ಭಾರತ-ಪಾಕ್ ನಡುವೆ ಪ್ರಕ್ಷುಬ್ಧ ವಾತಾವರಣ: ತುರ್ತು ಸಭೆ
Recommended Video
ನವದೆಹಲಿ, ಫೆಬ್ರವರಿ 27: ಪುಲ್ವಾಮಾ ದಾಳಿ ಮತ್ತು ನಂತರ ಭಾರತ ಉಗ್ರರ ನೆಲೆ ಮೇಲೆ ನಡೆಸಿದ ವೈಮಾನಿಕ ದಾಳಿಯ ನಂತರ ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಏರ್ಪಾಡಾಗಿದ್ದು, ತನ್ನಿಮಿತ್ತ ಇಂದು ತುರ್ತು ಸಭೆ ಕರೆಯಲಾಗಿದೆ.
ಅಭೆಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್, ವಾಯುಸೇನೆ ಮುಖಂಡ ಏರ್ ಚೀಫ್ ಮಾರ್ಶಲ್ ಮಿರೆಂದರ್ ಸಿಂಗ್ ಧಾನೊವಾ ಮತ್ತು ನೌಕಾಸೇನೆ ಅಡ್ಮಿರಲ್ ಸುನಿಲ್ ಲಾಂಬಾ ಅವರು ತುರ್ತು ಸಭೆ ನಡೆಸಲಿದ್ದು, ಭಾರತದ ಮುಂದಿನ ನಡೆಯ ಬಗ್ಗೆ ಚರ್ಚಿಸಲಿದ್ದಾರೆ.
ಉಗ್ರನೆಲೆ ಧ್ವಂಸ LIVE: ಭಾರತ-ಪಾಕ್ ಗಡಿಯಲ್ಲಿ ಯುದ್ಧದ ವಾತಾವರಣ
ಭಾರತ ಮಂಗಳವಾರ ಬೆಳಗ್ಗಿನ ಜಾವ ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಉಗ್ರನೆಲೆಯ ಮೇಲೆ ದಾಳಿ ನಡೆಸಿದ ನಂತರ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಭಾರತದ ಮೇಲೆ ದಾಳಿ ನಡೆಸುತ್ತಿದೆ. ಆದರೆ ಭಾರತ ಪಾಕಿಸ್ತಾನೀ ಸೇನೆಯನ್ನು ಗುರಿಯಾಗಿಸದೆ, ಉಗ್ರರನ್ನಷ್ಟೇ ಗುರಿಯಾಗಿಸಿ ಕಾರ್ಯಾಚರಣೆ ನಡೆಸಿತ್ತು.
'ಈಗ ನಿಮ್ಮ ಸರದಿ, ನಮ್ಮ ಅಚ್ಚರಿ ಎದುರಿಸಲು ಸಿದ್ಧರಾಗಿ' : ಪಾಕಿಸ್ತಾನ
ಇಉಭಯ ದೇಶಗಳ ನಡುವೆ ಯುದ್ಧದ ವಾತಾವರಣ ತಲೆದೂರಿದ್ದು ಮುಂದಿನ ಕ್ರಮ ಏನು ಎಂಬುದರ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.