ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರ ನೀರಜ್ ಬಿಜೆಪಿ ಸೇರ್ಪಡೆ
ನವದೆಹಲಿ, ಜುಲೈ 15: ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ, ಸಮಾಜವಾದಿ ಪಕ್ಷದ ಮುಖಂಡ ನೀರಜ್ ಶೇಖರ್ ಅವರು ಮಂಗಳವಾರದಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರ ಸಮ್ಮುಖದರಲ್ಲಿ ನೀರಜ್ ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ಸೋಮವಾರದಂದು ನೀರಜ್ ಅವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜ್ಯಸಭಾ ಚೇರ್ಮನ್ ಎಂ ವೆಂಕಯ್ಯನಾಯ್ಡು ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದರು.
Delhi: Former Samajwadi Party leader Neeraj Shekhar (son of former Prime Minister Chandra Shekhar), met BJP Working President JP Nadda after joining the party, today. pic.twitter.com/79ExRr98d5
— ANI (@ANI) July 16, 2019
'ಸ್ವಯಂಪ್ರೇರಣೆಯಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ, ಯಾರಿಂದಲೂ ಒತ್ತಡ ಎದುರಿಸುತ್ತಿಲ್ಲ' ಎಂದು ನಾಯ್ಡು ಅವರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ಶೇಖರ್ ಅವರು ಬರೆದಿದ್ದಾರೆ ಎನ್ನಲಾಗಿದೆ.
ಸಮಾಜವಾದಿ ಪಕ್ಷದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ನೀರಜ್ ಶೇಖರ್ ಅವರು ಭಾರತೀಯ ಜನತಾ ಪಕ್ಷ ಸೇರಿದ ಬಳಿಕ, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
2008ರಲ್ಲಿ ಬಲ್ಲಿಯಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಲೋಕಸಭಾ ಸದಸ್ಯರಾದರು. 2014ರ ನವೆಂಬರ್ 26ರಿಂದ ಉತ್ತರಪ್ರದೇಶದಿಂದ ರಾಜ್ಯಸಭೆ ಸದಸ್ಯರಾಗಿರುವ ಶೇಖರ್ ಅವರ ನಿವೃತ್ತ ಅವಧಿ ನವೆಂಬರ್ 25, 2020ಕ್ಕೆ ಮುಕ್ತಾಯವಾಗಲಿದೆ.