1984ರ ಸಿಖ್ ಹತ್ಯಾಕಾಂಡ : ರಾಜೀವ್ ಗಾಂಧಿ ನಿಜಕ್ಕೂ ಆದೇಶ ನೀಡಿದ್ರಾ?
ನವದೆಹಲಿ, ಮೇ 10 : ಲೋಕಸಭೆ ಚುನಾವಣೆಯಲ್ಲಿ ಕೊನೆ ಎರಡು ಹಂತದಲ್ಲಿ ತೀವ್ರವಾದ ವೈಯಕ್ತಿಕ ದಾಳಿ, ನಿಂದನೆಗಳು ಅಧಿಕವಾಗಿವೆ. ದೆಹಲಿ ಹಾಗೂ ಪಂಜಾಬ್ ನಲ್ಲಿ ಚುನಾವಣೆ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಇತಿಹಾಸವನ್ನು ಕೆದಕಿ, ರಾಜೀವ್ ಗಾಂಧಿ ಅವರನ್ನು ಗುರಿಯನ್ನಾಗಿಸಿಕೊಂಡು ಪ್ರಖರ ಭಾಷಣ ಮಾಡಿದ್ದಂತೆ, ಇತಿಹಾಸ ಪುಟಗಳನ್ನು ಮತ್ತೊಮ್ಮೆ ತಿರುಗಿಸಿ ನೋಡುವ ಸಂದರ್ಭ ಒದಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ರಾಜೀವ್ ಗಾಂಧಿ ಅವರು 1984ರಲ್ಲಿ ಸಿಖ್ ಹತ್ಯಾಕಾಂಡಕ್ಕೆ ಕರೆ ನೀಡಿದ್ದರು ಎಂಬ ಚರ್ಚೆ ಬಗ್ಗೆ ಗಮನ ಹರಿಸಬೇಕಿದೆ.
'ನಮ್ಮ ತಾಯಿಯ ಹತ್ಯೆ ಮಾಡಲಾಗಿದೆ. ಸರ್ದಾರರನ್ನು ಕೊಲ್ಲಿರಿ'!
ಬಿಜೆಪಿ ವಾದ : ಜಸ್ಟೀಸ್ ನಾನಾವತಿ ಆಯೋಗದಿಂದ ಈ ಪ್ರಕರಣದ ತನಿಖೆ ನಡೆಸಲಾಗಿತ್ತು. ಅಂದಿನ ಸರ್ಕಾರವೇ ತನ್ನ ಜನರನ್ನು ಕೊಲ್ಲಲು ಆದೇಶ ನೀಡಿತ್ತು. ಸಿಖ್ಖರು ಹೆಚ್ಚಾಗಿದ್ದ ಪ್ರದೇಶವನ್ನು ನಾಶ ಪಡಿಸುವ ಆದೇಶವನ್ನು ಖುದ್ದು ಪ್ರಧಾನಿ ರಾಜೀವ್ ಗಾಂಧಿ ನೀಡಿದ್ದರು. ಅಂದು ಅವರು ಮಾಡಿದ ಕರ್ಮಕ್ಕೆ ತಕ್ಕ ಬೆಲೆ, ನ್ಯಾಯ ಸಿಗಬೇಕಿದೆ.
ನಾನಾವತಿ ಆಯೋಗ ವರದಿಯಲ್ಲೇನಿದೆ : ಜಸ್ಟೀಸ್ ನಾನಾವತಿ ಅಯೋಗವು ರಾಜೀವ್ ಗಾಂಧಿ ಅವರ ಪಾತ್ರದ ಬಗ್ಗೆ ಏನು ಹೇಳಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಆಯೋಗದ ವರದಿಯಲ್ಲಿ ರಾಜೀವ್ ಗಾಂಧಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಸಿಖ್ಖರ ಹತ್ಯಾಕಾಂಡದ ಅಪರಾಧಿ: ಯಾರು ಈ ಸಜ್ಜನ್ ಕುಮಾರ್?
ಆಯೋಗದ
ವರದಿಯ
ಪುಟ
181
ಹಾಗೂ
182ರಲ್ಲಿ
ಈ
ಬಗ್ಗೆ
ಉಲ್ಲೇಖವಿದ್ದು,
ಅದರಲ್ಲಿ
ಹೀಗೆ
ಬರೆಯಲಾಗಿದೆ.
"
it
was
suggested
that
Shri
Rajiv
Gandhi
had
told
one
of
his
officials
that
Sikhs
should
be
taught
a
lesson.
The
Commission
finds
no
substance
in
that
allegation.
The
evidence
in
this
behalf
is
very
vague.
It
is
not
believable
that
Shri
Rajiv
Gandhi
would
have
stated
so
to
an
official
assuming
that
some
conversation
took
place
between
him
and
that
official."