ಮಾಜಿ ಸಂಪುಟ ಕಾರ್ಯದರ್ಶಿ ಟಿಎಸ್ ಆರ್ ಸುಬ್ರಹ್ಮಣಿಯನ್ ನಿಧನ
ನವದೆಹಲಿ, ಫೆಬ್ರವರಿ 26: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಸರ್ಕಾರದ ಮಾಜಿ ಸಂಪುಟ ಕಾರ್ಯದರ್ಶಿ ಟಿ ಎಸ್ ಆರ್ ಸುಬ್ರಹ್ಮಣಿಯನ್(79) ಇಂದು(ಫೆ.26) ನವದೆಹಲಿಯಲ್ಲಿ ಕೊನೆಯುಸಿರಿಳೆದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಲು ನೇಮಿಸಿದ್ದ ಸಮಿತಿಯ ಮುಖ್ಯಸ್ಥರೂ ಆಗಿದ್ದ ಅವರು, ಭಾರತೀಯ ಸರ್ಕಾರದ ಸಂಪುಟ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.
Extremely shocked to hear the sad news of the demise of T S R Subramanian. He was the tallest amongst all and is a big loss for the IAS fraternity and the nation. Deepest Condolences to all family members. We hope and pray that your ideas and thoughts will continue to guide us.
— IAS Association (@IASassociation) February 26, 2018
1961 ರ ಬ್ಯಾಚಿನ ಐಎಎಸ್ (ಭಾರತೀಯ ಆಡಳಿತ ಸೇವೆ) ಅಧಿಕಾರಿಯೂ ಆಗಿದ್ದ ಅವರು, ಜವಳಿ ಇಲಾಖೆಯ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು. ಸುಬ್ರಹ್ಮಣಿಯನ್ ಅವರ ಅಂತ್ಯ ಸಂಸ್ಕಾರ ದೆಹಲಿಯ ಲೋಧಿ ರೋಡ್ ನಲ್ಲಿರುವ ಚಿತಾಗಾರದಲ್ಲಿ ಇಂದು(ಫೆ.26) ಸಂಜೆ 5:30 ಕ್ಕೆ ನಡೆಯಲಿದೆ.
ಇವರ ನಿಧನಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಜವಳಿ ಸಚಿವೆ ಸ್ಮೃತಿ ಇರಾಣಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.