ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ, 15000 ಅನ್ನದಾತರು ಭಾಗಿ
ನವದೆಹಲಿ, ಸೆಪ್ಟೆಂಬರ್ 21: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜಧಾನಿ ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ಆರಂಭವಾಗಿದ್ದು ಸುಮಾರು 15000 ರೈತರು ಇದರಲ್ಲಿ ಭಾಗಿಯಾಗಿದ್ದಾರೆ.
ಭಾರತ್ ಕಿಸಾನ್ ಯೂನಿಯನ್(ಬಿಕೆಯು) ನ ಬ್ಯಾನರ್ ಗಳನ್ನು ಹಿಡಿದು ಶನಿವಾರ ಬೆಳಿಗ್ಗೆ ದೆಹಲಿಗೆ ರೈತರ ಬೃಹತ್ ಸಮೂಹವೇ ಆಗಮಿಸಿದ್ದು, ರಾಜಧಾನಿಯಾದ್ಯಂತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ
ಪಶ್ಚಿಮ ಉತ್ತರ ಪ್ರದೇಶದ ಸಹರಾನ್ಪುರ ಎಂಬಲ್ಲಿಂದ ಸೆಪ್ಟೆಂಬರ್ 17 ರಂದು ಪ್ರತಿಭಟನೆ ಆರಭವಾಗಿದ್ದು, ಇಂದು ದೆಹಲಿಯಲ್ಲಿ ರೈತರೆಲ್ಲ ಸೇರುವ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲಿದ್ದಾರೆ.
ಕಬ್ಬಿನ ಬೆಳೆಗೆ ಪಾವತಿಸಬೇಕಾದ ಬಾಕಿ, ಬೇಷರತ್ ಸಾಲಮನ್ನಾ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗದ ಗಂಗಾ ನದಿಯ ಉಪನದಿಗಳನ್ನು ಸ್ವಚ್ಛಗೊಳಿಸಿ, ರೈತರಿಗೆ ಕೃಷಿಗೆ ನೀರು ದೊರೆಯುವಂತೆ ಮಾಡುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆಯುತ್ತಿದೆ.
ಎಲ್ಲೆಡೆ ಋಣಮುಕ್ತ ಕಾಯ್ದೆ ಅರ್ಜಿಗಾಗಿ ನೂಕು ನುಗ್ಗಲು!
ಶುಕ್ರವಾರ ನೋಯ್ಡಾದಲ್ಲಿ ಕೃಷಿ ಇಲಾಖೆ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಉಂದುವರಿದಿದೆ.