ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರಿಗೆ ಜಾಗವಿಲ್ಲ ಎಂದರೆ ಹಿಂದುತ್ವಕ್ಕೆ ಬೆಲೆ ಇರೋಲ್ಲ: ಭಾಗವತ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: "ಮುಸ್ಲಿಮರಿಗೆ ಇಲ್ಲಿ ಜಾಗವಿಲ್ಲ ಎಂದರೆ ಹಿಂದುತ್ವವೂ ಉಳಿಯುವುದಿಲ್ಲ. ಹಿಂದು ರಾಷ್ಟ್ರ ಎಂದರೆ ಮುಸ್ಲಿಮರಿಗೆ ಇಲ್ಲಿ ಜಾಗವಿಲ್ಲ ಎಂದಲ್ಲ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್(ಮುಖ್ಯಸ್ಥ) ಮೋಹನ್ ಭಾಗವತ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಆರೆಸ್ಸೆಸ್ ಕಾಂಕ್ಲೇವ್ ನ ಎರಡನೇ ದಿನವಾದ ಮಂಗಳವಾರ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್ ಅನ್ನು ಹಾಡಿ ಹೊಗಳಿದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್ಕಾಂಗ್ರೆಸ್ ಅನ್ನು ಹಾಡಿ ಹೊಗಳಿದ ಆರೆಸ್ಸೆಸ್ ಮುಖ್ಯಸ್ಥ ಭಾಗವತ್

'ಎಲ್ಲ ಧರ್ಮಗಳನ್ನೂ ಗೌರವಿಸುವುದು ಹಿಂದು ರಾಷ್ಟ್ರದ ಉದಾತ್ತತೆ. ಸಂಘ ಎಂದಿಗೂ ಸಾರ್ವತ್ರಿಕ ಭ್ರಾತೃತ್ವದ ಬಗ್ಗೆ ಕೆಲಸ ಮಾಡುತ್ತದೆ. ಅದು ನಮ್ಮ ಸಂಸ್ಕೃತಿಯಲ್ಲಿ ಬಂದಿದೆ. ಇದನ್ನೇ ಹಿಂದುತ್ವ ಎಂದು ಕರೆಯುವುದು. ಅದಕ್ಕೆಂದೇ ನಾವಿದ್ನು ಹಿಂದು ರಾಷ್ಟ್ರ ಎಂದು ಕರೆಯುತ್ತೇವೆ' ಎಂದು ಅವರು ಹೇಳಿದರು.

Hindu Rashtra does not mean it has no place for Muslims: Mohan Bhagwat

'ಹಿಂದುತ್ವ ಎಂದಿಗೂ ವಸುಧೈವ ಕುಟುಂಬಕಂ ಎಂಬ ತತ್ತ್ವವನ್ನು ನಂಬುತ್ತದೆ' ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಹಿಂದೂಗಳಿಗೆ ದಬ್ಬಾಳಿಕೆ ಮಾಡುವ ಬಯಕೆಯಿಲ್ಲ: ಭಾಗವತ್ಹಿಂದೂಗಳಿಗೆ ದಬ್ಬಾಳಿಕೆ ಮಾಡುವ ಬಯಕೆಯಿಲ್ಲ: ಭಾಗವತ್

ಸೋಮವಾರ ಮಾತನಾಡುತ್ತಿದ್ದ ಮೋಹನ್ ಭಾಗವತ್, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಕಾಂಗ್ರೆಸ್ ಈ ದೇಶಕ್ಕೆ ಮಹಾನ್ ನಾಯಕರನ್ನು ನೀಡಿದೆ ಎಂದು ಕಾಂಗ್ರೆಸ್ ಅನ್ನು ಮನಸಾರೆ ಹೊಗಳಿದ್ದರು.

English summary
Rashtriya Swayamsevak Sangh (RSS) chief Mohan Bhagwat on Tuesday said that it will no longer be Hindutva if it is said there is no place here for Muslims. He added that a 'Hindu Rashtra' does not mean it has no place for Muslims as this concept is inclusive of all faiths and religions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X