ಗುಲಾಂ, ಕಮಲ್ ನಾಥ್ ಗೆ ಉನ್ನತ ಸ್ಥಾನ ನೀಡಿದ ಕಾಂಗ್ರೆಸ್
ನವದೆಹಲಿ, ಜೂನ್ 12: ಮುಂಬರುವ ಚುನಾವಣೆಗಳಿಗೆ ಪೂರ್ವ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷ ತನ್ನ ಹಿರಿಯ ನಾಯಕರಿಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸುವ ಪ್ರಕ್ರಿಯೆಗೆ ಭಾನುವಾರದಿಂದ ಚಾಲನೆ ನೀಡಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುಲಾಂ ನಬಿ ಅಜಾದ್ ಅವರಿಗೆ ಉತ್ತರಪ್ರದೇಶ ಹಾಗೂ ಕಮಲ್ ನಾಥ್ ಅವರಿಗೆ ಪಂಜಾಬ್, ಹರ್ಯಾಣ ಅಸೆಂಬ್ಲಿ ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಕಾಂಗ್ರೆಸ್
ನಾಯಕ
ಗುಲಾಂ
ನಬಿ
ಆಜಾದ್
ಮತ್ತು
ಕಮಲ್
ನಾಥ್
ಅವರನ್ನು
ಭಾನುವಾರದಿಂದ
ಜಾರಿಗೆ
ಬರುವಂತೆ
ಎಐಸಿಸಿ
ಪ್ರಧಾನ
ಕಾರ್ಯದರ್ಶಿಗಳಾಗಿ
ನೇಮಿಸಲಾಗಿದೆ.
2017ರ
ಆರಂಭದಲ್ಲಿ
ಉತ್ತರಪ್ರದೇಶ
ಹಾಗೂ
ಪಂಜಾಬ್
ರಾಜ್ಯಗಳಲ್ಲಿ
ಚುನಾವಣೆ
ನಡೆಯಲಿದೆ.
ಇದಕ್ಕಾಗಿ
ಪೂರ್ವ
ಸಿದ್ದತೆ
ನಡೆಸಿದ್ದು,
ರಾಹುಲ್
ಗಾಂಧಿ
ಅವರಿಗೆ
ಕಾಂಗ್ರೆಸ್
ಚುಕ್ಕಾಣಿ
ನೀಡುವ
ಸುದ್ದಿಗೆ
ಮತ್ತೆ
ರೆಕ್ಕೆ
ಪುಕ್ಕ
ಸೇರಿಕೊಂಡಿದೆ.
67 ವರ್ಷದ ಅಜಾದ್ ಅವರು ಗಾಂಧಿ ಮನೆತನ ನಂಬಿಕಸ್ತ ಸಿಪಾಯಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಬಾರಿ ಕರ್ತವ್ಯ ನಿರ್ವಹಿಸಿದ್ದಾರೆ. ಉತ್ತರಪ್ರದೇಶ ಉಸ್ತುವಾರಿಯನ್ನು ನಿಭಾಯಿಸಿದ ಅನುಭವವಿದೆ.
69 ವರ್ಷ ವಯಸ್ಸಿನ ಕಮಲ್ ನಾಥ್ ಅವರು ಮಧ್ಯಪ್ರದೇಶದ ಹಿರಿಯ ನಾಯಕರಾಗಿದ್ದು, ಚಿಂದ್ವಾರದಿಂದ ಸಂಸತ್ತಿಗೆ 9 ಬಾರಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಗುಜರಾತ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಮಧ್ಯಪ್ರದೇಶದ ಸಿಎಂ ಸ್ಥಾನದ ಮೇಲೆ ಮತ್ತೆ ಆಸೆ ಇರಿಸಿಕೊಂಡಿದ್ದಾರೆ.
ಉತ್ತರಪ್ರದೇಶದಲ್ಲಿ ಸದ್ಯ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದರೆ, ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿದಳ ಹಾಗೂ ಬಿಜೆಪಿ ಅಧಿಕಾರದಲ್ಲಿದೆ. ಹರ್ಯಾಣದಲ್ಲಿ ಬಿಜೆಪಿ ರಾಜ್ಯಭಾರ ಮಾಡುತ್ತಿದೆ. (ಪಿಟಿಐ)