ಸಂಸತ್ತಿನಲ್ಲಿ ಯುಗಾದಿ ಆಚರಣೆ, ಸ್ಪೀಕರ್ ಜತೆಗೆ ಭೋಜನ
ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬದಾಚರಣೆಯನ್ನು ಸಂಸತ್ನಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಆಯೋಜಿಸಿದ್ದರು.
ನವದೆಹಲಿ, ಮಾರ್ಚ್ 29: ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬದಾಚರಣೆಯನ್ನು ಸಂಸತ್ನಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಆಯೋಜಿಸಿದ್ದರು. ಸಚಿವರು, ರಾಜ್ಯಸಭೆ ಹಾಗೂ ಲೋಕಸಭೆಯ ಸದಸ್ಯರಿಗೆ, ಸಿಬ್ಬಂದಿಗೆ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಯುಗಾದಿ,
ಗುಡಿ
ಪಡ್ವಾ,
ಚೈತ್ರ
ಶುಕ್ಲಾಡಿ,
ಚೇತಿ
ಚಾಂದ್,
ನವ್ರೆಹ್,
ಸಾಜಿಬು
ಚೈರೊಬಾ
ಸೇರಿದಂತೆ
ವಿವಿಧ
ಹೆಸರಿನಲ್ಲಿ
ಹಿಂದೂ
ಹೊಸ
ವರ್ಷ
ಯುಗಾದಿಯನ್ನು
ಆಚರಿಸಲಾಗುತ್ತಿದೆ.[ಜನತೆಗೆ
ಗಣ್ಯರಿಂದ
ಯುಗಾದಿ
ಶುಭಾಶಯಗಳ
ಸರಮಾಲೆ]
ಕೇಂದ್ರ
ಸಚಿವರು
ಸಹಿತ
ಪ್ರಮುಖ
ನಾಯಕರು,
ಸಂಸದರು
ಸ್ಪೀಕರ್
ಜತೆ
ಮಧ್ಯಾಹ್ನದ
ವಿರಾಮ
ವೇಳೆಯಲ್ಲಿ
ಭೋಜನ
ಸೇವಿಸಿದರು.
ಕಲಾಪಕ್ಕೆ
ಯಾವುದೇ
ಅಡ್ಡಿ
ಉಂಟಾಗಿಲ್ಲ.
With PM @narendramodi ji, MPs of both Houses and other senior leaders at a lunch in Parliament House pic.twitter.com/4tX95F4leu
— Sumitra Mahajan (@LoksabhaSpeaker) March 28, 2017
ಸಂಸತ್ ಆವರಣದ ಕೋರ್ಟ್ ಯಾರ್ಡ್-9ರ ಬಳಿಯ ಪ್ರಾಂಗಣ ದಲ್ಲಿ ರಂಗೋಲಿ ಹಾಗೂ ಕಲಶಗಳನ್ನು ಸ್ಥಾಪಿಸಲಾಗಿತ್ತು. ಅತಿಥಿಗಳಿಗೆ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ವಿತರಿಸಲಾಯಿತು. ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತ ಶೈಲಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.