ಹುತಾತ್ಮ ಯೋಧರ ರಕ್ತದ ಹನಿ-ಹನಿಗೂ ಪ್ರತೀಕಾರ ಪಡೆಯುತ್ತೇವೆ: ವಿಕೆ.ಸಿಂಗ್
ನವದೆಹಲಿ, ಫೆಬ್ರವರಿ 14: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಜೈಷೆ-ಮೊಹಮ್ಮದ್ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ 18 ಯೋಧರನ್ನು ಬಲಿ ಪಡೆದಿರುವ ಘಟನೆಗೆ ಕೇಂದ್ರ ಬಿಜೆಪಿ ಸಚಿವ ವಿ.ಕೆ.ಸಿಂಗ್ ಅವರು ಉಗ್ರ ಪದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
As a soldier and a citizen of India, my blood boils at the spineless and cowardly attacks. 18 brave hearts from the @crpfindia laid down their lives in #Pulwama. I salute their selfless sacrifice & promise that every drop of our soldier’s blood will be avenged. #JaiHind
— Vijay Kumar Singh (@Gen_VKSingh) February 14, 2019
ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಸುದ್ದಿ ಕೇಳಿದ ನಂತರ ನನ್ನ ರಕ್ತ ಕುದಿಯುತ್ತಿದೆ. ಭಯೋತ್ಪಾದಕರ ಈ ಹೇಡಿತನದ ಕೃತ್ಯದಿಂದಾಗಿ 18 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ ಎಂದು ವಿಕೆ ಸಿಂಗ್ ಟ್ವೀಟ್ ಮಾಡಿದ್ದಾರೆ. ಮೃತರ ಸಂಖ್ಯೆ ಈಗ ಇನ್ನೂ ಹೆಚ್ಚಾಗಿದೆ.
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರ ದಾಳಿ, 18 ಸಿಆರ್ ಪಿಎಫ್ ಸಿಬ್ಬಂದಿ ಹುತಾತ್ಮ
ಹುತಾತ್ಮ ಯೋಧರನ್ನು ಸಿಆರ್ಪಿಎಫ್ನ ಧೈರ್ಯವಂತ ಹೃದಯಗಳು ಎಂದಿರುವ ಸಿಂಗ್, ಮೃತ ಯೋಧರ ಆತ್ಮಗಳಿಗೆ ಶಾಂತಿ ಕೊರಿದ್ದಾರೆ.
ಹುತಾತ್ಮ ಯೋಧರ ಆಣೆಯಾಗಿ ಅವರ ರಕ್ತದ ಪ್ರತಿ ಹನಿ-ಹನಿಗೂ ನಾವು ಪ್ರತೀಕಾರ ಪಡೆಯುತ್ತೇವೆ ಎಂದು ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.