ಮುಸ್ಲೀಮರಿಗೆ ಏಕೆ ಜಮೀನು? ಅಯೋಧ್ಯೆ ತೀರ್ಪು ಪ್ರಶ್ನಿಸಿ ಹಿಂದೂ ಮಹಾಸಭಾ ಅರ್ಜಿ
ನವದೆಹಲಿ, ಡಿಸೆಂಬರ್ 06: ಅಯೋಧ್ಯೆ ತೀರ್ಪಿನ ಬಗ್ಗೆ ಬಹುತೇಕ ಹಿಂದೂ ಸಂಘಟನೆಗಳು ಸಂತಸ ವ್ಯಕ್ತಪಡಿಸಿವೆ. ಆದರೆ ಹಿಂದೂ ಮಹಾಸಭಾ ಅಯೋಧ್ಯೆ ತೀರ್ಪಿನ ಕುರಿತು ಪುನರ್ವಿಮರ್ಶನಾ ಅರ್ಜಿಯನ್ನು ಸಲ್ಲಿಸಲಿದೆ.
ಮುಂದಿನ ವಾರ ಈ ಅರ್ಜಿಯನ್ನು ಸಲ್ಲಿಸಲಿದ್ದು, ಮುಸ್ಲೀಮರಿಗೆ ಐದು ಎಕರೆ ಜಮೀನು ಕೊಟ್ಟ ವಿಚಾರವನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗುತ್ತಿದೆ.
ಶುಕ್ರವಾರ ಕೊಡಗು ಜಿಲ್ಲಾದ್ಯಂತ ನಿಷೇದಾಜ್ಞೆ
ಹಿಂದೂ ಮಹಾಸಭಾನಲ್ಲಿ ಎರಡು ಗುಂಪುಗಳಿದ್ದು, ಒಂದನ್ನು ಸ್ವಾಮಿ ಚಕ್ರಪಾಣಿ ಮತ್ತೊಂದನ್ನು ಶಿಶಿರ್ ಚತುರ್ವೇದಿ ಮುನ್ನಡೆಸುತ್ತಿದ್ದಾರೆ. ತೀರ್ಪು ಪ್ರಶ್ನಿಸಿ ಅರ್ಜಿಯನ್ನು ಶಿಶಿರ್ ಚತುರ್ವೇದಿ ಸಲ್ಲಿಸಲು ಮುಂದಾಗಿದ್ದಾರೆ. ಹಿಂದೂ ಸಂಘಟನೆ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಮಂಗಳವಾರ ಅರ್ಜಿ ಸಲ್ಲಿಸಲಿದ್ದಾರೆ.
ಹಿಂದೂಗಳಿಗೆ ಅಯೋಧ್ಯೆ ಭೂಮಿ ಸಿಗಬೇಕು ಎಂಬುದು ತೀರ್ಪಾಗಿದ್ದಾಗ, ಮುಸ್ಲೀಮರಿಗೆ ಐದು ಎಕರೆ ಜಮೀನು ಕೊಟ್ಟಿದ್ದು ಏಕೆ ಎಂಬುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.
ಮಸೀದಿಯ ಭಾಗವನ್ನು ಕೆಡವಿರುವ ಬಗ್ಗೆ ವಿಚಾರಣೆ ಮುಂದುವರೆಸಿರುವ ಬಗ್ಗೆ ತಕರಾರು ತೆಗೆದಿರುವ ಹಿಂದೂಮಹಾಸಭಾ ಈ ಬಗ್ಗೆಯೂ ಅರ್ಜಿಯಲ್ಲಿ ಪ್ರಶ್ನೆ ಮಾಡಲಿದೆ.
ಬಾಬ್ರಿ ಪ್ರಕರಣ: ಮುಸ್ಲಿಂ ಪರ ವಕೀಲ ರಾಜೀವ್ ಧವನ್ ವಜಾ
ಸುಪ್ರೀಂತೀರ್ಪಿನ ಪ್ರಕಾರ ಅಯೋಧ್ಯೆಯು ರಾಮನ ಜನ್ಮ ಭೂಮಿ ಎಂದು ತೀರ್ಮಾನಿಸಿ ಭೂಮಿಯನ್ನು ಮಂದಿರವನ್ನು ನೀಡಲಾಗಿದೆ. ಇದನ್ನು ಐತಿಹಾಸಿಕ ತೀರ್ಪು ಎಂದು ಬಣ್ಣಿಸಲಾಗಿದೆ.