ಕೃಷಿ ಕಾಯ್ದೆ ಪ್ರತಿಗಳನ್ನು ಸುಟ್ಟು ಹೋಳಿ ಆಚರಿಸಿದ ರೈತರು
ನವದೆಹಲಿ, ಮಾರ್ಚ್ 29: ರೈತರು ದೆಹಲಿ ಗಡಿಯಲ್ಲಿ ಭಾನುವಾರ ಕೃಷಿ ಕಾಯ್ದೆ ಪ್ರತಿಗಳನ್ನು ಸುಟ್ಟು ಹೋಳಿ ಹಬ್ಬ ಆಚರಿಸಿದರು.
ಸಮ್ಯುಕ್ತ ಕಿಸಾನ್ ಮೋರ್ಚಾ ಹಾಗೂ ಜಾಯಿಂಟ್ ಫ್ರಂಟ್ ಆಫ್ ಫಾರ್ಮರ್ ಯೂನಿಯನ್ಸ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. ನೂತನ ಕೃಷಿ ಕಾಯ್ದೆ ರದ್ದುಗೊಳಿಸಬೇಕು, ಬೆಂಬಲ ಬೆಲೆಗೆ ಕಾನೂನಾತ್ಮಕ ರಕ್ಷಣೆ ನೀಡಬೇಕು ಎಂಬ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆಯನ್ನು ಮುಂದುವರೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಶಾಸಕನನ್ನು ಥಳಿಸಿದ ಪ್ರತಿಭಟನಾನಿರತ ರೈತರು
ಏಪ್ರಿಲ್ 5 ರಂದು ಎಫ್ಸಿಐ ಬಚಾವೊ ದಿವಸ್ ಹಮ್ಮಿಕೊಳ್ಳಲಾಗಿದೆ, ದೇಶಾದ್ಯಂತ ಇರುವ ಎಫ್ಪಿಐ ಕಚೇರಿಗಳಿಗೆ ಅಂದು ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಮುತ್ತಿಗೆ ಹಾಕಲಾಗುವುದು ಎಂದು ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಎಂಟನೇ ಕಂತಿಗಾಗಿ ಕಾಯುತ್ತಿರುವ ರೈತರ ಖಾತೆಗಳಲ್ಲಿ 2000 ರೂ. ಬರಲಿದೆ. ಆದರೆ ಹಲವು ನೋಂದಾಯಿತ ರೈತರ ಖಾತೆಗೆ ಇದುವರೆಗೆ ಯಾವುದೇ ಕಂತು ಬಂದಿಲ್ಲ. ಇನ್ನೊಂದೆಡೆ ಕೆಲವರ ಕಂತುಗಳನ್ನು ನಿಲ್ಲಿಸಲಾಗಿದೆ.
ನಿಮಗೂ ನಿಮ್ಮ ಮುಂದಿನ ಕಂತು ಬರಲಿದೆ ಅಥವಾ ಇಲ್ಲ ಎಂಬುದನ್ನು ತಿಳಿಯಲು ಮೊದಲು ಫಲಾನುಭವಿಗಳ ಪಟ್ಟಿ ಪರಿಶೀಲಿಸಿ ಮತ್ತು ನಿಮ್ಮ ಸ್ಟೇಟಸ್ ಚೆಕ್ ಮಾಡಲು ಮರೆಯದಿರಿ. ಮುಂದಿನ ಕೆಲವು ದಿನಗಳಲ್ಲಿ ಒಂದು ವೇಳೆ ನಿಮ್ಮ ಸ್ಟೇಟಸ್ ನಲ್ಲಿ ರಾಜ್ಯದಿಂದ Rft Signed by state ದೊರೆತಿದ್ದರೆ, ನಿಮ್ಮ ಖಾತೆಯಲ್ಲಿ ಏಪ್ರಿಲ್ ಕಂತು ಬರಲಿದೆ.