ಇಂದು ಸಂಜೆ 4ಕ್ಕೆ ನಿರ್ಮಲಾ ಸೀತಾರಾಮನ್ 2ನೇ ಸುದ್ದಿಗೋಷ್ಠಿ
ದೆಹಲಿ, ಮೇ 14: ಕೇಂದ್ರ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಜೆ 4 ಗಂಟೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ಗೆ ಸಂಬಂಧಿಸಿದಂತೆ ಎರಡನೇ ಹಂತ ಯೋಜನೆಗಳನ್ನು ಪ್ರಕಟಿಸುವ ಉದ್ದೇಶದಿಂದ ನಿರ್ಮಲಾ ಅವರು ಇಂದು ಪ್ರೆಸ್ಮೀಟ್ ಹಮ್ಮಿಕೊಂಡಿದ್ದಾರೆ.
Finance Minister Smt. @nsitharaman will address a Press Conference today, 14th May 2020, at 4 PM in New Delhi.#EconomicPackage#AatmanirbharBharat #AatmaNirbharBharatAbhiyan #IndiaFightsCorona pic.twitter.com/mTEISUNFGQ
— Ministry of Finance 🇮🇳 #StayHome #StaySafe (@FinMinIndia) May 14, 2020
ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿತ್ತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 20 ಲಕ್ಷ ಕೋಟಿ ಪ್ಯಾಕೇಜ್ಗೆ ಸಂಬಂಧಿಸಿದಂತೆ ಮೊದಲ ಹಂತದ ಯೋಜನೆಗಳನ್ನು ಘೋಷಣೆ ಮಾಡಿದ್ದರು.
ಮೋದಿ ಘೋಷಣೆ ಮಾಡಿರುವ ಈ ಪ್ಯಾಕೇಜ್ ಆರ್ಥಿಕವಾಗಿ ಚೈತನ್ಯ ತುಂಬಲಿದೆ ಮತ್ತು ವಿವಿಧ ಕ್ಷೇತ್ರಗಳಿಗೆ ನೆರವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
* ಎಂ.ಎಸ್.ಎಂ.ಇ ಗಳಿಗೆ (ಅತಿ ಸಣ್ಣ, ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆ) ಸಂಬಂಧಿಸಿದಂತೆ 6 ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. 3 ಲಕ್ಷ ಬ್ಯಾಂಕ್ ಸಾಲ, ಸಾಲ ಮರುಪಾವಾತಿಗೆ 4 ವರ್ಷ ಕಾಲಾವಕಾಶ, ಗ್ಲೋಬಲ್ ಟೆಂಟರ್ನಲ್ಲಿ ಸಣ್ಣ ಕೈಗಾರಿಕೆಗಳಿಗೆ ಆಧ್ಯತೆ ನೀಡುವುದು.
*
ನೌಕರರು
ಮತ್ತು
ಉದ್ಯಮಿಗಳಿಗೆ
ಅನುಕೂಲ
ಆಗುವ
ನಿಟ್ಟಿನಲ್ಲಿ
2500
ಕೋಟಿ
ಇ.ಪಿ.ಎಫ್
ಸಪೋರ್ಟ್.
*
ಐಟಿ
ರಿಟರ್ನ್ಸ್
ಸಲ್ಲಿಕೆಗೆ
ನವೆಂಬರ್
30,
2020
ರವರೆಗೆ
ಗಡುವು
ವಿಸ್ತರಣೆ
ಮಾಡಲಾಗಿದೆ.
*
ಬ್ಯಾಂಕೇತರ
ಹಣಕಾಸು
ಸಂಸ್ಥೆಗಳಿಗೆ
45
ಸಾವಿರ
ಕೋಟಿ
ರೂಪಾಯಿ
ಸಾಲ.
*
ಜನ್
ಧನ್
ಅಕೌಂಟ್
ಹೊಂದಿರುವ
20
ಕೋಟಿ
ಮಹಿಳೆಯರಿಗೆ
ಮುಂದಿನ
ಮೂರು
ತಿಂಗಳ
ಕಾಲ,
ಪ್ರತಿ
ತಿಂಗಳು
500
ರೂಪಾಯಿ
ಸಿಗಲಿದೆ.
*
ಮುಂದಿನ
ಮೂರು
ತಿಂಗಳು
8
ಕೋಟಿ
ಬಡ
ಕುಟುಂಬಗಳಿಗೆ
ಉಚಿತ
ಗ್ಯಾಸ್
ಸಿಲಿಂಡರ್
ಸಿಗಲಿದೆ.