹಿಂಸಾಚಾರದ ವಿಡಿಯೋ ನೋಡುವಂತೆ ಕೋರಿದಾಗ, ನಾವು ವಿಡಿಯೋಗಳನ್ನು ನೋಡಲು ಬಯಸುವುದಿಲ್ಲ. ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಮಾಡುವುದು ಮತ್ತು ಹಿಂಸಾಚಾರ ಮುಂದುವರಿದರೆ ನಾವು ಈ ಪ್ರಕರಣವನ್ನು ವಿಚಾರಣೆ ನಡೆಸುವುದಿಲ್ಲ ಎಂದು ಹೇಳಿದರು.