ವದಂತಿ ಹಿಂದಿನ ಅಸಲಿ ಸತ್ಯ: ಪ್ರತಿಯೊಬ್ಬ ಭಾರತೀಯರಿಗೆ 1,000 ರೂಪಾಯಿ!
ನವದೆಹಲಿ, ಏಪ್ರಿಲ್.26: ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಲಾಕ್ ಡೌನ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಲಾಕ್ ಡೌನ್ ಮತ್ತು ಕೊರೊನಾ ಕುರಿತು ಕಿಡಿಗೇಡಿಗಳು ಸುಳ್ಳುಸುದ್ದಿಗಳನ್ನು ಹರಡಿಸುತ್ತಿದ್ದಾರೆ.
ದೇಶದ ಪ್ರತಿಯೊಬ್ಬ ಪ್ರಜೆಗೆ ಕೇಂದ್ರ ಸರ್ಕಾರವು ಕೊರೊನಾ ಸಹಾಯತಾ ಯೋಜನೆ ಅಡಿ 1,000 ರೂಪಾಯಿ ಆರ್ಥಿಕ ನೆರವು ನೀಡುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯು ಶುದ್ಧಸುಳ್ಳು ಎಂದು ಕೇಂದ್ರ ಸರ್ಕಾರದ ಅಧೀನದ ಪ್ರಸಾರ ಭಾರತಿ ಸ್ಪಷ್ಟಪಡಿಸಿದೆ.
ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?
ಇತ್ತೀಚಿನ ದಿನಗಳಲ್ಲಿ ಭಾರತ ಲಾಕ್ ಡೌನ್ ಹಾಗೂ ಕೊರೊನಾ ವೈರಸ್ ಹಡುವಿಕೆ ಬಗ್ಗೆ ವಾಟ್ಸಾಪ್ ಮತ್ತು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸುಳ್ಳುಸುದ್ದಿ ಹರಿದಾಡುತ್ತಿತ್ತು. ಶನಿವಾರ ಪ್ರಸಾರ ಭಾರತಿ ಈ ಕುರಿತು ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರವು ಯಾರಿಗೂ ಹಣ ನೀಡುತ್ತಿಲ್ಲ:
ಭಾರತ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೊರೊನಾ ಸಹಾಯತಾ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ 1,000 ರೂಪಾಯಿ ನೆರವು ನೀಡುತ್ತಿದೆ. ಹಣವನ್ನು ಪಡೆಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕುರಿತು ಮಾಹಿತಿ ಹಂಚಿಕೊಳ್ಳಿ ಹಾಗೂ ಹಣವನ್ನು ಪಡೆಯಿರಿ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಸಂದೇಶವನ್ನೇ ಪಿಐಬಿ ಟ್ವೀಟ್ ಮಾಡಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ಕೇಂದ್ರ ಸರ್ಕಾರವು ಯಾವುದೇ ರೀತಿ ಹಣವನ್ನು ನೀಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ.
दावा: कोरोना सहायता योजना WCHO की तरफ से 1000 ₹ सहायता राशि सभी को दिया जा रहा हैें। फॉर्म भरें और 1000 ₹ प्राप्त करें। #PIBFactCheck: केंद्र सरकार द्वारा ऐसी कोई भी योजना नहीं चलाई जा रही। मैसेज में किया गया दावा व दिया गया लिंक फ़र्ज़ी है।
— PIB Fact Check (@PIBFactCheck) April 25, 2020
कृपया जालसाज़ों से सावधान रहे। pic.twitter.com/i8z3K5dEid
ಇನ್ನು, ಕೆಲವು ದಿನಗಳ ಹಿಂದೆಯಷ್ಟೇ ಮೇ.03ರ ಭಾರತ ಲಾಕ್ ಡೌನ್ ಅಂತ್ಯದವರೆಗೂ ವರ್ಕ್ ಫ್ರಾಮ್ ಹೋಮ್ ಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಉಚಿತ ಇಂಟರ್ ನೆಟ್ ಸೇವೆಯನ್ನು ನೀಡುತ್ತದೆ ಎಂಬ ವದಂತಿಯನ್ನು ಹರಡಿಸಲಾಗುತ್ತಿತ್ತು. ಈ ವದಂತಿ ಕೂಡ ಸತ್ಯಕ್ಕೆ ದೂರವಾಗಿದ್ದು ಎಂದು ಪ್ರಸಾರ ಭಾರತಿ ಸ್ಪಷ್ಟಪಡಿಸಿತ್ತು.