ಕುತುಬ್ ಮಿನಾರ್ ಅಲ್ಲ, ವಿಷ್ಣುಸ್ತಂಭ: ಹಿಂದು ಮಹಾಸಭಾ ವಿವಾದ
ನವದೆಹಲಿ, ಮಾರ್ಚ್ 20: ಹಿಂದು ಮಹಾಸಭಾ ಇತ್ತೀಚೆಗೆ ಬಿಡುಗಡೆ ಮಾಡಿದ ಕ್ಯಾಲೆಂಡರ್ ನಲ್ಲಿ 'ಕುತುಬ್ ಮಿನಾರ್' ಅನ್ನು 'ವಿಷ್ಣು ಸ್ತಂಭ' ಎಂದು ಕರೆದಿರುವುದು ವಿವಾದ ಸೃಷ್ಟಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಭಾರತದ ಹಲವು ಪ್ರಸಿದ್ಧ ಪ್ರವಾಸೀ ತಾಣಗಳನ್ನು ಹಿಂದು ಮಹಾಸಭಾ ತನ್ನದೇ ಆದ ರೀತಿಯಲ್ಲಿ ವಿವರಿಸಿದ್ದು, ಅಲ್ಪಸಂಖ್ಯಾತರ ಕಣ್ಣನ್ನು ಕೆಂಪಾಗಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
"ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಸೀದಿ ಇದ್ದಿದ್ದೇ ಸುಳ್ಳು!"
"ಕುತುಬ್ ಮಿನಾರ್ ಗೆ ವಿಷ್ಣು ಸ್ತಂಭ, ತಾಜ್ ಮಹಲ್ ಗೆ ತೇಜೋ ಮಹಾಲಯ, ಮಧ್ಯಪ್ರದೇಶದಲ್ಲಿರುವ ಕಮಲ್ ಮೌಲಾ ಮಸೀದಿಗೆ ಭೋಜ್ಶಾಲಾ, ಜೌನ್ಪುರದ ಅಟಲಾ ಮಸೀದಿಗೆ ಅಟ್ಲಾ ದೇವಿ ಮಂದಿರ, 1992 ರಲ್ಲಿ ದ್ವಂಸ ಮಾಡಲಾದ ಬಾಬ್ರಿ ಮಸೀದಿ ಇದ್ದ ಜಾಗ ಎಂದು ಭಾವಿಸಲಾದ ಜಾಗವನ್ನು ರಾಮ ಜನ್ಮಭೂಮಿ ಎಂದು ಕರೆದಿದೆ" ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.
ಇಷ್ಟೆ ಅಲ್ಲದೆ, ಮುಸ್ಲಿಮರ ಪವಿತ್ರ ತಾಣವಾದ ಮೆಕ್ಕಾವನ್ನು ಮಕ್ಕೇಶ್ವರ ಮಹಾದೇವ್ ಕಾ ಮಂದಿರ್ ಎಂದಿದೆ. ಹಿಂದು ಮಹಾಸಭಾ ಹೀಗೆ ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲೇನಲ್ಲ. ಭಾರತೀಯ ಪರಂಪರೆಯನ್ನು ಹಿಂದು ಮಹಾಸಭಾ ಪ್ರತಿಬಾರಿರೂ ತನ್ನದೇ ಪರಿಕಲ್ಪನೆಯಲ್ಲಿ ವಿವರಿಸುತ್ತಾ ಬಂದಿದೆ ಎಂದು ಅಲ್ಪಸಂಖ್ಯಾತರು ಆರೋಪಿಸಿದ್ದಾರೆ.